Saturday, November 7, 2009

ಬಿಟಿ ಭಟ್ಟಂಗಿಗಳು ಮತ್ತು ವಾಸ್ತವ

ಹತ್ತಿಯ ಮೂಲಕ ಕೊಟ್ಟಿಗೆ ಪ್ರವೇಶಮಾಡಿದ್ದ ಕುಲಾಂತರಿ ತಳಿ ತಂತ್ರಜ್ಞಾನ ಈಗ ಬದನೆಕಾಯಿ ಮೂಲಕ ಭಾರತೀಯರ ಅಡುಗೆ ಮನೆ ಪ್ರವೇಶಕ್ಕೆ ಕದ ತಟ್ಟುತ್ತಿದೆ. ಬಾಗಿಲು ತೆರೆಯಲು ಇದು ಸಕಾಲವಲ್ಲ ಮುಂದೆ ಹೋಗಿ ಎಂದು ಅರಣ್ಯ ಸಚಿವರು ಹೇಳಿರುವುದರಿಂದ ಬಾಗಿಲ ಪಕ್ಕದಲ್ಲಿ ಕುಳಿತು ಬಿಟಿ ಭೂತ ಕಾಯುತ್ತಿದೆ. ಜೈವಿಕ ತಂತ್ರಜ್ಞಾನ ಒಪ್ಪಿಗೆ ಸಮಿತಿ( GEAC- Genetic Engineering approval Commitee) ಅನುಮತಿ ನೀಡಿರುವುದು ಇದಕ್ಕೆ ಕಾರಣ ರೋಗ ನಿರೋಧಕ ಶಕ್ತಿ, ಹೆಚ್ಚು ಉತ್ಪಾದನೆ, ಹೆಚ್ಚು ಲಾಭ... ಮುಂತಾದ ೧೯೯೦ರಲ್ಲಿ ಊದಿದ್ದ ಹಳೇ ತುತ್ತೂರಿಯನ್ನು ಬಿಟಿ ಭಟ್ಟಂಗಿಗಳು ಮತ್ತೊಮ್ಮೆ ಊದುತ್ತಿದ್ದಾರೆ. ಆದರೆ ಕೇಂದ್ರ ಸರಕಾರ ಅದಕ್ಕೆ ಒಪ್ಪಿಗೆ ನೀಡಿಲ್ಲ. ಆದರೂ ಅವರ ದುರ್ಬೋಧನೆಗೆ ದೇಶದ ನಾಗರಿಕರು ಮತ್ತೊಮ್ಮೆ ಎಚ್ಚರದಿಂದ ಕಿವಿಗೊಡಬೇಕಾಗಿ ಬಂದಿದೆ. ಬಿಟಿ ಹತ್ತಿ ಬೆಳೆಯುವುದರಿಂದ ಲಾಭವಾಗುತ್ತದೆ ಎಂದು ೧೯೯೦ ರಲ್ಲೇ ಹೇಳಿದ್ದರು ಆದರೆ ಯಾರಿಗೆ ಎನ್ನುವುದನ್ನು ಹೇಳಿರಲಿಲ್ಲ. ಇದರಿಂದ ಬೀಜ ಕಂಪನಿಗಳಿಗೆ ಲಾಭವಾಯಿತು. ದೇಶಿ ಬೀಜ ತಳಿಗಳು, ರೈತರು ನಿರ್ನಾಮವಾದರು. ಸತ್ಯ ಅರಿವಾಗಲು ಸುಮಾರು ಎಂಟು ವರ್ಷ ಬೇಕಾಯಿತು. ಕಂಪನಿಗಳ ಬೆಳ್ಳನೆಯ ಮಾತು ನಂಬಿದ ರೈತರು ಯಥೇಚ್ಛವಾಗಿ ಗೊಬ್ಬರ ಸುರಿದು ಬಿಟಿ ಹತ್ತಿ ಬೆಳೆದು ನಿರೀಕ್ಷಿತ ಫಲಬಾರದೆ ಹತಾಶರಾಗಿ ಆತ್ಮ ಹತ್ಯೆಗೆ ಶರಣಾದರು.
ಮಹಾರಾಷ್ಟ್ರದ ವಿದರ್ಭದಲ್ಲಿ ಬಿಟಿ ಹತ್ತಿ ಬೆಳೆದ ರೈತರು ಸಾಲುಸಾಲಾಗಿ ನೇಣು ಬಿಗಿದುಕೊಳ್ಳುತ್ತಿದ್ದಾಗ ಬಿಟಿ ಜನಮಾತನಾಡಲಿಲ್ಲ. ೨೦೦೭ರಲ್ಲಿ ಆಂಧ್ರಪ್ರದೇಶದಲ್ಲಿ ಆತ್ಮಹತ್ಯೆಗೆ ಶರಣಾದ ರೈತರಲ್ಲಿ ಶೇ. ೬೦ ಮಂದಿ ಬಿಟಿ ಹತ್ತಿ ಬೆಳೆಗಾರರು ಎನ್ನುವುದು ರುಜುವಾತಾಯಿತು. ಛತ್ತೀಸ್ಗಢದಲ್ಲಿ ೨೦೦೬ರಲ್ಲಿ ,೪೮೩ ಮಂದಿ ರೈತರು ನೇಣಿನ ಕುಣಿಕೆಗೆ ಕೊರಳೊಡ್ಡಿದರು. ಅವಲ್ಲಿ ಶೇ. ೫೦ ಮಂದಿ ಬಿಟಿ ಹತ್ತಿ ಬೆಳೆದವರು ಮತ್ತು ಸಣ್ಣ ರೈತರು ಎನ್ನುವುದನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾಧ್ಯಮಗಳು ಬಿಂಬಿಸಿದವು. ಆಗ ಬದನೆಕಾಯಿ ಪಂಡಿತರಸೊಲ್ಲಡಗಿಹೋಗಿತ್ತು! ೨೦೦೧ರಲ್ಲಿ ಇದೇ ಬಿಟಿ ಹತ್ತಿ ಬೆಳೆದು ವಿಚಿತ್ರ ರೋಗದಿಂದ ಫಸಲು ಬಾರದೆ ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ರೈತರು ಪರಿತಪಿಸಿದಾಗ ಲಾಭ ಕೋರರುಉಸಿರೆತ್ತಲಿಲ್ಲ. ಇವು ಸ್ಯಾಂಪಲ್ಗಳು. ಉತ್ತರ ಕರ್ನಾಟಕದಲ್ಲಿ ಇಂಥ ಸಾವಿರಾರು ಉದಾಹರಣೆಗಳಿವೆ.
ಬಿಟಿ ಹತ್ತಿ ಬೆಳೆಯಲು ಅನುಮತಿ ನೀಡಿದಾಗಲೇ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಅದರಿಂದ ಆಗಬಹುದಾದ ಅನಾಹುತಗಳು ಏನೆಂಬುದನ್ನು ಅರಿತ ಹಲವಾರು ಸಂಘಟನೆಗಳು, ಕೃಷಿಕರು ವಿರೋಸಿದ್ದರು. ಅದ್ಯಾವುದನ್ನೂ ಪರಿಗಣಿಸದೆ ಅಂದಿನ ಸರಕಾರ ಅನುಮತಿ ನೀಡಿತು. ಅದರ ಪರಿಣಾಮವಾಗಿ ಇಂದು ಯಾವ ರಾಜ್ಯದಲ್ಲಿ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರಕಾರವೇ ವರ್ಷಕ್ಕೊಮ್ಮೆ ಲೆಕ್ಕ ಕೊಡಬೇಕಾದ ದುಃಸ್ಥಿತಿ ಬಂದಿದೆ.
ಉದಾರೀಕರಣ ನೀತಿಯ ಒಂದು ಭಾಗವೇ ಆಗಿರುವ ಬೀಜ ನಿಯಮಗಳಿಂದ ಮುಂದೊಂದು ದಿನ ದೇಶ ಭಾರೀ ಗಂಡಾಂತರ ಎದುರಿಸಬೇಕಾಗುತ್ತದೆ ಎನ್ನುವ ಅರಿವಿರುವುದರಿಂದ ಪ್ರಜ್ಞಾವಂತರು ಎಚ್ಚೆತ್ತುಕೊಂಡಿದ್ದಾರೆ. ಬಹುರಾಷ್ಟ್ರೀಯ ಬೀಜ ಕಂಪನಿಗಳಿಗೆ ಭಾರತ ಪ್ರಯೋಗ ಶಾಲೆಯಾಗಿದೆ, ಇಲ್ಲಿನ ಜನ ಪ್ರಯೋಗಪಶುಗಳಾಗುತ್ತಿದ್ದಾರೆ. ಸರಕಾರಗಳೂ ಅದಕ್ಕೆ ಇಂಬು ಮಾಡಿಕೊಡುತ್ತಿವೆ. ಅದನ್ನು ಅರ್ಥ ಮಾಡಿಕೊಂಡ ಇಲ್ಲಿನ ಕೆಲವುಹೌದಪ್ಪವಿಜ್ಞಾನಿಗಳು ತಲೆ ಹಾಕುತ್ತಿದ್ದಾರೆ, ಹಾಗೆಯೇ ಎಲ್ಲರೂ ತಲೆ ಹಾಕಬೇಕೆಂದು ಪುಸಲಾಯಿಸುತ್ತಿದ್ದಾರೆ. ವಂಚನೆಗೆ ವಿಜ್ಞಾನದ ನುಣುಪಾದ ಶಾಲು ಸುತ್ತಿಕೊಂಡಿದ್ದಾರೆ. ಬಿಟಿ ಆಹಾರದಿಂದ ಯಾವುದೇ ಅಡ್ಡಪರಿಣಾಮವಿಲ್ಲ ಎಂದು ಹೇಳುವವರಿದ್ದಾರೆ. ನಿಜ, ಇವುಗಳಿಂದ ತಕ್ಷಣ ಯಾವುದೇ ಅಡ್ಡಪರಿಣಾಮಗಳು ಬೀರುವುದಿಲ್ಲ. ದೂರಗಾಮಿ ನೆಲೆಯಲ್ಲಿ ತನ್ನ ಕರಾಳ ಮುಖಗಳನ್ನು ಪರಿಚಯಿಸುತ್ತದೆ. ಅಷ್ಟೊತ್ತಿಗೆ ದೇಶದ ಕೃಷಿ ಸಾಮ್ರಾಜ್ಯಶಾಹಿ ಕಂಪನಿಗಳ ಗುಲಾಮಗಿರಿಗೊಳಪಟ್ಟಿರುತ್ತದೆ. ಬಿಟಿ ಬೀಜದ ಯಾವುದೇ ಬೆಳೆಯ ಸೊಪ್ಪು ತಿಂದರೂ ಹಸುಗಳಲ್ಲಿ ಚರ್ಮರೋಗ ಕಾಣಿಸಿಕೊಂಡಿವೆ. ಮನುಷ್ಯರು ಚರ್ಮರೋಗ, ತುರಿಕೆಯಿಂದ ಬಳಲಿದ್ದನ್ನು ಮನಗಂಡು ದಕ್ಷಿಣ ಅಮೆರಿಕ, ಆಫ್ರಿಕದಲ್ಲೂ ತೀವ್ರ ವಿರೋಧ ವ್ಯಕ್ತವಾಗಿದೆ, ಯುರೋಪಿನ ಒಕ್ಕೂಟ ಒಪ್ಪಂದವನ್ನೇ ಮುಂದೂಡಿದೆ. ಆದರೆ ಭಾರತ ಸರಕಾರಕ್ಕೆ ಮಾತ್ರ ಅಂಥ ಧೈರ್ಯವಿಲ್ಲ ಎನ್ನುವುದು ಈಗ ಮತ್ತೊಮ್ಮೆ ದೃಢಪಟ್ಟಿದೆ. ಧೈರ್ಯವಿದ್ದಿದ್ದರೆ ಇಂಥ ಜೀವವಿರೋ ಸಂಶೋಧನೆಗೆ ಅವಕಾಶವನ್ನೇ ನೀಡುತ್ತಿರಲಿಲ್ಲ.
ಅಂದು ಹತ್ತಿಯಿಂದ ದೇಶ ಪ್ರವೇಶ ಮಾಡಿದ ಬಿಟಿ ವಿಷ ಇಂದು ಬದನೆ ಮೂಲಕ ನೇರವಾಗಿ ಭಾರತೀಯರ ದೇಹ ಪ್ರವೇಶಕ್ಕೆ ಮುಂದಾಗಿದೆ. ಇದು ತಂದೊಡ್ಡುವ ಅಪಾಯಗಳನ್ನು ಅರ್ಥಮಾಡಿಕೊಂಡು ರೈತ ದ್ರೋಹಿ ಬೀಜ ಕಂಪನಿಗಳನ್ನು ದೇಶದಿಂದ ಹೊರಗಟ್ಟಬೇಕಾಗಿದೆ. ರೈತರ ಬೀಜದ ಮೇಲಿನ ಹಕ್ಕನ್ನು ನಾಶಮಾಡಲು ಬಿಡದೆ, ಒರಿಸ್ಸಾ, ಕೇರಳ ರಾಜ್ಯಗಳು ತಿರಸ್ಕರಿಸಿವೆ. ಕರ್ನಾಟಕ ಸರಕಾರ ಮಾತ್ರ ಇನ್ನೂ ಪಂಚಾಗ ನೋಡುತ್ತ ಗಳಿಗೆಗಾಗಿ ಕಾಯುತ್ತಿದೆ. ನಿಮ್ಮ ಬಿಟಿಯೂ ಬೇಡ, ಕಾಟವೂ ಬೇಡ. ಹಸಿರು ಕ್ರಾಂತಿಯ ಸಂದರ್ಭದಲ್ಲೆ ನಿಮ್ಮ ನಿಜಬಣ್ಣ ಬಯಲಾಗಿದೆ ಹೊರಟು ಹೋಗಿ ಎಂದು ತಳ್ಳಿದರೂ ಕೆಲವು ದಲ್ಲಾಳಿಗಳು ಮತ್ತೆ ಮತ್ತೆ ರೈತರ ಜಮೀನಿಗೆ ಹೆಜ್ಜೆ ಇಡುತ್ತಿದ್ದಾರೆ. ತಮಗೆ ಗೊತ್ತಿರುವ ವಿಜ್ಞಾನವೇ ಜಗತ್ತಿನ ಜ್ಞಾನ ಎಂದು ಬಿಂಬಿಸಿಕೊಳ್ಳಲು ಕಸರತ್ತು ಆರಂಭಿಸಿದ್ದಾರೆ. ಈಸ್ಟ್ ಇಂಡಿಯಾ ಕಂಪನಿಯೂ ಕೂಡಾ ನಮ್ಮ ದೇಶಕ್ಕೆ ಹೆಜ್ಜೆ ಇಟ್ಟದ್ದು ವ್ಯಾಪಾರ ಮಾಡುವ ನೆಪದಲ್ಲಿ ನಂತರ ಅದು ಏನು ಮಾಡಿತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಈಗ ದೇಶ ಪ್ರವೇಶ ಮಾಡುತ್ತಿರುವ ಬೀಜ ಕಂಪನಿಗಳ ಹುನ್ನಾರಗಳು ಅದಕ್ಕಿಂತ ಭಿನ್ನವಾಗಿಲ್ಲ. ಅಂದು ತಕ್ಕಡಿ ಹಿಡಿಯಲು ಬಂದಿದ್ದವರೇ ಇಂದು ಬೀಜ, ಕೈಗಾರಿಕೆಯ ಮುಖವಾಡ ಧರಿಸಿ ನೆಲ ಹಿಡಿಯಲು ಬರುತ್ತಿದ್ದಾರೆ ಎನ್ನುವುದನ್ನು ಅರಿಯಬೇಕಾಗಿದೆ. ರೈತರನ್ನು ಒಡೆದು ಆಳಲು (ಬ್ರಿಟಿಷರಂತೆ) ಎಲ್ಲ ಸಂಚುಗಳನ್ನೂ ರೂಪಿಸುತ್ತಿದ್ದಾರೆ ಅವನ್ನು ಭಗ್ನಗೊಳಿಸಲು ಒಗ್ಗಟ್ಟು ಪ್ರದರ್ಶಿಸಬೇಕು. ಇದು ಬರೀ ಆಹಾರ, ಕೃಷಿ ಪ್ರಶ್ನೆ ಮಾತ್ರವಲ್ಲ, ದೇಶದ ರೈತರ ಸಾರ್ವಭೌಮತ್ವ, ಸ್ವಾತಂತ್ರ್ಯದ ಪ್ರಶ್ನೆಯೂ ಆಗಿದೆ.
ಸುಳ್ಳುಗಳ ರಾಶಿಯನ್ನು ಭಾರತದಲ್ಲಿ ಸುರಿಯುವುದನ್ನು ಗಮನಿಸಿದರೆ ಜೀವ ವಿಜ್ಞಾನವನ್ನು ಯಾವ ಹಂತಕ್ಕೆ ತಂದು ನಿಲ್ಲಿಸಿದ್ದಾರೆ ಎನ್ನುವ ಅರಿವಾಗುತ್ತದೆ. ವಿಜ್ಞಾನ ಎಲ್ಲವನ್ನೂ ಚಿಕಿತ್ಸಕ ದೃಷ್ಟಿಯಿಂದ ನೋಡಿ ಸರಿ ದಾರಿ ತೋರಬೇಕು. ಆದರೆ ಅದೇ ಕವಲುದಾರಿಯಲ್ಲಿ ನಿಂತಂತೆ ಗೋಚರಿಸುತ್ತಿದೆ. ಕುಲಾಂತರವನ್ನು ಬೀಜ ಭಾಷೆಯಲ್ಲಿವಾಮಾಚಾರಎನ್ನುತ್ತಾರೆ. ಅದನ್ನೇ ವಿಜ್ಞಾನದ ಭಾಷೆಯಲ್ಲಿ ಬೋಸಲಾಗುತ್ತಿದೆ. ಕಂದಾಚಾರ, ವಾಮಾಚಾರಗಳನ್ನು ಬೋಸುವುದು ವಿಜ್ಞಾನದ ಗಿರಿಯೇ?
ಸಾವಯವ ದುಬಾರಿಯಂತೆ!
ಸಾವಯವ ಕೃಷಿ ದುಬಾರಿಯಾಗಿದ್ದು ಇದು ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದಿಲ್ಲ ಎಂದು ಹುಯಿಲೆಬ್ಬಿಸಲಾಗುತ್ತಿದೆ. ಇದರಂಥ ಹಸಿಸುಳ್ಳು ಜಗತ್ತಿನಲ್ಲಿ ಇನ್ನೊಂದಿರಲಾರದು. ಇದನ್ನುಶತಮಾನದ ಸುಳ್ಳುಎಂದು ಹೊಸ ನಾಮಕರಣ ಮಾಡಬೇಕಾಗಿದೆ. ನಮ್ಮ ಮೂಲ ಕೃಷಿಯೇ ಸಹಜ ಮತ್ತು ಸಾವಯವ, ಅದರಲ್ಲೇ ರೈತರು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದರು. ಹಸಿರು ಕ್ರಾಂತಿ ಆರಂಭಕ್ಕೂ ಮುನ್ನ (ರಸಾಯನಿಕ ಕೃಷಿ ಆರಂಭ) ಅದರಲ್ಲೇ ಬದುಕುತ್ತಿದ್ದರು. ಆಗ ಯಾವೊಬ್ಬ ರೈತನೂ ಆತ್ಮಹತ್ಯೆಗೆ ಶರಣಾಗಿಲ್ಲ. ಈಗಿನಂತೆ ನಾನಾ ರೋಗಗಳಿಂದ ಜನ ಬಳಲುತ್ತಿರಲಿಲ್ಲ. ನಾವು ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ ರಾಸಾಯನಿಕ ಕೃಷಿ ಆರಂಭಕ್ಕೂ ಮೊದಲು ಇದ್ದ ರೈತರ ಆತ್ಮಹತ್ಯೆಗೂ ಈಗ ಆಗಿರುವ ವ್ಯತ್ಯಾಸವನ್ನು. ಇಂಥ ಕಟು ವಾಸ್ತವಗಳನ್ನು ಕೆಲವು ಕಂಪನಿಗಳ ಏಜೆಂಟರು ತಿರುಚಿ ತಮ್ಮದೇ ಆದ ಹಸಿ ಸುಳ್ಳಿನ ಸುರುಳಿ ಬಿಚ್ಚುತ್ತಿದ್ದಾರೆ. ಒಂದು ಸತ್ಯವನ್ನು ಮರೆಮಾಚಲು ನೂರಾರು, ಅದನ್ನು ಮರೆ ಮಾಚಲು ಸಾವಿರಾರು ಸುಳ್ಳುಗಳನ್ನು ಜೋಡಿಸುತ್ತಿದ್ದಾರೆ. ಒಟ್ಟಿನಲ್ಲಿ ತಾವೇ ಸೃಷ್ಟಿಸಿಕೊಂಡ ಸುಳ್ಳಿನ ಸುಳಿಯಿಂದ ಹೊರಬರಲಾಗದೆ ತತ್ತರಿಸುತ್ತಿದ್ದಾರೆ.
ರಾಸಾಯನಿಕ ಕೃಷಿಯಿಂದ ಬೇಸತ್ತ ರೈತರು ಸಾವಯವ, ಸಹಜ, ಜೀವಾಮೃತ ಕೃಷಿಯತ್ತ ಗಮನ ಹರಿಸುತ್ತಿದ್ದಾರೆ. ಬಳಕೆದಾರರಲ್ಲೂವಿಷತರಕಾರಿಗಳ ಬಗ್ಗೆ ಅರಿವು ಮೂಡಿದೆ. ಅಲ್ಲದೆ ಸಾವಯವ ಜನಪ್ರಿಯಗೊಳ್ಳುತ್ತಿರುವುದರಿಂದ ಬಂಡವಾಳ ಶಾಹಿ ಕಂಪನಿಗಳಿಗೆ ಕಂಪನವುಂಟಾಗಿದೆ. ತಮ್ಮ ಉತ್ಪನ್ನಗಳ ಮಾರುಕಟ್ಟೆ ಕುಸಿದು ಹೋಗುವ ಆಂತಕ ಎದುರಾಗಿದೆ. ಆದ್ದರಿಂದ ಇದು ಲಾಭದಾಯಕವಲ್ಲ, ಇದರಿಂದ ಅಭಿವೃದ್ಧಿಹೊಂದಲು ಸಾಧ್ಯವಿಲ್ಲ ಎನ್ನುವಂಥ ವಿತಂಡವಾದವನ್ನು ಮಂಡಿಸುತ್ತಿದ್ದಾರೆ. ಈಗಿರುವ ದೇಶಿ ಬೀಜದಿಂದ ಬದನೆ ಬೆಳೆದರೆ ಅದು ಕನಿಷ್ಠ ಎರಡೂವರೆ ತಿಂಗಳು ಸಮೃದ್ಧ ಬೆಳೆ ಕೊಡುತ್ತದೆ. ಆದರೆ ಬಿಟಿ ಬದನೆಗೆ ಅಂಥ ಶಕ್ತಿ ಇಲ್ಲ. ಅದು ಬೆ ಕೊಡುವ ಅವ ತೀರಾ ಕಡಿಮೆ. ನಂತರ ಬೀಜವನ್ನು ಅದರಿಂದ ಸಂಗ್ರಹಿಸುವಂತಿಲ್ಲ. (ಬೀಜವೇ ಇರುವುದಿಲ್ಲ)ಹಾಗೇನಾದರೂ ಮಾಡಿದರೆ ಅದು ಕಂಪನಿ ನಿಯಮದ ಉಲ್ಲಂಘನೆಯಾಗುತ್ತದೆ. ಕಂಪನಿ ಅಂತಾರಾಷ್ಟ್ರೀಯ ನ್ಯಾಯಾಲದಲ್ಲಿ ಮೊಕದಮೆ ದಾಖಲಿಸುತ್ತದೆ ಅಲ್ಲಿ ರೈತರು ಹೋರಾಡಬೇಕಾಗುತ್ತದೆ ಇದು ಸಾಧ್ಯವೆ?
ಅಗತ್ಯವೇನು?
ಬಿಟಿ ಉತ್ಪಾದನೆಯಿಂದ ಭಾರೀ ಲಾಭವಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಇದು ನಿಜವಲ್ಲ ಎಂದು ಗೊತ್ತಿದ್ದರೂ ಒಲ್ಲದ ಮನಸ್ಸಿನಿಂದ ಒಪ್ಪೋಣ. ಆದರೆ ಇದುವರೆಗೂ ನಮ್ಮ ದೇಶದಲ್ಲಿ ಬದನೆ ಕೊರತೆಯೇ ಉಂಟಾಗಿಲ್ಲ. ಜಗತ್ತಿನಲ್ಲೇ ಭಾರತ ಅತಿ ಹೆಚ್ಚು ಬದನೆ ಬೆಳೆಯುವ ದೇಶಗಳಲ್ಲಿ ಎರಡನೇ ಸ್ಥಾನದಲ್ಲಿದೆ. ದೇಶಿ ತಳಿಯಲ್ಲೇ ನಾವು ಉನ್ನತವಾದದ್ದನ್ನು ಸಾಸಿದ್ದೇವೆ. ಆದ್ದರಿಂದ ಕುಲಾಂತರಿ ಅಗತ್ಯವೇನು? ನಮಗೆ ಬೇಕಾಗಿಯೇ ಇಲ್ಲದ ಕುಲಾಂತರಿ ತಂತ್ರಜ್ಞಾನದ ಬದನೆಯನ್ನು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ. ಈಗ ಇದನ್ನು ತಿನ್ನಿ ಎಂದು ಹೇಳುತ್ತಿರುವ ಕಂಪನಿಗಳು ಮುಂದೊಂದು ದಿನ ಇದನ್ನೇ ತಿನ್ನಬೇಕು ಎಂದು ಆಗ್ರಹಿಸಿದರೆ ಆಶ್ಚರ್ಯವಿಲ್ಲ. ನಮ್ಮ ಜುಟ್ಟನ್ನು ಬಂಡವಾಳಿಗರ ಕೈಗೆ ಕೊಡುವ ಮುನ್ನ ಕೊಂಚ ಯೋಚಿಸೋಣ.

Thursday, October 29, 2009

Thursday, October 15, 2009

Wednesday, October 14, 2009

ವೆಚ್ಚ ಕಡಿತವೆಂಬ ಭ್ರಮೆ ಮತ್ತು ವಾಸ್ತವ

ಸರಕಾರಿ ವೆಚ್ಚಕ್ಕೆ ಕಡಿವಾಣ ಹಾಕುವ ಸಂಬಂಧ ಹಲವು ರೀತಿಯ ಚರ್ಚೆ, ತರ್ಕ, ಕುತರ್ಕಗಳು ನಡೆಯುತ್ತಿವೆ. ಇದರ ಫಲಿತಾಂಶ ಧನಾತ್ಮಕವಾಗಿ ಇಲ್ಲವೆ ಋಣಾತ್ಮಕವಾಗಿಯೂ ಬರಬಹುದು ಆದರೆ ಒಂದೇ ಒಂದು ಸಂತೋಷದ ವಿಚಾರವೆಂದರೆ ರಾಜಕೀಯ ನಾಯಕರು ದುಂದು ವೆಚ್ಚ ಮಾಡುತ್ತಿದ್ದಾರೆ ಎನ್ನುವ ಅರಿವು ಮೂಡಿರುವುದು.
ಬಹುಶಃ ಜಗತ್ತಿನ ಯಾವ ದೇಶದ ನಾಯಕರೂ ಖರ್ಚು ಮಾಡಲಾರದಷ್ಟು ಹಣವನ್ನು ನಮ್ಮ ದೇಶದ ನಾಯಕರು ದುಂದುವೆಚ್ಚ ಮಾಡುತ್ತಿದ್ದಾರೆ. ಒಟ್ಟು ಆಡಳಿತ ಯಂತ್ರದ ಖರ್ಚು ಸರಿಸುಮಾರು ಆದಾಯದ ಶೇ. ೨೦ ತಲುಪುತ್ತದೆ. ಅವರ ಮನೆ, ಭದ್ರತೆ, ಸಾರಿಗೆ ಕಾಲಾಳುಗಳು... ಹೀಗೆ ಲೆಕ್ಕ ಮಾಡುತ್ತ ಹೋದರೆ ನಾಯಕರೆನಿಸಿಕೊಂಡವರ ಖರ್ಚಿನ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ದೇಶ ಆರ್ಥಿಕ ಹಿಂಜರಿತದಿಂದ ನಲುಗುತ್ತಿದ್ದರೂ ಖರ್ಚಿನ ಮೇಲೆ ಹಿಡಿತಕ್ಕೆ ಮುಂದಾಗಲಿಲ್ಲ ಆದ್ದರಿಂದ ವೆಚ್ಚ ಲೆಕ್ಕಕ್ಕೆ ಸಿಗದೆ ಬೆಳೆಯುತ್ತ ಹೋಯಿತು. ಒಂದು ವರ್ಷದ ಅವಯಲ್ಲಿ ನಮ್ಮ ನಾಯಕರು ಮಾಡಿದ ಖರ್ಚು ೧೦ ಲಕ್ಷ ಕೋಟಿರೂಪಾಯಿ. ಅದರಲ್ಲಿ ೫.೭೫ ಲಕ್ಷ ಕೋಟಿ ದುಂದುವೆಚ್ಚವಾಗಿದೆ. ಇದು ಉತ್ಪ್ರೇಕ್ಷೆಯ ಮಾತಲ್ಲ ದೇಶದ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರೇ ಬಹಿರಂಗಪಡಿಸಿದ್ದಾರೆ. ಇಂಥ ವೆಚ್ಚಗಳನ್ನು ಬರೀ ತಡೆದರೆ ಸಾಲದು ಸಂಪೂರ್ಣವಾಗಿ ನಿರ್ಬಂದಿಸುವಂಥ ಕಾನೂನುಗಳು ಜಾರಿಯಾಗಬೇಕು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ದೇಶದ ಜನರ ತೆರಿಗೆಹಣ ಕೆಲವರ ಮೋಜಿಗೆ ಖರ್ಚಾಗಿಬಿಡುವ ಸಾಧ್ಯತೆ ಹೆಚ್ಚು.
ಕೋಟೆ ಲೂಟಿಯಾದಮೇಲೆ ದಿಡ್ಡಿಬಾಗಿಲು ಹಾಕಿದಂತೆ ಹತ್ತಾರುವರ್ಷಗಳಿಂದ ಸಾರ್ವಜನಿಕರ ಹಣ ತಿಂದು ಈಗ ಎಚ್ಚರ ಗೊಂಡವರಂತೆ ಎಲ್ಲರೂ ಬಡಬಡಿಸುತ್ತಿದ್ದಾರೆ ಅದಕ್ಕಾಗಿ ವಿಮಾನಗಳಲ್ಲಿ ಬಿಸಿನೆಸ್‌ಕ್ಲಾಸ್‌ಗಳನ್ನು ಬಿಟ್ಟು ಎಕಾನಮಿ ಕ್ಲಾಸ್‌ಗಳಲ್ಲಿ ಓಡಾಡುವ ತಾಲೀಮು ಮಾಡುತ್ತಿದ್ದಾರೆ. ಈ ತಾಲೀಮು ನಿರಾಕರಿಸಿದ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಶಶಿ ಥರೂರಂಥವರು ಸಾಮಾನ್ಯ ದರ್ಜೆಯ ವಿಮಾನಯಾನವನ್ನು ಜಾನುವಾರು ದರ್ಜೆ (ಕ್ಯಾಟ್ಲ್ ಕ್ಲಾಸ್) ಎಂದು ಇಡೀ ದೇಶದ ಮದ್ಯಮ ಮತ್ತು ಮೇಲ್ಮಧ್ಯಮ ವರ್ಗವನ್ನು ಅವಮಾನಿಸಿದ್ದರು. ಅದೇ ಹೊತ್ತಿನಲ್ಲಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ಸೋನಿಯಾ ಗಾಂ, ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಮುಂತಾದವರು ಸಾಮಾನ್ಯ ದರ್ಜೆಯಲ್ಲಿ ಓಡಾಡಿ ಸುದ್ದಿ ಮಾಡಿದ್ದರು. ರಾಹುಲ್‌ಗಾಂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರೈಲಿನಲ್ಲಿ ಪ್ರಯಾಣ ಮಾಡಿದ್ದರು. ಘರೌಂಡಬಳಿ ರಾಹುಲ್ ಇದ್ದ ರೈಲಿನ ಮೇಲೆ ಕೆಲವು ಯುವಕರು ಕಲ್ಲು ತೂರಿ ಗಲಾಟೆಯನ್ನೂ ಮಾಡಿದ್ದರು ಇದರಿಂದ ರಾಹುಲ್‌ಗೆ ಪ್ರಚಾರವೂ ಸಿಕ್ಕಿತು. ವಿಮಾನ ಯಾನಕ್ಕಿಂತ ಖರ್ಚೂ ಹೆಚ್ಚಾಯಿತು. ಒಟ್ಟಾರೆಯಾಗಿ ಭಾರೀ ಸುದ್ದಿಯನ್ನಂತೂ ಮಾಡಿದ್ದರು.
ಇವೆಲ್ಲ ಒಂದು ಹಂತದಲ್ಲಿ ಪ್ರಚಾರವನ್ನೂ ಮತ್ತೆ ಅನುಕಂಪವನ್ನು ಗಿಟ್ಟಿಸಿಕೊಳ್ಳುವ ತಂತ್ರಗಳಾಗಿ ಕಾಣುತ್ತಿವೆಯೇ ಹೊರತು ದುಂದುವೆಚ್ಚ ತಡೆಯಲು ಮಾಡಿದ ಶಾಶ್ವತ ಪರಿಹಾರಗಳಾಗಿ ಅಲ್ಲ. ಕಾರಣ, ಇಲ್ಲಿ ಕೆಲವೇ ಸಾವಿರ ರೂಪಾಯಿಗಳ ಖರ್ಚು ತಡೆಯುವ ನಾಟಕವಾಡುವ ರಾಜಕೀಯ ನಾಯಕರು ತಮ್ಮ ನಿವಾಸಗಳ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ ಅಂಶಗಳು ಬೆಳಕಿಗೆ ಬರುತ್ತವೆ. ಮತ್ತೊಂದೆಡೆ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಬಯಲಾಗುತ್ತದೆ. ಇವೆಲ್ಲವನ್ನು ಗಮನಿಸಿದರೆ ವೆಚ್ಚ ತಡೆಯುವ ಪ್ರಯತ್ನ ಎನ್ನುವುದರ ಸಾಮಾಜಿಕ ಜೀವನದಲ್ಲಿರುವವರು ಆಡಿದ ಬಣ್ಣವಿಲ್ಲದ ನಾಟಕದಂತೆ ಕಾಣುತ್ತದೆ. ಪತ್ರಿಕಾ ಹುಲಿಗಳಾಗಿರುವ ನಮ್ಮ ಕೆಲ ನಾಯಕರು ಒಂದು ತಿಂಗಳ ಸಂಬಳವನ್ನು ಬಿಟ್ಟು ಬಿಡುವುದಾಗಿ ತಿಳಿಸಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ನಮ್ಮ ಮಾಜಿ ಪ್ರಧಾನಿ ತಮ್ಮ ವೇತನದ ಶೇ. ೨೦ರಷ್ಟು ಹಣವನ್ನು ವಾಪಸ್ ನೀಡುವುದಾಗಿ ಘೋಷಣೆ ಮಾಡಿಕೊಂಡರು. ಇಂಥ ಅಗ್ಗದ ಪ್ರಚಾರಗಳಿಗೆ ಮುಂದಾಗುವುದನ್ನು ನೋಡಿದರೆ ಒಂದು ಕಡೆ ನಾಚಿಕೆ ಮತ್ತೊಂದು ಕಡೆ ಮರುಕವುಂಟಾಗುತ್ತದೆ.
ಚುನಾವಣೆಯಲ್ಲಿ ಗೆಲುವೊಂದನ್ನು ಗಮನದಲ್ಲಿಟ್ಟುಕೊಂಡು ವಾಮ ಮಾರ್ಗದಲ್ಲಿ ಕೋಟ್ಯಂತರ ರೂಪಾಯಿ ಚೆಲ್ಲುವವರು ಇಲ್ಲಿ ಕೆಲವೇ ಸಾವಿರ ರೂಪಾಯಿಗಳಿಗೆ ತಮ್ಮ ಜನ್ಮಾಂತರದ ಆಸ್ತಿಯನ್ನು ಬಿಟ್ಟುಕೊಡುವವರಂತೆ ಹೇಳಿಕೆಗಳನ್ನು ಕೊಡುವುದನ್ನು ನೋಡಿದರೆ ನಾಚಿಕೆಯಾಗುತ್ತದೆ. ಉನ್ನತ ನಾಯಕರೆನಿಸಿಕೊಂಡವರು ಸಣ್ಣ ಸಣ್ಣ ಹೇಳಿಕೆಗಳಿಂದ ಮಹಾತ್ಮರಾಗಲು ಯತ್ನಿಸುವುದನ್ನು ನೋಡಿದರೆ ವಿಷಾದವೆನಿಸುತ್ತದೆ.
ದೇಶ ಎಂಥ ಆರ್ಥಿಕ ಸ್ಥಿತಿಯಲ್ಲಿದ್ದರೂ ಶಾಸಕರು, ಸಚಿವರು, ಲೋಕಸಭೆ ಸದಸ್ಯರ ವೇತನ ಹೆಚ್ಚಳಗಳು ನಿಂತಿಲ್ಲ. ಅವು ಕಾಲಕ್ಕೆ ಸರಿಯಾಗಿ ಆಯಾ ಸನ್ನಿವೇಶಕ್ಕೆ ತಕ್ಕಂತೆ ಹೆಚ್ಚುತ್ತಲೇ ಇವೆ. ಅವು ಕಡಿಮೆಯಾದ ಉದಾಹರಣೆಳು ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ತೀರಾ ತೀರಾ ವಿರಳ. ಈ ವರ್ಷ ದೇಶ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ನನ್ನ ಸಂಬಳ ಹೆಚ್ಚಳ ಬೇಡ ಎಂದು ಯಾರಾದರೂ ಹೇಳಿದ್ದರೆ ಪವಾಡವೇ ನಡೆದುಹೋಗುತ್ತಿತ್ತೇನೊ. ದೃಷ್ಟವಶಾತ್ ಯಾರೊಬ್ಬರೂ ಅಂಥ ಪವಾಡಕ್ಕೆ ಮುಂದಾಗಿಲ್ಲ ಎನ್ನುವುದೇ ‘ಸಂತೋಷ’ದ ಸಂಗತಿ.
ನಮ್ಮ ದೇಶದ ನಾಯಕರು ಅನೇಕ ವಿಚಾರಗಳಲ್ಲಿ ಅಮೆರಿಕವನ್ನು ಅನುಕರಿಸಲು ಯತ್ನಿಸುತ್ತಾರೆ. ಅವರ ಆಡಳಿತದಂತೆ ನಾವೂ ಇರಬೇಕು ಎಂದು ಹೇಳುತ್ತಾರೆ. ಆದರೆ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದಲ್ಲಿ ತದ್ವಿರುದ್ಧ ನಡೆಯುತ್ತಾರೆ. ಕೃಷಿಯಲ್ಲಿ ಅಮೆರಿಕದ ರೈತರ ಸಾಲಿನಲ್ಲಿ ಭಾರತೀಯ ರೈತರನ್ನು ನಿಲ್ಲಿಸಿ ನೋಡುವ ಮೊಂಡು, ಹುಂಬು ಪ್ರಯತ್ನಗಳು ಅನೇಕ ವರ್ಷಗಳಿಂದ ನಡೆಯುತ್ತಲೇ ಇವೆ. ಆದರೆ ಅವರ ನಾಯಕತ್ವದ ಸಾಲಿನಲ್ಲಿ ನಾವು ನಿಂತರೆ ಏನಾಗಬಹುದು ಎಂದು ಯಾರೂ ಯೋಚಿಸುತ್ತಿಲ್ಲ.
ಕೆಲಸಕ್ಕೆ ಬಾರದ ವಿಚಾರಗಳಲ್ಲಿ ಅಮೆರಿಕವನ್ನು ಅನುಕರಿಸುವ ಬದಲು ಚುನಾವಣೆಯಂಥ ಅತಿ ದುಂದು ವೆಚ್ಚದ ಕ್ರಿಯೆಗಳಲ್ಲಿ ಅನುಕರಿಸಬೇಕಾಗಿದೆ. ನಾಯಕನ ಸಾಮರ್ಥ್ಯವನ್ನು ಹಣದಿಂದ ಒರೆಗೆ ಹಚ್ಚದೆ ಜನಮಾನಸದ ಪ್ರತಿಕ್ರಿಯೆಗಳಿಂದ ನೋಡುವಂಥ ಕ್ರಿಯೆಗಳಿಗೆ ಭಾರತದಲ್ಲಿ ಅವಕಾಶ ನೀಡಬೇಕಾಗಿದೆ.
ದುಂದು ವೆಚ್ಚಕ್ಕೆ ಕಡಿವಾಣ ಎನ್ನುವ ಬದಲು ಅದಕ್ಕೆ ಅವಕಾಶವೇ ಇಲ್ಲದಂಥ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು. ಇದು ಅಸಾಧ್ಯದ ಮಾತಲ್ಲ ಆದರೆ ಆಳುವವರು ಇದನ್ನು ಒಪ್ಪುತ್ತಿಲ್ಲ. ಬ್ರೆಜಿಲ್‌ನಂಥ ದೇಶ ಇವತ್ತು ಕೃಷಿಯಲ್ಲಿ ಏನೆಲ್ಲಾ ಸಾಧನೆ ಮಾಡಿ ತೋರಿಸಿದೆ ಎಂದರೆ ಅದು ಅಲ್ಲಿನ ನಾಯಕರ ಇಚ್ಛಾ ಶಕ್ತಿಯನ್ನು ತೋರಿಸುತ್ತದೆ. ವೆನಿಜುಯೆಲಾದಂಥ ಚಿಕ್ಕ ದೇಶ ಇವತ್ತು ಜಗತ್ತಿಗೆ ತನ್ನನ್ನು ತಾನು ಬಿಂಬಿಸಿಕೊಳ್ಳಲು ಹವಣಿಸುತ್ತಿದೆ. ಬೊಲಿವಿಯಾದಂಥ ಸಣ್ಣ ದೇಶ ಶ್ರೀಮಂತ ದೇಶಗಳ ಆರ್ಥಿಕ ದಿಗ್ಬಂಧನದಂಥ ದಬ್ಬಾಳಿಕೆಗಳಿಂದ ಹೊರಬಂದು ಸ್ವಾಭಿಮಾನದಿಂದ ತಲೆ ಎತ್ತುತ್ತಿದೆ. ಅದೇರೀತಿ ಸಣ್ಣಪುಟ್ಟ ದೇಶಗಳು ತಮ್ಮನ್ನು ಹಾಗೇ ಬಿಂಬಿಸಿಕೊಳ್ಳುತ್ತವೆ. ಜಗತ್ತಿನ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಭಾರತಕ್ಕೆ ಅದು ಸಾಧ್ಯವಾಗುತ್ತಿಲ್ಲ ಎಂದರೆ ನಾಚಿಕೆಪಡುವಂಥ ವಿಚಾರ.
ಬ್ರೆಜಿಲ್‌ನ ಅಧ್ಯಕ್ಷ ಲೂಲಾ ಡಿ-ಸಿಲ್ವಾ ಅಕಾರಕ್ಕೆ ಬರುತ್ತಿದ್ದಂತೆಯೇ ಮೊದಲು ಮಾಡಿದ್ದು ಅನಗತ್ಯ ಖರ್ಚುಗಳ ತಡೆ. ಹಾಗೆಯೇ ಅಧ್ಯಕ್ಷರ ಹೆಸರಿನಲ್ಲಿ ಸರಕಾರದ ಖಜಾನೆಯಿಂದ ಸಂದಾಯವಾಗುತ್ತಿದ್ದ ಭಾರಿ ವೇತನ ಮೊಟಕು. ಇದು ಅಧ್ಯಕ್ಷರಿಗೆ ಅನ್ವಯವಾದ ಮೇಲೆ ಎಲ್ಲರಿಗೂ ಅನ್ವಯ ಎಂದು ಬಹುತೇಕರು ತಮ್ಮ ವೇತನವನ್ನು ತಾವೇ ಕಡಿತಗೊಳಿಸಿಕೊಂಡರು. ವೆನಿಜುಯೆಲಾ ದೇಶದ ಅಧ್ಯಕ್ಷರಾಗಿರುವ ಹ್ಯೂಗೊ ಚಾವೆಜ್ ಕೂಡಾ ಅಂಥ ನಿರ್ಧಾರಗಳನ್ನು ಕೈಗೊಂಡರು. ಬೊಲಿವಿಯಾ ದೇಶದ ಅಧ್ಯಕ್ಷರಾಗಿರುವ ಏವೊ ಮೊರಾಲಸ್ ಕೂಡಾ ತಮ್ಮ ವೇತನವನ್ನು ತುಂಬಾ ಕಡಿಮೆ ಮಾಡಿಕೊಂಡರು. ಅದಕ್ಕೆ ಅವರು ಒಂದು ಕಾರಣ ಕೊಟ್ಟಿದ್ದರು. ‘ದೇಶ ನನಗೆ ಓಡಾಡಲು ಕಾರು ನೀಡಿದೆ. ರಕ್ಷಕರನ್ನು ನೀಡಿದೆ. ಮಲಗಲು ಬಂಗಲೆ ನೀಡಿದೆ. ಇವೇ ಮನುಷ್ಯನ ಅಗತ್ಯಗಳು ಅವೆಲ್ಲವನ್ನೂ ಪಡೆದಮೇಲೂ ಅಗತ್ಯಕ್ಕಿಂತ ಹೆಚ್ಚು ವೇತನ ಪಡೆಯುವುದು ಆತ್ಮಹೀನ ಕೃತ್ಯ. ಇಷ್ಟೊಂದು ವೇತನ ನನಗೆ ಬೇಡ, ಅತಿ ಕಡಿಮೆ ಖರ್ಚಿನ ಜೀವನಕ್ಕೆ ಸಾಕಾಗುವಷ್ಟು ಹಣ ಸಾಕು’ ಎಂದು ಸ್ವಲ್ಪ ಹಣವನ್ನು ಮಾತ್ರ ಪಡೆಯುತ್ತಿದ್ದಾರೆ ಉಳಿದದ್ದನ್ನು ಸರಕಾರಿ ಖಜಾನೆಗೆ ಹಿಂತಿರುಗಿಸಿದ್ದಾರೆ. ಒಂದು ಕಡೆ ಅವರು ಹೀಗೆ ಹೇಳಿಕೊಂಡಿದ್ದಾರೆ ‘ಜನರು ತಮ್ಮ ಅನೇಕ ಕನಸುಗಳನ್ನು ಈಡೇರಿಸುವ ಆಶಾಕಿರಣಗಳಾಗಿ ನಮ್ಮನ್ನು ನೋಡುತ್ತಿದ್ದಾರೆ. ಆ ನಂಬಿಕೆ ಉಳಿಸಿಕೊಳ್ಳುವುದು ಮತ್ತು ಅವರ ಆಸೆಗಳನ್ನು ಈಡೇರಿಸಲು ಪ್ರಾಮಾಣಿಕರಾಗಿ ದುಡಿಯುವುದು ನಮ್ಮ ಆಧ್ಯ ಕರ್ತವ್ಯ. ಅದನ್ನು ನೆನಪಿನಲ್ಲಿಟ್ಟುಕೊಂಡು ನಡೆಯದೆ ದುಂದುವೆಚ್ಚಕ್ಕೆ ಮತ್ತು ಸ್ವಜನಪಕ್ಷಪಾತಕ್ಕೆ ಅವಕಾಶ ನೀಡಿದರೆ ಜನರ ನಿರೀಕ್ಷೆಗಳು ಮಾತ್ರ ಹುಸುಯಾಗುವುದಿಲ್ಲ ಆತ್ಮವಂಚನೆಯಾಗುತ್ತದೆ’ ಎಂದಿದ್ದಾರೆ. ಅವರ ಸಹವರ್ತಿಗಳೂ ಅದೇ ಸಿದ್ಧಾಂತವನ್ನು ಒಪಿಕೊಂಡು ಸಂಸದರ ಹೆಸರಿನಲ್ಲಿ ಸಂದಾಯವಾಗುತ್ತಿದ್ದ ವೇತನವನ್ನು ಪ್ರಥಮ ದರ್ಜೆ ಗುಮಾಸ್ತನಿಗೆ ದೊರೆಯಬಹುದಾದಷ್ಟನ್ನು ಮಾತ್ರ ಪಡೆಯುತ್ತಿದ್ದಾರೆ. ೨೦೦೫ರಿಂದ ಇಲ್ಲಿಯವರೆಗೆ ತಮ್ಮ ವೇತನ ಹೆಚ್ಚಿಸಿಕೊಳ್ಳುವ ಬಗ್ಗೆ ಪ್ರಸ್ತಾಪಿಸಿಲ್ಲ. ಆದ್ದರಿಂದ ಇಂಥ ಆರ್ಥಿಕ ಹಿಂಜರಿತದಲ್ಲೂ ಆ ದೇಶ ತನ್ನ ಶಕ್ತಿಯನ್ನು ಕಾಯ್ದುಕೊಂಡು ನಿಂತಿದೆ. ಅತೀ ಹಿಂದುಳಿದ ದೇಶ ಎನ್ನುವ ಹಣೆಪಟ್ಟಿ ಕಳಚಿಕೊಳ್ಳುತ್ತಿದೆ. ಇಂಥ ಕ್ರಮಗಳು ಈಗ ಭಾರತಕ್ಕೂ ಅನಿವಾರ್ಯವಾಗಿವೆ. ನಮ್ಮ ನಾಯಕರುಗಳಲ್ಲಿ ತುಂಬಿ ತುಳುಕುತ್ತಿರುವ ಸ್ವಾರ್ಥ ಈ ರೀತಿಯ ಕ್ರಮಗಳಿಗೆ ಮುಂದಾಗಲು ಬಿಡುತ್ತಿಲ್ಲ.
ನಾಯಕರಾದವರಿಗೆ ಮೊದಲು ದೇಶ ಮತ್ತು ಅದರ ಸುಂದರ ಭವಿಷ್ಯ ಕಾಣಬೇಕು. ನಮ್ಮಲ್ಲಿ ಹಾಗಾಗುತ್ತಿಲ್ಲ ಸ್ವಾರ್ಥ, ಮಕ್ಕಳು, ಮೊಮ್ಮಕ್ಕಳು ಮತ್ತು ಮುಂದಿನ ಹತ್ತು ತಲೆಮಾರುಗಳು ಕಾಣುತ್ತಿವೆ. ಇದರಿಂದ ನಿಸ್ವಾರ್ಥ ಸೇವೆ ಎನ್ನುವುದು ವೇದಿಕೆಯ ಭಾಷಣಗಳಿಗೆ ಸೀಮಿತವಾಗುತ್ತಿದೆ. ಆದ್ದರಿಂದ ವೆಚ್ಚ ಕಡಿತ ಎನ್ನುವ ಗಂಭೀರ ವಿಚಾರ ಕೂಡ ನಗೆಪಾಟಲಿಗೆ ಒಳಗಾಗುತ್ತಿದೆ. ಎಚ್ಚಕ್ಕೆ ಕಡಿವಾಣ ಎನ್ನುವುದು ಸಾರ್ವಜನಿಕರಲ್ಲಿ ಭ್ರಮೆ ತುಂಬುವ ಪ್ರಯತ್ನವಾಗದೆ ವಾಸ್ತವಕ್ಕಿಳಿಯಬೇಕು. ದುಂದುವೆಚ್ಚ ನಿಲ್ಲಲು ರಾಜಕೀಯನಾಯಕರು ಈಗ ಪಡೆಯುತ್ತಿರುವ ವೇತನವನ್ನು ಶೇಕಡಾ ೫೦ರಷ್ಟು ಕಡಿಮೆ ಮಾಡಿಕೊಳ್ಳಲಿ.

Monday, October 12, 2009

ನೀರಲ್ಲೇ ನಿಲ್ಲಲಾಗದ ಸ್ಥಿತಿಯಲ್ಲಿ...

‘ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ’ ಎಂಬ ಗಾದೆ ಮಾತೊಂದಿದೆ. ಬಹುಶಃ ಆಧುನಿಕ ಜಗತ್ತು ಕೆಲವು ಸಂದರ್ಭಗಳಲ್ಲಿ ಈ ಮಾತನ್ನು ಸುಳ್ಳುಮಾಡಿದೆ ಎನ್ನುವುದು ನನ್ನ ಅಭಿಪ್ರಾಯ. ಕಾರಣ, ‘ಹರಿಯೋ ನೀರಿಗೆ ದೊಣ್ಣೆನಾಯಕನ ಅಪ್ಪಣೆಯೇ’ ಎನ್ನುವ ಗಾದೆ ಮಾತು ನಮ್ಮಲ್ಲಿ ಚಾಲ್ತಿಯಲ್ಲಿದೆ ಆದರೆ ಈ ಮಾತು ಈಗ ಸುಳ್ಳಾಗಿದೆ ಎನಿಸತೊಡಗಿದೆ. ಇದನ್ನು ಕೆಲವರು ಒಪ್ಪಬಹುದು ಒಪ್ಪದೆಯೂ ಇರಬಹುದು. ಹರಿಯೋ ನೀರಿಗೆ ದೊಣ್ಣೆನಾಯಕನ ಅಪ್ಪಣೆಯೇ ಎಂದು ಕೇಳಿದರೆ ಈಗ ಹೌದು ಎನ್ನುವ ಕಾಲ ಬಂದಿದೆ. ಜಾಗತೀಕರಣದ ಒಂದು ಭಾಗವಾದ ಖಾಸಗೀಕರಣ. ಇದರಿಂದ ಹರಿಯುವ ನೀರು, ಬೀಸುವಗಾಳಿ, ನಿಂತ ನೆಲ, ನಮ್ಮ ದೇಶಿ ಸಂಸ್ಕೃತಿ ಎಲ್ಲವೂ ವ್ಯಾಪಾರದ ಸರಕುಗಳಾಗಿವೆ. ಒಟ್ಟು ಭೂ ಮಂಡಲದ ಎರಡನೇ ಮೂರು ಭಾಗ ಸಾಗರದಿಂದ ಆವೃತವಾಗಿದೆ (ಶೇ. ೭೧ ಭಾಗ) ಆದರೂ ಸಾಗರದ ತಾಪಮಾನ ಶೇ. ೫೦ ರ ಪ್ರಮಾಣದಲ್ಲಿ ಹೆಚ್ಚುತ್ತಿದೆ. ನೀರೇ ಆವರಿಸಿದ್ದರೂ ಇಡೀ ಜಗತ್ತು ನೀರಿನ ಸಮಸ್ಯೆ ಎದುರಿಸುತ್ತಿದೆ ಇದೇ ಮನುಷ್ಯ ಮತ್ತು ಪ್ರಕೃತಿಯ ನಡುವೆ ಏರ್ಪಟ್ಟಿರುವ ಸಂಬಂಧ ಮತ್ತು ಸಂಘರ್ಷದ ಕೊಂಡಿ.
ಆಹಾರವಿಲ್ಲದೆ ಮನುಷ್ಯ ಬದುಕಲಾರ ಎಂದು ನಾವು ಹೇಗೆ ಸರಳವಾಗಿ ಹೇಳಿ ಬಿಡುತ್ತೇವೆಯೋ ಹಾಗೆಯೇ ನೀರು, ಗಾಳಿ ಇಲ್ಲದೆಯೂ ಬದುಕಲಾರ. ಆದರೂ ನಾವು ನಿಂತ ನೆಲವನ್ನು, ಕುಡಿಯುವ ನೀರನ್ನು ಉಸಿರಾಡುವ ಗಾಳಿಯನ್ನು ಕಲುಷಿತಗೊಳಿಸಿದ್ದೇವೆ ಅದನ್ನು ಶುದ್ಧಗೊಳಿಸಲು ಈಗ ಹರಸಾಹಸ ಮಾಡುತ್ತಿದ್ದೇವೆ. ಕುಡಿಯುವ ನೀರಿಗಾಗಿ ಈಗ ನದಿ ಜೋಡಣೆಯಂಥ ಭಾರೀ ವೆಚ್ಚದ ಯೋಜನೆಗೆ ಚರ್ಚೆ ನಡೆಯುತ್ತಿವೆ. ನದಿಯ ದಿಕ್ಕುಗಳನ್ನೇ ಬದಲಿಸುವ, ಅದರಿಂದ ಎಲ್ಲರಿಗೂ ನೀರು ನೀಡುವ ಇದು ಈಗ ಬೇಕು ಬೇಡಗಳ ವಿಷಯವಾಗಿದೆ.
ಜನಸಂಖ್ಯೆ ಬೆಳವಣಿಗೆಯಿಂದ ನೀರು ಮತ್ತು ಆಹಾರಕ್ಕಾಗಿ ನದಿ ಜೋಡಣೆ ಅನಿವಾರ್ಯವೆಂದು ಹೇಳಲಾಗುತ್ತದೆಯಾದರೂ ಈ ಕ್ರಮದಿಂದ ನದಿ ಪಾತ್ರಗಳೇ ಬತ್ತಿಹೋಗುವ ಅಪಾಯವನ್ನೂ ಪರಿಗಣಿಸಬೇಕು. ಪ್ರಕೃತಿ ಸಂಪತ್ತು ಮುಗಿದು ಹೋಗದಂತೆ ಕಾಯ್ದುಕೊಂಡರೆ ಮುಂದಿನ ತಲೆಮಾರು ಉಸಿರಾಡುತ್ತದೆ ಇಲ್ಲವಾದರೆ ಭವಿಷ್ಯ ಭಯಾನಕವಾಗುತ್ತದೆ ಎಂಬ ಎಚ್ಚರ ಅತ್ಯಗತ್ಯ. ಪ್ರಕೃತಿ ಮನುಷ್ಯನ ಆಸೆಗಳನ್ನು ತೀರಿಸುವಷ್ಟು ಶಕ್ತವಾಗಿದೆಯೇ ಹೊರತು ದುರಾಸೆಗಳನ್ನಲ್ಲ ಆದ್ದರಿಂದ ನದಿ ಜೋಡಣೆ ಕ್ರಮ ಎನ್ನುವುದು ದುರಾಶೆಯ ಫಲದಂತೆ ಗೋಚರಿಸುತ್ತಿದೆ. ವಿಜ್ಞಾನಿಗಳು, ಪರಿಸರವಾದಿಗಳು, ತಂತ್ರಜ್ಞರು ಈ ಯೋಜನೆಯನ್ನು ತೀವ್ರವಾಗಿ ವಿರೋಸುತ್ತಲೇ ಬಂದಿದ್ದಾರೆ.
ಅಲ್ಲಲ್ಲಿ ಡ್ಯಾಂಗಳನ್ನು ನಿರ್ಮಿಸಿದ್ದರಿಂದ ಕೆಲವು ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಅರಣ್ಯ ಮುಳುಗಡೆಯೇ ಇದಕ್ಕೆ ಮುಖ್ಯ ಕಾರಣ ಎಂದು ಪರಿಸರ ವಿಜ್ಞಾನಿಗಳು ಹೇಳುತ್ತಿದ್ದಾರೆ. ಆದರೂ ಅಣೆಕಟ್ಟು ಕಟ್ಟುವ ಯೋಜನೆಗಳು ನಡೆಯುತ್ತಲೇ ಇವೆ. ಮಳೆಗಾಲದಲ್ಲಿ ಉತ್ತರ ಭಾರತದ ಕೆಲವು ನದಿಗಳಲ್ಲಿ ಪ್ರವಾಹ ಬಂದು ಅನೇಕ ನಗರಗಳಿಗೆ ನೀರು ನುಗ್ಗಿ ಪ್ರಾಣ, ಆಸ್ತಿ ಹನಿ ಸಂಬವಿಸುತ್ತಿದೆ ಆದ್ದರಿಂದ ಅವುಗಳನ್ನೆಲ್ಲ ಜೋಡಿಸಿದರೆ ದಕ್ಷಿಣ ಭಾಗದ ಒಣ ಭೂಮಿ ಹಸಿರಾಗುತ್ತಿದೆ ಎಂದರೂ ಹೇಳಿದಷ್ಟು ಸುಲಭವಾಗಿಲ್ಲ ಈ ಕಾರ್ಯ.
ನಮ್ಮ ಸಂಸ್ಕೃತಿಯಲ್ಲಿ ನದಿಗಳಿಗೆ ಪೂಜ್ಯ ಸ್ಥಾನವಿದೆ. ಅವು ನಮಗೆ ನೀರೊದಗಿಸುವ ಕಾಲುವೆಗಳು ಮಾತ್ರವಲ್ಲ, ಅಥವಾ ಮಳೆನೀರನ್ನು ಸಂಗ್ರಹಿಸಿ ಸಮುದ್ರಕ್ಕೆ ತಲುಪಿಸುವ ಯಂತ್ರಗಳೂ ಅಲ್ಲ. ನದಿಗಳು ನಮ್ಮ ನಾಗರಿಕತೆಯ ತೊಟ್ಟಿಲುಗಳು. ಚರಿತ್ರೆ ಪುರಾಣಗಳನ್ನು ತೆಗೆದುನೋಡಿದರೆ ಸಿಂದೂ ನಾಗರಿಕತೆಯಿಂದ ಇಲ್ಲಿಯವರೆಗೆ ಬೆಳೆದುಬಂದ ಎಲ್ಲ ನಾಗರಿಕತೆಯ ಚರಿತ್ರೆಯೂ ನದಿಗಳ ದಡದಲ್ಲೇ ತೆರೆದುಕೊಳ್ಳುತ್ತದೆ. ಆದ್ದರಿಂದ ಈ ನದಿಗಳ ದಿಕ್ಕು ಬದಲಿಸುವುದು ಎಂದರೆ ನಾಗರಿಕತೆಯ ದಿಕ್ಕು ಬದಲಿಸುವುದು ಎಂದೇ ಭಾವಿಸಬೇಕು. ನದಿ ಜೋಡಣೆಯಿಂದಾಗುವ ಲಾಭದ ಬಗ್ಗೆ ಮಾತ್ರ ಸರ್ಕಾರಗಳು ಜನರಿಗೆ ತಿಳಿಸುತ್ತವೆ ಆದರೆ ಅದರಿಂದಾಗುವ ಅಪಾಯಗಳನ್ನು ಕುರಿತು ಉಸಿರೆತ್ತುತ್ತಿಲ್ಲ. ಯಾವುದೇ ಬೃಹತ್ ಯೋಜನೆಗಳಿಂದಲೂ ಅನ್ಯಾಯಕ್ಕೊಳಗಾಗುವವರು ಜನಸಾಮಾನ್ಯರೆ ಆದ್ದರಿಂದ ಸರ್ಕಾರ ಇಂಥ ವಿಚಾರಗಳಲ್ಲೂ ತಪ್ಪು ಮಾಹಿತಿ ಅಥವಾ ಅರ್ಧಮಾಹಿತಿ ನೀಡುವಂಥ ನೀಚ ಕೃತ್ಯಕ್ಕೆ ಮುಂದಾದ ನೂರಾರು ಉದಾಹರಣೆಗಳಿವೆ.
ಮಾಹಿತಿ ಮುಚ್ಚಿಡುವ ಸರ್ಕಾರಗಳು:
ಹಿರಾಕುಡ್ ಅಣೆಕಟ್ಟು ನಿರ್ಮಿಸಿದಾಗ ಸರ್ಕಾರದ ದಾಖಲೆಗಳಲ್ಲಿ ನಮೂದಾದ ನಿರಾಶ್ರಿತರ ಸಂಖ್ಯೆ ೧.೧ ಲಕ್ಷ. ವಾಸ್ತವದಲ್ಲಿ ಸ್ಥಳಾಂತರಗೊಂಡವರು ೧.೮ ಲಕ್ಷ ಜನ. ಅಂದರೆ ೭೦ ಸಾವಿರ ಜನರ ಬಗ್ಗೆ ಸರ್ಕಾರ ಸುಳ್ಳು ಮಾಹಿತಿ ನೀಡಿತ್ತು. ಪಶ್ಚಿಮ ಮಧ್ಯಪ್ರದೇಶದಲ್ಲಿ ನರ್ಮದಾ ನದಿಗೆ ನಿರ್ಮಿಸಲಾದ ಬಾರ್ಗಿ ಜಲಾಶಯದ ಜಾಗದಲ್ಲಿ ಮುಳುಗಡೆಯಾದ ಹಳ್ಳಿಗಳ ಸಂಖ್ಯೆ ೧೬೨ ಆದರೆ ಸರ್ಕಾರ ಹೇಳಿದ್ದು ಕೇವಲ ೧೦೦. ಇಲ್ಲಿ ೬೨ ಹಳ್ಳಿಗಳನ್ನು ಸರಕಾರದ ದಾಖಲೆಗಳು ನುಂಗಿ ಹಾಕಿದ್ದವು. ಇವು ಮೇಲ್ನೋಟಕ್ಕೆ ಸಿಗುವ ಅಂಕಿ ಅಂಶಗಳು ಹಳ್ಳಿಗಳ ಜನ- ಜಾನುವಾರು ವಸತಿಗಳ ಬಗ್ಗೆ ಮಾಹಿತಿ ಸಿಗುವುದಿಲ್ಲ. ಮುಳುಗಿ ಹೋಗುವ ಅರಣ್ಯ,ಫಲವತ್ತಾದ ಕೃಷಿ ಭೂಮಿ. ಬೆಳೆ ಇಲ್ಲದೆ ದೇಶದ ಆಹಾರ ಭದ್ರತೆಮೇಲೆ ಬೀರಿದ ಪರಿಣಾಮ ಮುಂತಾದವುಗಳು ಇಲ್ಲಿ ಚರ್ಚಿತ ವಿಷಯವೇ ಆಗುವುದಿಲ್ಲ. ೧೯೮೦ ರಲ್ಲಿ ನರ್ಮದಾ ನದಿಗೆ ಸರ್ದಾರ್ ಸರೋವರ ಅಣೆಕಟ್ಟೆ ಕಟ್ಟಲು ಯೋಜನೆ ರೂಪಿಸಲಾಯಿತು. ಇದರಿಂದ ೫೦ ಲಕ್ಷ ಎಕರೆ ಭೂಮಿಗೆ ನೀರು, ೧೪೫೦ ಮೆಗಾ ವ್ಯಾಟ್ ವಿದ್ಯುತ್, ೮೦೦ ಹಳ್ಳಿ ಮತ್ತು ೧೩೫ ಪಟ್ಟಣಗಳಿಗೆ ಕುಡಿಯುವ ನೀರೊದಗಿಸುವ ಉದ್ದೇಶ ಸರಕಾರದ್ದು. ಇದು ೯೧, ಸಾವಿರ ಎಕರೆ ಕೃಷಿ ಭೂಮಿಯನ್ನು ಮುಳುಗಿಸಿತು ಜತೆಗೆ ೨೮,೦೦೦ ಎಕರೆ ಕಾಡನ್ನೂ ನುಂಗಿತು. ಇದರಿಂದ ಒಂದು ಮಿಲಿಯನ್ ಜನರು ಅನಿವಾರ್ಯವಾಗಿ ಸ್ಥಳಾಂತರಗೊಳ್ಳುತ್ತಾರೆ. ಮಧ್ಯ ಪ್ರದೇಶದ ಪೂರ್ವ ನಿಮಾರ್‌ನಲ್ಲಿ ಇದೇ ನದಿಗೆ ‘ನರ್ಮದಾ ಸಾಗರ್’ ಅಣೆಕಟ್ಟು ನಿರ್ಮಿಸಲಾಗುತ್ತಿದೆ ಇದರಿಂದಲೂ ಕೂಡ ೨೪೯ ಹಳ್ಳಿಗಳನ್ನು ಮುಳುಗಿಸಿ ೪೦ ಸಾವಿರ ಕುಟುಂಬಗಳನ್ನು ಹೊರಹಾಕುತ್ತದೆ ಇವೆಲ್ಲವನ್ನೂ ಅಭಿವೃದ್ಧಿ ಎಂದು ವ್ಯಾಖ್ಯಾನಿಸುವವರು ಅದರ ಸಾಧಕ ಬಾಧಕಗಳನ್ನು ಕುರಿತು ಗಂಭೀರ ಚರ್ಚೆ ಮಾಡಬೇಕು. ಹಳ್ಳಿಗಳ ಪಲ್ಲಟ ಎಂದರೆ ಒಂದು ಭಾವನಾತ್ಮಕ ಬದುಕಿನ ಪಲ್ಲಟ, ಪರಂಪರೆಯ ಪಲ್ಲಟ. ಇಂಥ ಸಂದರ್ಭಗಳಲ್ಲಿ ನಮ್ಮ ಪುನರ್ವಸತಿ ನೀತಿಯನ್ನು ಸರಿಮಾಡಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಸರಕಾರ ವಸತಿ ಕಿತ್ತುಕೊಂಡು ಬಡವರನ್ನು ಬಯಲಿನಲ್ಲಿ ನಿಲ್ಲಿಸಿದಂತಾಗುತ್ತದೆ.
ಇವೆಲ್ಲವುಗಳನ್ನು ಇಲ್ಲಿ ಪ್ರಸ್ತಾಪಿಸಿದ್ದಕ್ಕೆ ಕಾರಣ ಅಣೆಕಟ್ಟುಗಳನ್ನು ನಿರ್ಮಿಸುವಾಗಲೇ ಇಷ್ಟೊಂದು ಅವಘಡಗಳು ಸಂಭವಿಸುತ್ತವೆ. ಅಂದರೆ ನದಿ ಜೋಡಣೆಯಂಥ ಭಾರೀ ಯೋಜನೆಗಳನ್ನು ಸರಕಾರಗಳು ಕೈಗೆತ್ತಿಕೊಂಡರೆ ನಡೆಯುವ ಜನಪಲ್ಲಟಗಳು ಹೇಗಿರುತ್ತವೆ ಎಂಬುದನ್ನು ಊಹಿಸಲೂ ಅಸಾಧ್ಯ. ಅದೂ ಅಲ್ಲದೆ ಭಾರತದಂಥ ಬಡವರಿಂದ ತುಂಬಿರುವ ದೇಶದಲ್ಲಿ ಈಗಾಗಲೇ ವಸತಿ ಸಮಸ್ಯೆ ಕಾಡುತ್ತಿದೆ. ಕೈಗಾರಿಕೆಯಿಂದ ಸ್ಥಳಾಂತರಗೊಳ್ಳುತ್ತಿರುವ ಜನರಿಗೇ ಪುನರ್‌ವಸತಿ ಕಲ್ಪಿಸಲಾಗದೇ ಘರ್ಷಣೆಗಳು ನಡೆದಿವೆ ಅಂದರೆ ನದಿಜೋಡಣೆಯಿಂದಾಗುವ ಅಲ್ಲೋಲ ಕಲ್ಲೋಲಗಳನ್ನು ಗಂಭೀರವಾಗಿ ಯೋಚಿಸಬೇಕಾಗಿದೆ.
ಆರ್ಥಿಕ ಸವಾಲುಗಳು:
೨೦೦೨ರಲ್ಲಿ ಈ ನದಿ ಜೋಡಣೆ ಯೋಜನೆಗೆ ೫,೬೦,೦೦೦ ಕೋಟಿ ರೂ.ಗಳು ಎಂದು ಅಂದಾಜು ಮಾಡಲಾಗಿತ್ತು. ಅಂದರೆ ೧೧೨ ಶತಕೋಟಿ ಅಮೆರಿಕನ್ ಡಾಲರ್‌ಗಳು. ಸಾಮಾನ್ಯವಾಗಿ ನಮ್ಮ ಯೋಜನೆಗಳು ಯಾವಾಗಲೂ ಮೊದಲ ಅಂದಾಜಿನ ಹಣದಲ್ಲಿ ಮುಗಿಯುವುದಿಲ್ಲ, ಹಾಗೆ ಮುಗಿದ ಉದಾಹರಣೆಗಳೂ ಇಲ್ಲ. ಅದು ಮುಗಿಯುವ ಹೊತ್ತಿಗೆ ೨೦೦ ಶತಕೋಟಿ ಡಾಲರ್‌ಗಳಾಗಬಹುದು ಅಥವಾ ಅದನ್ನೂ ದಾಟಬಹುದು ಎಂದು ಹೇಳಲಾಗಿತ್ತು. ಈ ಯೋಜನೆಯ ವೆಚ್ಚದ ಅಂದಾಜುಪಟ್ಟಿ ತಯಾರಿಸಿ ಎಂಟು ವರ್ಷಗಳು ಮುಗಿಯುತ್ತ ಬಂದಿದ್ದರಿಂದ ಅದರ ವೆಚ್ಚ ೪೦೦ ಶತಕೋಟಿ ಡಾಲರ್ ತಲುಪಬಹುದು ಎನ್ನಲಾಗುತ್ತಿದೆ. ಇದು ಅಕ್ಷರಸ್ಥರೆನಿಸಿಕೊಂಡವರು ಮಾತ್ರವಲ್ಲ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರೆನಿಸಿಕೊಂಡವರೂ ಅಂಕಿಯಲ್ಲಿ ಬರೆದು ತೋರಿಸಲು ಹೆಣಗಬಹುದು. ಯೋಜನೆ ಮುಗಿಯುವ ಹೊತ್ತಿಗೆ.....?! ಒಂದುಕಡೆ ಏರುತ್ತಿರುವ ಜನಸಂಖ್ಯೆಗೆ ಆಹಾರ ವೊದಗಿಸುವುದೇ ಭಾರತಕ್ಕೆ ಸವಾಲಾಗಿ ಪರಿಣಮಿಸಿದೆ. ದೇಶಾದ್ಯಂತ ನೂರಾರು ಯೋಜನೆಗಳು ಅರ್ಥಕ್ಕೇ ನಿಂತಿವೆ. ಇದರ ನಡುವೆ ಅತೀವೃಷ್ಟಿ, ಅನಾವೃಷ್ಟಿ ಮತ್ತಿತರ ಪ್ರಕೃತಿ ವಿಕೋಪಗಳು ದೇಶವನ್ನು ಕಾಡುತ್ತಿರುವಾಗ ನದಿ ಜೋಡಣೆಯಂಥ ಭಾರೀ ಬಂಡವಾಳ ಹೂಡುವ ಯೋಜನೆಗಳನ್ನು ಕೈಗೆತ್ತಿಕೊಂಡರೆ ಪೂರ್ಣಗೊಳಿಸುವ ಶಕ್ತಿ ಭಾರತಕ್ಕಿದೆಯೇ ಎನ್ನುವಂಥ ಪ್ರಶ್ನೆಗಳು ಎದುರಾಗುತ್ತವೆ. ಇಂಥ ಯೋಜನೆಗಳಿಗೆ ವಿಶ್ವಬ್ಯಾಂಕಿನಿಂದ ಸಾಲ ತರಲು ಸರಕಾರ ಮುಂದಾದರೂ ಅದರ ವಾರ್ಷಿಕ ಬಡ್ಡಿಯನ್ನು ಗಮನಿಸಿದರೆ ನಿಜಕ್ಕೂ ದೇಶವನ್ನೇ ವಿಶ್ವಬ್ಯಾಂಕಿಗೆ ಅಡವಿಡುವ ಅನುಭವವಾಗುತ್ತದೆ. ಅಂದರೆ ಅದರ ವಾರ್ಷಕ ಬಡ್ಡಿ ಸರಿಸುಮಾರು ೭೫ ಸಾವಿರ ಕೋಟಿ ರೂಪಾಯಿಗಳು!
ಈಗಾಗಲೇ ಅಸಮಾನತೆಗಳ ಬೇಗೆಯಲ್ಲಿ ಬೇಯುತ್ತಿರುವ ಭಾರತಕ್ಕೆ ಇದು ಸಣ್ಣ ಪ್ರಮಾಣದ ಹಣವಲ್ಲ. ಇದನ್ನು ಭರಿಸಲು ಮತ್ತೆ ಯಾವ್ಯಾವುದೋ ದಾರಿಗಳಲ್ಲಿ ತೆರಿಗೆ ಸಂಗ್ರಹಿಸಬೇಕಾಗಬಹುದು. ಇಷ್ಟು ವೆಚ್ಚಮಾಡಿ ಮಾಡಲಾಗುವ ಯೋಜನೆಯಿಂದ ಒದಗುವ ನೀರು ಹಾಗೂ ಶಕ್ತಿಯನ್ನು ರೈತರಿಗೆ ಹಾಗೂ ಉದ್ಯಮಿಗಳಿಗೆ ನಿಲುಕದ ಬೆಲೆಯಲ್ಲಿ ಕೊಡಬೇಕಾಗುತ್ತದೆ. ನಾನು ಮೊದಲೇ ಹೇಳಿದಂತೆ ‘ನೀರಿನ ವ್ಯಾಪಾರೀಕರಣ’ ಅದು ಇಂಥ ಸಂದರ್ಭಗಳಲ್ಲಿ ಕೈಗೂಡುತ್ತದೆ. ಈ ರೀತಿಯ ಸನ್ನಿವೇಶಗಳಲ್ಲಿ ದೇಶದ ಜನತಂತ್ರಕ್ಕೆ, ಸಮಗ್ರತೆಗೆ ಪೆಟ್ಟು ಬೀಳುತ್ತದೆ. ನೀರು ಸರಬರಾಜಿಗೆ (ಮಾರಾಟಕ್ಕೆ) ಸರಕಾರ ವ್ಯವಸ್ಥೆ ಮಾಡಲಾಗದೆ ಖಾಸಗಿ ದಲ್ಲಾಳಿಗಳಿಗೆ ವಹಿಸಬೇಕಾಗುತ್ತದೆ. ಆಗ ಸಾಮಾಜಿಕ ಘರ್ಷಣೆಗಳು, ದಬ್ಬಾಳಿಕೆಗಳು ಪ್ರಾರಂಭವಾಗುತ್ತವೆ. ಈಗಾಗಲೇ ಬಹುರಾಷ್ಟ್ರೀಯ ಕಂಪನಿಗಳು ವಿಶ್ವವಿದ್ಯಾಲಯಗಳಲ್ಲಿ ಲಾಬಿ ನಡೆಸಿ ನೀರನ್ನು ‘ಮಾನವ ಹಕ್ಕು’ ಎಂದಿದ್ದುದನ್ನು ‘ಮಾನವ ಅಗತ್ಯ’ ಎಂದು ಬದಲಾಯಿಸಿವೆ. ಅಂದರೆ ಅಗತ್ಯ ವಸ್ತುಗಳ ಸಾಲಿನಲ್ಲಿ ನಿಲ್ಲಿಸುವುದರ ಹಿಂದಿನ ಉದ್ದೇಶವೇ ಮಾರಾಟ! ಅಗತ್ಯ ವಸ್ತುಗಳ ಸಾಲಿನಲ್ಲಿರುವುದು ಮನುಷ್ಯ ಖರೀದಿಸಲೇಬಾಕಾಗುತ್ತದೆ ಎಂಬ ಸೂಕ್ಷ್ಮ ಒತ್ತಾಯ ಇದು. ಇದೇ ಖಾಸಗೀಕರಣದ ಮಜಲು.
ಹೆಚ್ಚುತ್ತಿರುವ ತಾಪಮಾನ:
‘ಮಳೆಗಾಲದಲ್ಲಿ ಅನೇಕ ನದಿಗಳು ತುಂಬಿ ಹರಿದು ಲಕ್ಷಾಂತರ ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತದೆ’ ಎಂದು ಇದನ್ನು ಒಪ್ಪಿಕೊಳ್ಳುವವರ ವಾದ. ಇವೇ ನಿಜವಾದ ಪರಿಸರ ವಿರೋ ಆಲೋಚನೆಗಳು. ಸಮದ್ರಕ್ಕೂ ಮತ್ತು ನದಿಗಳಿಗೂ ಒಂದು ಜೈವಿಕ ಸಂಬಂಧವಿದೆ. ನದಿಗಳ ಸಿಹಿ ನೀರು ಹರಿದರೂ ಸಮುದ್ರದಲ್ಲಿ ಉಪ್ಪಾಗುತ್ತದೆ. ಆದರೆ ಸಮುದ್ರದಲ್ಲಿ ಭಾರೀ ಪ್ರಮಾಣದಲ್ಲಿ ಉಪ್ಪು ನೀರಿರುವುದರಿಂದ ಅಲ್ಪ ಪ್ರಮಾಣದ ಸಿಹಿ ನೀರು ಸೇರಿದರೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಾದ ಮಂಡಿಸಬಹುದು. ಆದರೆ ಸಿಹಿ ನೀರು ಸೇರದೇ ಹೋದರೆ ಎಂಥ ಪರಿಣಾಮ ವಾಗಬಹುದು ಎಂಬ ಬಗ್ಗೆಯೂ ಎಚ್ಚರ ಅಗತ್ಯ. ನದಿಗಳು ಹರಿಯುವುದರಿಂದ ಭೂಮಿಯಲ್ಲಿನ ಖನಿಜಾಂಶ ಸಾಗರಕ್ಕೆ ಸೇರುತ್ತದೆ. ಸಾಗರ ಗರ್ಭದ ಜೀವಿಗಳ ಆಹಾರಕ್ಕೆ ಇದೇ ಮೂಲ. ಇದನ್ನೆ ತಡೆದರೆ ಸಮುದ್ರದ ಜೀವಿಗಳಿಗೆ ಆಹಾರದ ಕ್ಷಾಮ ತಲೆದೂರಬಹುದು. ಜೀವಕೋಶಗಳ ಉಗಮವಾಗಿರುವುದೇ ಸಾಗರದ ಗರ್ಭದಿಂದ ಎನ್ನುವುದನ್ನು ನಾವು ಮರೆಯಬಾರದು. ಸಾಗರದಲ್ಲಿರುವ ಸಣ್ಣ ಸಣ್ಣ ಜೀವಿಗಳು ಬಹಳ ಮುಖ್ಯ. ಅವು ಕ್ಯಾಲ್ಸಿಯಂ ಕಾರ್ಬೋನೇಟನ್ನು ಉತ್ಪಾದಿಸಿ ಇಂಗಾಲಾಮ್ಲವನ್ನು ಹೀರಿಕೊಳ್ಳುತ್ತವೆ. ಸಾಗರ ಅನೇಕ ಸಣ್ಣ ಸಣ್ಣ ಜೀವಿಗಳಿಂದ ತುಂಬಿದೆ. ಜೀವವಿಕಾಸವನ್ನು ಗಮನಿಸಿದರೆ ಸಾಗರದ ಸಸ್ಯಗಳು, ಜೀವಿಗಳು ತೀರಾ ಹಳೆಯವು. ಹೀಗಾಗಿ ಅವುಗಳಿಗೆ ಪ್ರಾಮುಖ್ಯತೆ ಹೆಚ್ಚು. ಸಾಗರದ ಜೀವಿಗಳ ಆಹಾರ ಸರಪಳಿಯನ್ನೇ ತುಂಡಾಗಿಸಿದರೆ ಮುಂದೊಂದು ದಿನ ಬತ್ತಿದ ಸಾಗರವನ್ನು ನೋಡಬೇಕಾಗುತ್ತದೆ.
ಮಳೆಯ ಪ್ರಮಾಣ ಕಡಿಮೆ ಮತ್ತು ಭೂಮಿಯ ಮೇಲೆ ಬಿಸಿ ಹವೆ ಹೆಚ್ಚುತ್ತಿದ್ದು, ಇಂಗಾಲದಿಂದ ಜಗತ್ತು ಕಲುಷಿತಗೊಂಡಿರುವುದು ಈಗಾಗಲೇ ದೃಢಪಟ್ಟಿದೆ. ಅದರ ನಿಯಂತ್ರಣಕ್ಕೆ ತುರ್ತು ಕ್ರಮ ಅನಿವಾರ್ಯ. ೨೦೧೨ರ ಹೊತ್ತಿಗೆ ವಾಯುಮಾಲಿನ್ಯ, ಜಲಮಾಲಿನ್ಯ ನಿಯಂತ್ರಣಕ್ಕೆ ಸರಿಯಾದ ಮಾರ್ಗಸೂಚಿಗಳನ್ನು ರೂಪಿಸದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದು ಸೂಚನೆ ನೀಡಲಾಗುತ್ತಿದೆ. ಇದಕ್ಕಾಗಿ ಭೂಮಿಗೆ ನೀರಿಂಗಿಸಲು ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅಮೆರಿಕದಂಥ ಶ್ರೀಮಂತ ದೇಶಗಳು ೨೦೦೫ರವರೆಗೂ ಇಂಥ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇದರಿಂದ ಅಭಿವೃದ್ಧಿಶೀಲ ದೇಶಗಳು ಕೂಡ ಇದನ್ನು ನಿರ್ಲಕ್ಷಿಸುತ್ತಲೇ ಬಂದದ್ದು ಪರಿಸ್ಥಿತಿ ಇಷ್ಟೊಂದು ಜಟಿಲವಾಗಿದೆ. ಇವೆಲ್ಲವನ್ನು ಗಮನಿಸಿದರೆ ಭೂಮಿ ಮನುಷ್ಯ ವಾಸಿಸಲು ಯೋಗ್ಯವಲ್ಲ ಎನ್ನುವಂತಾಗಿದೆ.
ನಮ್ಮ ನದಿಗಳು ಬರೀ ಪ್ರವಾಹ ಪ್ರೀಡಿತಮಾತ್ರವಾಗಿಲ್ಲ ಸಾಕಷ್ಟು ಮಲೀನವೂ ಆಗಿವೆ. ಈ ಜೋಡಣೆ ಎಂದರೆ ರಾಷ್ಟ್ರದಾದ್ಯಂತ ಮಾಲಿನ್ಯದ ಜೋಡಣೆಯೇ ಆಗಬಹುದು. ಗಂಗಾನದಿಯ ಅಪಾರ ಪ್ರಮಾಣದ ಮಲೀನ ನೀರು ಕಾವೇರಿ ಅಥವಾ ತುಂಗಭದ್ರಾ ಸೇರಿದರೆ ಅದು ಹರಿಯುವ ಊರುಗಳಲ್ಲೆಲ್ಲಾ ಸಾಂಕ್ರಾಮಿಕ ರೋಗಗಳು ಹರಡಬಹುದು. ಇಂಥ ಕ್ರಮಗಳಿಂದ ರೋಗ ರುಜಿನಗಳು ಮತ್ತಷ್ಟು ಹೆಚ್ಚಿದರೆ ದೇಶವೇ ಆಸ್ಪತ್ರೆಯಾಗುವ ಸಾಧ್ಯತೆಗಳನ್ನೂ ಗಮನಿಸಬೇಕು. ಆದ್ದರಿಂದ ಎರಡು ಅಥವಾ ಮೂರು ಸಣ್ಣ ನದಿಗಳನ್ನು ಪ್ರಾಯೋಗಿಕವಾಗಿ ಜೋಡಿಸಿ ಅದರ ಎಡಬಲಗಳನ್ನು ಪರೀಕ್ಷೆ ಮಾಡಬೇಕು ಅದರ ಫಲಿತಾಂಶದ ಮೇಲೆ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಬೇಕು. ಕಾರಣವಿಷ್ಟೆ ವಿಶ್ವದಲ್ಲಿ ಇಷ್ಟೊಂದು ದೊಡ್ಡ ಯೋಜನೆಗಳನ್ನು ಯಾವ ರಾಷ್ಟ್ರವೂ ರೂಪಿಸಿಲ್ಲ ಮತ್ತು ಯಶಸ್ವಿಯೂ ಆಗಿಲ್ಲವಾದ್ದರಿಂದ ಬಡ ಭಾರತದ ಮೇಲೆ ಇದನ್ನು ಒತ್ತಾಯ ಪೂರ್ವಕವಾಗಿ ಹೇರುವುದು ಸಲ್ಲ.
ಪರ್ಯಾಯ ಚಿಂತನೆ:
ಜೈವಿಕ ಕೊಂಡಿಯನ್ನು ಜೋಡಿಸುವ ಹುಚ್ಚು ಸಾಹಸಕ್ಕೆ ಮನುಷ್ಯ ಕೈ ಹಾಕಬಾರದು. ಹಕ್ಕಿ, ಹಾವು, ಸಿಂಹ ಎಲ್ಲ ಪ್ರಾಣಿಗಳೂ ತಮ್ಮ ಆಹಾರವನ್ನು ತಾವೇ ಬೇಟಿಯಾಡಿಕೊಳ್ಳುತ್ತವೆ ಅದನ್ನು ಬಿಟ್ಟು ನಾವು ಅವುಗಳಿಗೆ ಆಹಾರ ನೀಡತೊಡಗಿದರೆ ಅವುಗಳಲ್ಲಿ ಬೇಟೆಯಾಡುವ, ತಮ್ಮ ಆಹಾರವನ್ನು ತಾವೇ ಸೃಷ್ಟಿಸಿಕೊಳ್ಳುವ ಕ್ರಮವೇ ಮರೆತು ಹೋಗಬಹುದು. ಹಾಗೆಯೇ ನದಿ ಜೋಡಣೆಯೂ ಕೂಡ. ಅಕಸ್ಮಾತ್ ನದಿಗಳು ಜೋಡಣೆಯಾಗಬೇಕೆಂದಿದ್ದರೆ ಅವೇ ನೈಸರ್ಗಿಕವಾಗಿ ಆಗುತ್ತವೆ. ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಎರಡು ಪ್ರಮುಖ ನದಿಗಳಾದ ತುಂಗ-ಭದ್ರಾ ಶಿವಮೊಗ್ಗ ಬಳಿ ಕೂಡ್ಲಿಯಲ್ಲಿ ಒಂದಾಗಿ ಮುಂದೆ ಸಾಗಿಲ್ಲವೇ? ಹಾಗೆಯೇ ಇದೇರೀತಿ ಅರ್ಕಾವತಿ ನದಿ ಕಾವೇರಿ ಸೇರುವುದಿಲ್ಲವೆ? ಅನೇಕ ನದಿಗಳು ತಾವೇ ಜೋಡಿಯಾಗಿ ಹರಿದ ಉದಾಹರಣೆಗಳಿವೆ. ಇದೇ ಜೈವಿಕ ಕ್ರಿಯೆ. ಇದು ಮಾನವ ನಿರ್ಮಿತವಾದರೆ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇದಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವುದು ಅಗತ್ಯ. ಮಳೆ ನೀರಿನ ಕೊಯ್ಲನ್ನು ಗುಜರಾತ್ ಮೊದಲಾದ ರಾಜ್ಯಗಳು ಬಹಳ ಹಿಂದೆಯೇ ಜಾರಿಗೆ ತಂದು ಯಶಸ್ವಿಯಾಗಿವೆ. ರಾಜಸ್ತಾನದಂಥ ಮರಳುಗಾಡಿನಲ್ಲಿ ರಾಜೇಂದ್ರಸಿಂಗ್ ಅಂಥವರು ಬತ್ತಿಹೋದ ನದಿಗಳಿಗೆ ಮರು ಜೀವ ನೀಡಿ ಬಿರುಬೇಸಿಗೆಯಲ್ಲೂ ಹರಿಯುವಂತೆ ಮಾಡಿದ್ದಾರೆ. ಇದೇ ರೀತಿಯಲ್ಲಿ ಸಣ್ಣ ಪ್ರಮಾಣದ ಕೆಲಸಗಳು ಕರ್ನಾಟಕದಲ್ಲೂ ನಡೆದಿವೆ ಅಂಥವುಗಳನ್ನು ಪ್ರೋತ್ಸಾಹಿಸಿ ನೀರಿನ ಸಮೃದ್ಧಿಗೆ ಪ್ರಯತ್ನಿಸಿದರೆ ಯಶಸ್ವಿಯಾಗಲು ಸಾಧ್ಯವಿದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕಿದೆ.
ಬಯಲು ನಾಡು ಚಿತ್ರದುರ್ಗದಲ್ಲೂ ಇಂಥ ಪ್ರಯತ್ನಗಳು ನಡೆದಿವೆ. ಕೋಲಾರದಲ್ಲಿ ಇಂಥ ಪ್ರಯತ್ನಗಳಾಗಬೇಕಿದೆ. ನೇತ್ರಾವತಿ ನೀರನ್ನು ಕೋಲಾರಕ್ಕೆ ಹರಿಸಬೇಕೆನ್ನುವ ಒತ್ತಾಯ ತಪ್ಪಲ್ಲ ಆದರೆ ಕೋಲಾರ ಜಿಲ್ಲೆಯಲ್ಲಿ ಇರುವಷ್ಟು ಕೆರೆಗಳು ಬಹುಶಃ ದೇಶದ ಯಾವುದೇ ಜಿಲ್ಲೆಯಲ್ಲಿ ಇರಲಾರವು ಆದರೆ ಅನೇಕ ಕೆರೆಗಳು ಒತ್ತುವರಿಯಾಗಿವೆ ಕೆಲವಕ್ಕೆ ನೀರು ಹರಿದುಬರುವ ಮಾರ್ಗಗಳನ್ನೇ ಒತ್ತುವರಿ ಮಾಡಲಾಗಿದೆ. ಬೆಳೆಸಿರುವ ನೀಲಗಿರಿ ನೆಡುತೋಪುಗಳು ನಮ್ಮ ಜೈವಿಕ ಅರಣ್ಯವನ್ನೇ ನಾಶಮಾಡಿವೆ. ನೀಲಗಿರಿಯಿಂದ ಅಂತರ್ಜಲ ಪೂರ್ಣ ಬತ್ತಿಹೋಗಿ ಕೆರೆಗಳು ಖಾಲಿಯಾಗಿಬೆಂಗಾಡು ಮಾತ್ರ ನಮಗೆ ಕಾಣುತ್ತಿದೆ. ನಮ್ಮ ಅಕಾರಿ ವಲಯದಲ್ಲಿ ಒಂದು ಮೂರ್ಖ ಕಲ್ಪನೆಯಿದೆ ಅದೇನೆಂದರೆ ನಿರಾವರಿ ಇಲಾಖೆಗೂ ಅರಣ್ಯ ಇಲಾಖೆಗೂ ಸಂಬಂಧವೇ ಇಲ್ಲ ಎನ್ನುವಂಥದ್ದು. ನೀರಾವರಿ ಇಲಾಖೆಯವರು ಜಲಮರುಪರಿಪೂರ್ಣದಂಥ ಯೋಜನೆಗಳನ್ನು ರೋಪಿಸುತ್ತಿದ್ದರೆ ಅರಣ್ಯ ಇಲಾಖೆಯವರು ನೀಲಗಿರಿ ನೆಳೆಯುತ್ತ ಅಂತರ್ಜಲ ನಾಶ ಮಾಡುವ ಕೆಲಸಗಳಲ್ಲಿ ಮುಂದಾಗಿದ್ದಾರೆ. ಆದ್ದರಿಂದ ಈ ಎರಡೂ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕಾದ ಅನಿವಾರ್ಯತೆ ತುಂಬಾ ಇದೆ. ನೀಲಗಿರಿ ನೆಟ್ಟು ಎರಡು ವರ್ಷಗಳಲ್ಲಿ ಅದು ಬೆಳೆದದ್ದನ್ನು ಮಂತ್ರಿಗಳಿಗೆ ತೋರಿಸಿ ಬಡ್ತಿ ಬಯಸುವ ಅರಣ್ಯ ಅಕಾರಿಗಳು ಎಲ್ಲೆಂದರಲ್ಲಿ ನೀಲಗಿರಿ, ಅಕೇಶಿಯಾದಂಥ ನೆಡುತೋಪುಗಳನ್ನು ನಿರ್ಮಿಸುತ್ತಿದ್ದಾರೆ. ಇದರಿಂದ ನಮ್ಮ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ನಮ್ಮ ಪರಿಸರಕ್ಕೆ ಹೊಂದಾಣಿಕೆಯಾಗದ ನೀಲಗಿರಿ ಅಕೇಶಿಯಾದಿಂದ ನಮ್ಮ ಪಾರಂಪರಿಕ ಅರಣ್ಯ ಮತ್ತು ನೀರಿನ ಸೆಲೆಗಳು ಬತ್ತುತ್ತಿವೆ ಎಂದು ಪರಿಸರವಾದಿಗಳು ಕಳೆದ ಹತ್ತು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ ನಮ್ಮ ಅಕಾರಿಗಳು ಮತ್ತೆ ಮತ್ತೆ ಅದೇ ಸಸಿಗಳನ್ನು ನೆಡುತ್ತಲೇ ತಮ್ಮ ಮೂರ್ಖತನವನ್ನು ಒರೆಗೆಹಚ್ಚಿಕೊಳ್ಳುತ್ತಲೇ ಬಂದಿದ್ದಾರೆ. ನಾವು ನಮ್ಮ ಆಡಳಿತ ಯಂತ್ರ ಇಂಥ ವಿಚಾರಗಳಲ್ಲಿ ಬದಲಾದರೆ ಮಾತ್ರ ನೀರಿನ ಸಮಸ್ಯೆಗೆ ಪರ್ಯಾಯ ಮಾರ್ಗಗಳನ್ನು ಮತ್ತು ಶಾಶ್ವತ ಹಾದಿಗಳನ್ನು ಕಂಡುಕೊಳ್ಳಬಹುದು.
ಹಸಿರು ಕಾಣುವುದೆಲ್ಲದೂ ಅರಣ್ಯವಲ್ಲ. ಅರಣ್ಯ ಎಂದರೆ ಸಹಜ ಜೈವಿಕ ಕ್ರಿಯೆಗಳು ನಡೆದು ಸೃಷ್ಟಿಯಾಗಬೇಕು ನೀಲಗಿರಿ ಬೆಳೆಯುವುದರಿಂದ ಇಂಥ ಕ್ರಿಯೆಗಳು ನಡೆಯುವುದಿಲ್ಲ ಮತ್ತು ಅದರ ವಾಸನೆಯಿಂದ ಸಣ್ಣಪುಟ್ಟ ಹುಳುಗಳು ಸಾಯುತ್ತವೆ. ಜಾನುವಾರುಗಳು ಚರ್ಮ ರೋಗದಿಂದ ಬಳಲುತ್ತಿವೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ಆದರೂ ಅಕಾರಿಗಳು ನೀಲಗಿರಿ ಬೆಳೆಯಲು ವಹಿಸಿದಷ್ಟು ಆಸಕ್ತಿಯನ್ನು ಇತರ ಗಿಡನೆಡಲು ತೋರುತ್ತಿಲ್ಲ ಎನ್ನುವುದು ನಾಚಿಕೆಗೇಡಿನ ವಿಚಾರ. ಕೆರೆಗಳಿಗೆ ನೀರು ಹರಿಸುವ ಮಾರ್ಗಗಳನ್ನು ನಿರ್ಬಂಸದೆ ಮುಕ್ತವಾಗಿ ಬಿಡಬೇಕು, ಜೈವಿಕ ಅರಣ್ಯದ ಅರಿವು ಮೂಡಿಸಬೇಕು. ಕೆರೆಗಳ ಹೂಳು ತೆಗೆಸಿ ವರ್ಷವಿಡೀ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು. ಕೆರೆ ಬಾವಿಗಳಲ್ಲಿ ಕಲುಷಿತ ನೀರು ಶೇಕರಣೆಯಾಗದಂತೆ ಕಾಯ್ದುಕೊಳ್ಳಬೇಕು. ಕೃಷಿಗೆ ಅಗತ್ಯವಿರುವಷ್ಟು ನೀರು ಮಾತ್ರ ಬಳಸಿ ಅನಗತ್ಯ ಪೋಲಾಗದಂತೆ ನೋಡಿಕೊಳ್ಳಬೇಕು ಹಾಗಾದರೆ ಮಾತ್ರ ಲಭ್ಯವಿರುವ ನೀರಿನಲ್ಲಿ ಬದುಕು ಅದರಲ್ಲೂ ಶುದ್ದ ಬದುಕು ಕಟ್ಟಿಕೊಳ್ಳಬಹುದು.
ನೀರು ಕಲುಷಿತ:
ಈಗಾಗಲೇ ಭಾರತದಲ್ಲಿ ಕುಡಿಯುವ ನೀರು ಕಲುಷಿತಗೊಂಡಿದೆ ಇದಕ್ಕೆ ಪರಿಸರ ನೈರ್ಮಲ್ಯ ಕಾಪಾಡದಿರುವುದೇ ಕಾರಣ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಜಗತ್ತಿನಾದ್ಯಂತ ಹತ್ತರಲ್ಲಿ ಒಂದು ಕಾಯಿಲೆಗೆ ಮತ್ತು ಶೇಕಡಾ ಆರರಷ್ಟು ಸಾವು ಪ್ರಕರಣಗಳಿಗೆ ಶುದ್ಧ ಕುಡಿಯುವ ನೀರಿನ ಕೊರತೆಯೇ ಕಾರಣ ಎಂದು ೨೦೦೮ರಲ್ಲಿ ಪ್ರಪ್ರಥಮ ಬಾರಿಗೆ ಜಲಮೂಲ ಕಾಯಿಲೆಗಳ ಬಗ್ಗೆ ಅಧ್ಯಯನ ನಡೆಸಿದ ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿತ್ತು. ‘ಉತ್ತಮ ಆರೋಗ್ಯಕ್ಕಾಗಿ ಶುದ್ಧ ನೀರು’ ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅದು ಅಧ್ಯಯನ ನಡೆಸಿತ್ತು. ಭಾರತದಲ್ಲಿ ವರ್ಷಕ್ಕೆ ೧.೦೩ ಲಕ್ಷ ಜನ ಸಾಯುತ್ತಾರೆ. ಇಂಥವರಲ್ಲಿ ಶೇ. ೭.೫ರಿಂದ ೭.೮ ರಷ್ಟು ಮಂದಿ ಸಾಯಲು ಕಲುಷಿತ ನೀರೇ ಕಾರಣ ಎಂದು ವರದಿ ತಿಳಿಸಿತ್ತು. ನೀರು ಸಂಬಂತ ಕಾಯಿಲೆಗಳಾದ ಮಲೇರಿಯಾ, ಡೆಂಗೆ ಜ್ವರಕ್ಕೆ ಬಲಿಯಾದವರ ಸಂಖ್ಯೆ ೨೦೦೮ರ ಒಂದೇ ವರ್ಷದಲ್ಲಿ ಹತ್ತೊಂಬತ್ತು ಸಾವಿರ.
ಆರೋಗ್ಯ ಸಂರಕ್ಷಣೆಗಾಗಿ ಏಜೆನ್ಸಿಗಳು ಪ್ರತೀ ವರ್ಷ ಏಳು ಶತಕೋಟಿ ಡಾಲರ್ ಹಾಗೂ ವೈಯುಕ್ತಿಕವಾಗಿ ಜನರು ೩೪೦ ದಶಲಕ್ಷ ಡಾಲರ್ ಖರ್ಚು ಮಾಡುತ್ತಾರೆ. ಕುಡಿಯುವ ನೀರು ಹಾಗೂ ಒಳಚರಂಡಿ ವ್ಯೆವಸ್ಥೆಯನ್ನು ಸರಿಪಡಿಸಿದಲ್ಲಿ ಅನಗತ್ಯ ಆರ್ಥಿಕ ಹೊರೆಯನ್ನು ತಗ್ಗಿಸಬಹುದು. ವಿಶ್ವದಲ್ಲಿ ಶೇ. ೮೮ ರಷ್ಟು ಜನ ಕಲುಷಿತ ನೀರು ಕುಡಿದು ಭೇದಿಗೆ ತುತ್ತಾಗುತ್ತಾರೆ. ಕಲುಷಿತ ನೀರು ಒಂದೆಡೆ ಶೇಕರಣೆಗೊಳ್ಳುವುದರಿಂದ ಷಿಸ್ಟಸಮೈಆಸಿಸ್ ಕಾಯಿಲೆ ಹರಡುತ್ತಿದ್ದು ಒಂದು ವರ್ಷದಲ್ಲಿ ಜಗತ್ತಿನಾದ್ಯಂತ ಇನ್ನೂರು ದಶಲಕ್ಷ ಜನ ಬಳಲುತ್ತಿದ್ದರೆ ಎನ್ನುವುದು ಆಘಾತಕಾರಿ ವಿಚಾರ.
ಕರ್ನಾಟಕವನ್ನೇ ಗಮನದಲ್ಲಿಟ್ಟುಕೊಂಡು ನೋಡುವುದಾದರೆ ರಾಜ್ಯದಲ್ಲಿ ಅಂತರ್ಜಲಮಟ್ಟ ಅಪಾಯಕಾರಿ ಹಂತ ತಲುಪಿದೆ. ಕಳೆದ ಎರಡು ದಶಕಗಳಿಂದೀಚೆಗೆ ಭೂಮಿಯಲ್ಲಿ ಮನಬಂದಂತೆ ಕೊರೆದ ಕೊಳವೆ ಬಾವಿಗಳಿಂದ ದೊರೆತ ಫಲ ಇದು. ರಾಜ್ಯದ ೧೭೫ ತಾಲೂಕುಗಳ ಪೈಕಿ ೬೫ ತಾಲೂಕುಗಳಲ್ಲಿ ಅಂತರ್ಜಲ ದುರ್ಬಳಕೆ ಯಥೇಚ್ಚವಾಗಿ ನಡೆಯುತ್ತಿದೆ. ಕೋಲಾರ, ಬೆಂಗಳೂರು ಗ್ರಾಮಾಂತರ ತುಮಕೂರು ಜಿಲ್ಲೆಗಳಲ್ಲಿ ಅಂತರ್ಜಲದ ದುರ್ಬಳಕೆ ರಾಜ್ಯದಲ್ಲೇ ಅತೀ ಹೆಚ್ಚು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಅಂತರ್ಜಲ ಮಂಡಳಿ (ಸಿಜಿಡಬ್ಲ್ಯೂಟಿ) ಮಳೆಗಾಲದಲ್ಲಿ ಭೂಮಿಗೆ ನೀರು ಇಂಗಿಸುವ ಕಾರ್ಯವನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ಭೂಮಿಯ ಮೇಲೆ ಮಾನವನ ದಬ್ಬಾಳಿಕೆ ಹೆಚ್ಚಿದಂತೆ ಇಡೀ ವಾತಾವರಣವೇ ಬಿಸಿಯಾಗತೊಡಗಿದೆ. ಈಗ ಅಮೆರಿಕರಂಥ ಶ್ರೀಮಂತ ದೇಶಗಳು ಬಿಸಿಗೆ ತತ್ತರಿಸಿವೆ. ಉತ್ತರ ಭಾರತದಲ್ಲೂ ಉಷ್ಣಾಶ ಹೆಚ್ಚಿದ್ದು ಜನರು ಬಿಸಿ ತಾಳದೆ ಸಾಯುತ್ತಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ನೀರಿನಿಂದಲೇ ಆವೃತವಾಗಿರುವ ಭೂಮಿಗೆ ನೀರಿನಕೊರತೆ ಮತ್ತು ಅದರ ಕಲುಷಿತತೆಯೇ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ.