Monday, October 12, 2009

ವಿಶ್ವ ವಾಣಿಜ್ಯ ಸಂಘಟನೆ

ದಿಲ್ಲಿಯಲ್ಲಿ ಎರಡು ದಿನ (ಸೆ. ೩,೪)ನಡೆದ ವಿಶ್ವ ವ್ಯಾಪಾರಿ ಸಂಘಟನೆಯ (ಡಬ್ಲ್ಯೂಟಿಒ) ವಾಣಿಜ್ಯ ಸಚಿವರ ಮಟ್ಟದ ಅನೌಪಚಾರಿಕ ಸಭೆ ಮುಕ್ತಾಯಗೊಂಡಿದೆ. ದೋಹಾ ಸುತ್ತಿನ ಸಂಧಾನ ಮಾತುಕತೆಗೆ ಸಂಬಂಸಿದಂತೆ ರಾಜಕೀಯ ಪ್ರಕ್ರಿಯೆ ವೇಗ ಹೆಚ್ಚಿಸುವುದು ಇದರ ಉದ್ದೇಶವಾಗಿತ್ತು ಎಂಬುದು ವಾಣಿಜ್ಯ ಸಚಿವ ಆನಂದ ಶರ್ಮ ಅವರ ಅಂಬೋಣ. ಅಮೆರಿಕ, ಯೂರೋಪಿಯನ್ ಒಕ್ಕೂಟ, ಆಸ್ಟ್ರೇಲಿಯಾ, ಬ್ರೆಜಿಲ್ ಸೇರಿದಂತೆ ೩೫ ಸದಸ್ಯ ರಾಷ್ಟ್ರಗಳ ಸಚಿವರುಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಕಳೆದ ಜುಲೈನಲ್ಲಿ ಜಿನೀವಾದಲ್ಲಿ ನಡೆದ ಮಾತುಕತೆಯ ಮುಂದುವರಿದ ಭಾಗವಾಗಿ ಈ ಸಭೆ ಏರ್ಪಡಿಸಲಾಗಿತ್ತು. ಬರುವ ನವೆಂಬರ್ ೩೦ರಿಂದ ಡಿಸೆಂಬರ್ ೨ರವರೆಗೆ ಜಿನೀವಾದಲ್ಲಿ ಮತ್ತೆ ಮಾತುಕತೆಗಳು ಪುನಾರಂಭಗೊಳ್ಳಲಿವೆ.
ಈ ಮಾತುಕತೆಯಲ್ಲಿ ಭಾರತ ಪಾಲ್ಗೊಳ್ಳದಂತೆ ನಾನಾ ಜನಪರ ಸಂಘಟನೆಗಳು ಒತ್ತಾಯಿಸಿದ್ದವು. ಇದನ್ನು ಲೆಕ್ಕಿಸದೆ ಪ್ರತಿಭಟಿಸಿದ್ದ ಸಾವಿರಾರು ರೈತ ಮುಖಂಡರನ್ನು ಬಂಸಿ ಸಭೆ ನಡೆಯಿತು. ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ ಈ ಮಾತುಕತೆಗಳಿಗೆ ಮೊದಲು ನಿರೀಕ್ಷಿಸಿದಷ್ಟು ಮಹತ್ವ ಬರಲಿಲ್ಲ ಮತ್ತು ಮಾಧ್ಯಮಗಳೂ ಕೂಡ ಈ ‘ಮಾತನ್ನು’ ಗಟ್ಟಿಯಾಗಿ ಕೇಳಿಸಿಕೊಂಡಂತೆ ಕಾಣಲಿಲ್ಲ. ಜಾಗತೀಕರಣದ ಬಲೆಯಲ್ಲಿ ಎಲ್ಲ ದೇಶಗಳನ್ನು ಹಿಡಿದಿಟ್ಟುಕೊಳ್ಳಲು ಸಂಚು ರೂಪಿಸಿರುವ ಬಲಾಢ್ಯ ದೇಶಗಳು ಮೊದಲಿನಷ್ಟು ಶಕ್ತಿಯುತವಾಗಿ ಉಳಿಯದಿರುವುದನ್ನು ಇದು ಸಾಂಕೇತಿಸುತ್ತದೆ.
ಆರಂಭದಲ್ಲಿ ಕೃಷಿಯನ್ನು ಗ್ಯಾಟ್‌ನಿಂದ ಹೊರಗಿಡುವಂತೆ ಒತ್ತಾಯಿಸಿದ್ದ ಅಮೆರಿಕ ನಂತರ ಅದನ್ನು ಗ್ಯಾಟ್ ವ್ಯಾಪ್ತಿಗೆ ತರುವಂತೆ ಒತ್ತಾಯಿಸಿತ್ತು. ಹಾಗೇನಾದರೂ ಆಗದಿದ್ದರೆ ತಾನು ಗ್ಯಾಟ್‌ನಿಂದಲೇ ಹೊರಗಿರುವುದಾಗಿ ಮೊಂಡಾಟ ಮಾಡಿತ್ತು. ಇಲ್ಲಿ ಇನ್ನೊಂದು ದೇಶದ ಹಿತ ಕಾಯುವುದಾಗಿ ಹೇಳುವುದು ಬರೀ ಬೊಗಳೆ. ಸಂಪೂರ್ಣ ಲೆಕ್ಕಾಚಾರ ಇರುವುದು ಲಾಭ ನಷ್ಟದಲ್ಲಿ ಮಾತ್ರ. ಗ್ಯಾಟ್‌ನಿಂದ ಕೃಷಿಯನ್ನು ಹೊರಗಿಟ್ಟರೆ ಭಾರತ, ಚೀನಾ ಅಥವಾ ಬಡ ದೇಶಗಳು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬಹುದು ಎನ್ನುವ ಭಯದಲ್ಲಿ ಹಾಗೆ ಮಾಡಿತ್ತು!
ಜಾಗತೀಕರಣ ಎಂದರೇನು?
ಜಾಗತೀಕರಣದ ಒಪ್ಪಂದ, ಅದರ ವ್ಯಾಪ್ತಿ, ವಿಸ್ತಾರ, ಕುಟಿಲತೆಗಳನ್ನು ಬಿಡಿಸಿ ಹೇಳುವುದು ಸ್ವಪ್ಪ ಕಷ್ಟ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಬಡರಾಷ್ಟ್ರಗಳ ಮೇಲೆ ಹಿಡಿತ ಸಾಸಲು ಲೂಟಿಕೋರ ದೇಶಗಳು ರೂಪಿಸಿಕೊಂಡಿರುವ ಒಂದು ಜಾಲ ಅಥವಾ ಯಜಮಾನ ಸಂಸ್ಕೃತಿಯ ಭಾಗ! ಇಂಥ ಯಜಮಾನ ಸಂಸ್ಕೃತಿಯನ್ನು ರೂಪಿಸಿದವರು ಬಡದೇಶದ ಪ್ರತಿನಿಗಳೇನಲ್ಲ. ಯಾವ ರಾಷ್ಟ್ರಗಳನ್ನು ತಮ್ಮ ವಸಾಹತಾಗಿ ಮಾಡಿಕೊಂಡು ಅಲ್ಲಿನ ಸಂಪತ್ತಿನ ರುಚಿ ಕಂಡಿದ್ದರೋ ಆ ದೇಶಗಳ ನಾಯಕರು ಮತ್ತೆ ಮತ್ತೆ ರಚಿ ನೋಡಲು ರೂಪಿಸಿದ ಕುತಂತ್ರ ಇದು. ಎರಡನೇ ಮಾಹಾ ಯುದ್ಧದ ನಂತರ ಬಂಡವಾಳ ಬರಿದು ಮಾಡಿಕೊಂಡಿದ್ದ ಶ್ರೀಮಂತ ದೇಶಗಳು ಅದನ್ನು ತುಂಬಿಕೊಳ್ಳು ಜಾಗತೀಕರಣದಂಥ ಬಲೆ ಬೀಸಿ ಜಗತ್ತನ್ನೇ ತಮ್ಮ ವಸಾಹತಾಗಿಸಿಕೊಳ್ಳುತ್ತಿವೆ. ಅದಕ್ಕೆ ಒಪ್ಪದಿದ್ದರೆ ಯುದ್ಧದಂಥ ಅಸ್ತ್ರಗಳನ್ನು ಪ್ರಯೋಗಿಸುತ್ತವೆ. ಇತ್ತೀಚಿನ ಉದಾಹರಣೆ ಎಂದರೆ ಕೊಲ್ಲಿ ರಾಷ್ಟ್ರಗಳಲ್ಲಿನ ತೈಲಕ್ಕಾಗಿ ಅಮೆರಿಕ ನಡೆಸಿದ ಯುದ್ಧ ಮತ್ತು ಸದ್ದಾಂ ಹುಸೇನ್‌ಗೆ ಗಲ್ಲು. ಇವೆಲ್ಲ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆದ ದೌರ್ಜನ್ಯಗಳು. ಶ್ರೀಮಂತ ದೇಶಗಳಿಗೆ ಇಂಥ ದೌರ್ಜನ್ಯದ್ದೇ ಒಂದು ಕರಾಳ ಇತಿಹಾಸವಿದೆ ಅದರ ಒಂದು ಭಾಗವೇ ಜಾಗತೀಕರಣ.
ಫುಲ್‌ಸ್ಟಾಪ್ ಇಲ್ಲದ ಮಾತುಗಳು:
ಕಾನ್‌ಕುನ್, ಉರುಗ್ವೆ, ಬ್ಲೆರ್‌ಹೌಸ್ ಒಪ್ಪಂದ, ಗ್ಯಾಟ್ ಒಪ್ಪಂದ, ಡಂಕೆಲ್ ಪ್ರಸ್ತಾವ, ದೋಹಾ ಮಾತುಕತೆ... ಹೀಗೆ ಒಂದಲ್ಲಾ ಒಂದು ಮಾತುಕತೆಗಳು ನಡೆಯುತ್ತಲೇ ಇರುತ್ತವೆ. ಇವು ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿಹೊಂದಿದ ದೇಶಗಳ ಖಾಸಗಿ ವಿಚಾರಗಳಂತಾಗಿವೆ. ರಫ್ತು ಮತ್ತು ಆಮದಿಗೆ ಸಂಬಂಸಿದಂತೆ ಮಾತುಕತೆಗಳು ನಡೆಯುತ್ತಿವೆ. ಇಂಥ ವಿಚಾರದಲ್ಲಿ ಜಗತ್ತಿನ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುತ್ತಿರುವ ಭಾರತ ಅಥವಾ ತೃತೀಯ ಜಗತ್ತಿನ ದೇಶಗಳು ಕೋಲೇ ಬಸವನಂತೆ ತಲೆ ಅಲ್ಲಾಡಿಸದೆ ಸಾಮ್ರಾಜ್ಯಶಾಹಿ ದೇಶಗಳ ಕೃಷಿ ವಿರೋ ಧೋರಣೆಗಳನ್ನು ಖಂಡಿಸಬೇಕು.
ಜಾಗತೀಕರಣದ ಸರಿ ತಪ್ಪುಗಳು ಇನ್ನೂ ಚರ್ಚೆ ನಡೆಯುತ್ತಿರುವಾಗಲೇ ಭಾರತ ಸಹಿ ಹಾಕಿದ್ದರಿಂದ ಕೃಷಿ ಕ್ಷೇತ್ರ ಹಲವಾರು ಹೊಸ ಸವಾಲುಗಳನ್ನು ಎದುರಿಸಬೇಕಾಗಿದೆ. ಮತ್ತು ಜಾಗತಿಕ ನಿಯಮಗಳೆಂಬ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಅಮೆರಿಕ ಮತ್ತು ಯೂರೋಪಿನ ಶ್ರೀಮಂತ ದೇಶಗಳು ತಮ್ಮ ದೇಶದ ರೈತರಿಗೆ ಶಕ್ತಿ ಮೀರಿ ಸಬ್ಸಿಡಿ ನೀಡುತ್ತಿವೆ. ಅದೇ ಭಾರತ ನೀಡಿದರೆ ಚಕಾರ ಎತ್ತುತ್ತವೆ. ದೇಶದ ಆಂತರಿಕ ವಿಚಾರಗಳಲ್ಲಿ ತಲೆ ಹಾಕದಂಥ ನಿಯಮಗಳನ್ನು ರೂಪಿಸಬೇಕಿದೆ.
ಸಂಕುಚಿತ ಅಮೆರಿಕ:
ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಅಮೆರಿಕದ ಒತ್ತಡಕ್ಕೆ ಮಣಿದು ಕೃಷಿ ಸಬ್ಸಿಡಿ ಕಡಿತ ಮಾಡುತ್ತಿವೆ. ಪ್ರತಿ ವರ್ಷ ತನ್ನ ರೈತರಿಗೆ ೩೦ ಸಾವಿರ ಶತಕೋಟಿ ಡಾಲರ್ ಮೊತ್ತದ ಸಬ್ಸಿಡಿ ನೀಡುತ್ತಿರುವ ಅಮೆರಿಕ, ಇತರೆ ದೇಶಗಳು ಸಬ್ಸಿಡಿ ನೀಡದಂತೆ ಆದೇಶ ರವಾನಿಸುತ್ತದೆ. ಈ ಕಾರಣದಿಂದ ಸಣ್ಣ ಸಣ್ಣ ರಾಷ್ಟ್ರಗಳು ಕೃಷಿಯಲ್ಲಿ ಸ್ವಾವಲಂಬನೆ ಸಾಸಲು ಸಾಧ್ಯವಾಗದೆ ತತ್ತರಿಸುತ್ತಿವೆ. ಇದರಿಂದ ಯಾರಿಗಾದರೂ ಅರ್ಥವಾಗುತ್ತದೆ ಜಾಗತೀಕರಣದ ಗುರಿಗಳೇನು ಎನ್ನುವುದು. ಭಾರತ ಅಥವಾ ಸಮಾನ ಮನಸ್ಕ ರಾಷ್ಟ್ರಗಳು ಸಬ್ಸಿಡಿ ವಿಚಾರದಲ್ಲಿ ಅಮೆರಿಕದ ಅಣತಿಯಂತೆ ನಡೆಯುವ ಬದಲು ಅದರ ಕುತಂತ್ರಗಳನ್ನು ವಿಶ್ವ ವ್ಯಾಪಾರಿ ಸಂಘಟನೆಯ ಸಭೆಗಳಲ್ಲಿ ಪ್ರಶ್ನಿಸಬೇಕು.
ಅಮೆರಿಕದಲ್ಲಿ ಸಾಕುವ ಪ್ರತಿ ಹಸುವಿಗೆ ೧೦ ಹೆಕ್ಟೇರ್ ಭೂಮಿ ಮೀಸಲಿದೆ. ಭಾರತದಲ್ಲಿ ಪ್ರತಿ ಕುಟುಂಬಕ್ಕೆ ೧.೪೭ ಹೆಕ್ಟೇರ್ ಭೂಮಿ ಇದೆ. ಯೂರೋಪಿನಲ್ಲಿ ಸಾಕುವ ಪ್ರತಿ ಹಸುವಿಗೆ ದಿನವೊಂದಕ್ಕೆ ೧೫೦ ರೂಪಾಯಿ ಸಬ್ಸಿಡಿ ನೀಡಲಾಗುತ್ತಿದೆ. ಭಾರತದಲ್ಲಿ ಒಬ್ಬ ವ್ಯಕ್ತಿಯ ದಿನದ ಆದಾಯ ೫೦ ರೂ. ಮೀರುವುದಿಲ್ಲ. ಇಂಥ ಅಸಮಾನತೆಗಳು ತುಂಬಿ ತುಳುಕುತ್ತಿರುವ ಸನ್ನಿವೇಶದಲ್ಲಿ ಭಾರತೀಯರನ್ನು ಭಾರತದ ನೆಲೆಯಲ್ಲೇ ಯೋಚಿಸಬೇಕು. ತಲಾ ಆದಾಯದ ವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕಾಗಿದೆ. ಬ್ರಿಟಿಷ್ ವಸಾಹತು ಮೂಲಕ ದೇಶ ಪ್ರವೇಶ ಮಾಡಿದ ಕೈಗಾರಿಕೀಕರಣ ಕೆಲವು ಕೇಡಿನ ಅಂಶಗಳನ್ನು ದೇಶದ ಆರ್ಥಿಕತೆಯ ಮೇಲೆ ಹೇರಿತು. ಆಗಲೇ ಕೆಲವು ಕುಲಕಸುಬುಗಳು ಸ್ವಲ್ಪ ಪ್ರಮಾಣದಲ್ಲಿ ನಲುಗಿದವು. ಆದರೆ ಇಂದಿನ ಮುಕ್ತ ಮಾರುಕಟ್ಟೆ ನೀತಿ ಕೃಷಿಯನ್ನು ಲಾಭದಾಯಕ ಉದ್ಯಮ ಮಾಡುವ ಹೆಸರಿನಲ್ಲಿ ಸಂಪೂರ್ಣ ನಾಶ ಮಾಡುತ್ತಿದೆ. ಅದಕ್ಕಾಗಿ ಶ್ರೀಮಂತ ವಿಶ್ವ ವಾಣಿಜ್ಯ ಸಂಘಟನೆಯನ್ನು ಸ್ಥಾಪಿಸಿಕೊಂಡಿವೆ. ಇದು ಜನಸಾಮಾನ್ಯರಿಗೆ ಗೊತ್ತಾಗದಂಥ ಗುಲಾಮಗಿರಿ.
ಎಣ್ಣೆ ಕಾಳು ವ್ಯಾಪಾರಕ್ಕೆ ಸಂಬಂಸಿದಂತೆ.೧೯೯೨ರಲ್ಲಿ ಅಮೆರಿಕ ಮತ್ತು ಯೂರೋಪ್ ನಡುವೆ ಏರ್ಪಟ್ಟಿದ್ದ ಕದನವನ್ನು ಸರಿಪಡಿಸಿಕೊಳ್ಳಲು ಮಾಡಿಕೊಂಡ ಒಪ್ಪಂದವನ್ನು ಇಂದು ಎಲ್ಲ ದೇಶಗಳ ಮೇಲೆ ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ. ಸ್ಥಳೀಯ ಪಾನೀಯಗಳನ್ನು ನಾಶಮಾಡಿ ಪೆಪ್ಸಿ ,ಕೊಕಾಕೋಲಾದಂಥ ವಿಷ ಕುಡಿಸುವ ನೀತಿಗಳಿಗೆ ಮಾರಕವಾಗದಂತೆ ಕಾಯ್ದುಕೊಳ್ಳುವುದು ಮುಕ್ತ ಮಮಾರುಕಟ್ಟೆಯ ಉದ್ದೇಶ. ಇವೆಲ್ಲ ಕೃಷಿ ಸಾರ್ವಭೌಮತ್ವಕ್ಕೆ ತಡೆಯೊಡ್ಡುತ್ತಿರುವುದರಿಂದ ಇವುಗಳ ಸಮಸ್ಯೆಗಳ ಚರ್ಚೆಯೇ ಡಬ್ಲ್ಯೂಟಿಒ ಸಭೆಯ ಮುಖ್ಯ ವಿಷಯವಾಗಬೇಕು.

ಮಸನಬು ಫುಕೋಕಾ- ಇದು ಒಂದು ಹುಲ್ಲಿನ ಕ್ರಾಂತಿ

ಕೃಷಿಯೇ ಬದುಕಿನ ವಿಶ್ವ ವಿದ್ಯಾಲಯ. ಅದರಿಂದಲೇ ಬದುಕಿನ ಎಲ್ಲ ಸತ್ಯಗಳ ಅರಿವು ಸಾಧ್ಯ ಎಂದು ಪ್ರತಿಪಾದಿಸಿದವರು ಜಪಾನಿನ ಸಹಜ ಕೃಷಿಯ ಪಿತಾಮಹ ಮಸನಬು ಫುಕೋಕಾ.
ಮನುಷ್ಯ ಮತ್ತು ಕೃಷಿ ಅಥವಾ ಸಹಜ ಜೀವ ವೈವಿಧ್ಯಗಳನ್ನು, ವೈರುದ್ಯಗಳನ್ನು ಗಮನಿಸಿ ಐದು ದಶಗಳ ಹಿಂದೆಯೇ ಸಹಜ ಕೃಷಿ ಎಂಬ ಜೀವಪರ ಸಿದ್ಧಾಂತವನ್ನು ಜಗತ್ತಿಗೆ ಪರಿಚಯಿಸಿದವರು ಮತ್ತು ಅದರೊಂದಿಗೆ ಬದುಕು ಕಟ್ಟಿಕೊಂಡವರು ಫುಕೋಕಾ.
ಪ್ರಕೃತಿ ಮತ್ತು ಮನುಷ್ಯನ ನಡುವೆ ಇದ್ದ ಸಹಜ ಸಂಬಧಗಳು ನಾಶವಾಗುತ್ತಿರುವ, ರಾಸಾಯನಿಕ ವಿಷ ಕಂದಕಗಳು ಸೃಷ್ಟಿಯಾಗುತ್ತಿರುವುದನ್ನು ತಡೆಯಬೇಕಾದರೆ ಅದು ಸಹಜ ಕೃಷಿಯಿಂದ ಮಾತ್ರ ಸಾಧ್ಯ ಎಂದು ಸಾರಿದ್ದವರು ಫುಕೋಕಾ. ತನ್ನ ಜೀವಿತದುದ್ದಕ್ಕೂ ರಾಸಾಯನಿಕ ಕೃಷಿಯನ್ನು ವಿರೋಸುತ್ತ ಸಹಜ ಕೃಷಿಗಾಗಿ ದುಡಿದ.
ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ್ದ ಫುಕೋಕಾ ಅಸಾಮಾನ್ಯ ಚಿಂತನೆಯ ತತ್ತ್ವಜ್ಞಾನಿಯಾಗಿ ಬೆಳೆದ. ಸಹಜ ಕೃಷಿಯ ಸಾಂದರ್ಭಿಕತೆಯನ್ನು ಅರಿತು ಅದನ್ನು ಸಾರ್ವತ್ರೀಕರಿಸುವತ್ತ ಹೆಜ್ಜೆಹಾಕಿದ. ಅದರಿಂದ ಅನೇಕಬಾರಿ ಎಡವಿ ಸೋತು ಮರುಗಿದ. ಜಗತ್ತು ಸಾಗುವ ದಿಕ್ಕನ್ನು ತಾನು ಗಮನಿಸುತ್ತಿಲ್ಲ ಎಂದು ಹತಾಶನಾದ. ಆದರೆ ಗುರಿಯಿಂದ, ನಂಬಿದ ಸಿದ್ಧಾಂತಗಳಿಂದ ವಿಮುಖನಾಗಲಿಲ್ಲ. ಸೋಲು ಗೆಲುವಿನ ಏರಿಳಿತಗಳನ್ನು ಸಮಾನವಾಗಿಯೇ ಸ್ವೀಕರಿಸಿ ಹಂತಹಂತವಾಗಿ ದೊರೆತ ಗೆಲುವನ್ನು ಮೆಟ್ಟಿಲಾಗಿ ಬಳಸಿಕೊಂಡು ಅಲ್ಲೇ ವಿಜಯ ಸಾಸಿದ. ನಿರ್ಲಕ್ಷ್ಯಕ್ಕೊಳಗಾಗಿದ್ದ ಸಹಜ ಕೃಷಿಯತ್ತ ಎಲ್ಲರೂ ಬರುವಂತೆ ಮಾಡಿದ ಅದಕ್ಕಾಗಿ ‘ಒಂದು ಹುಲ್ಲಿನ ಕ್ರಾಂತಿ’ ಎಂಬ ಪುಸ್ತಕ ಬರೆದು ತಾನು ಇಟ್ಟ ಗೆಲುವಿನ ಹೆಜ್ಜೆಗಳನ್ನು ಅದರಲ್ಲಿ ದಾಖಲಿಸಿದ. ಓದಿದ ಅನೇಕರು ಪ್ರಭಾವಿತರಾಗಿ ಸಹಜ ಕೃಷಿಯತ್ತ ಹೊರಳಿದರು.
ಬೇಸಾಯ ಮಣ್ಣಿನಲ್ಲಿರುವ ಅಸಂಖ್ಯ ಜೀವರಾಶಿಯನ್ನು ನಾಶಮಾಡುತ್ತದೆ ಭೂಮಿಗೆ ಉಳುಮೆ ಅನಗತ್ಯ, ರಸಾಯನಿಕ ಗೊಬ್ಬರವಂತೂ ಬಳಸಲು ಯೋಗ್ಯವೇ ಅಲ್ಲ ಎಂದು ಪ್ರತಿಪಾದಿಸಿದ ಅದರಂತೆ ತಾನೂ ನಡೆದು ಯಶಸ್ವಿಕೃಷಿನನೆನಿಸಿಕೊಂಡ ಅಂದಿನಿಂದ ಹೊಸ ‘ಸಹಜ ಕೃಷಿ’ ಪದ್ಧತಿಯನ್ನು ಜಾರಿಗೆ ತಂದ. ಅದೇ ಇಂದು ಹೆಚ್ಚು ಪ್ರಚಾರಕ್ಕೆ ಬರುತ್ತಿದೆ.
ಮೂಲತಃ ಕೃಷಿಕನಲ್ಲದಿದ್ದರೂ ಕೃಷಿಯ ಅನ್ವೇಷಕನಾಗಿ,ಅದರ ಆಳ ವಿಸ್ತಾರಗಳನ್ನು ತಿಳಿಸು ಜನರಿಗೆ ಹೇಳುತ್ತ ತತ್ವಜ್ಞಾನಿಯಾಗಿ ಕಂಗೊಳಿಸಿದ. ವರ್ತಮಾನದ ಜಗತ್ತಿಗೆ ಅನೇಕ ದೃಷ್ಟಿ ಕೋನದಿಂದ ಒಪ್ಪಿತವಾಗುವ ಸಿದ್ಧಾಂತ ಆತನದು.
ಹಲವಾರು ರೋಗ ರುಜಿನಗಳಿಂದ ಬಳಲುತ್ತಿರುವ, ಆಹಾರವೇ ವಿಷವಾಗುತ್ತಿರುವ ಈ ಹೊತ್ತಿನಲ್ಲಿ ಜಗತ್ತು ತಾನು ತಪ್ಪಿದ ದಾರಿಯನ್ನು ಹುಡುಕುತ್ತಿದೆ. ಅದಕ್ಕೆ ಫುಕೋಕ ಸಿದ್ದಾಂತಗಳಲ್ಲಿ ಉತ್ತರವಿದೆ. ‘ಆಸೆಗಳ ಜೈಲಿನಲ್ಲಿ ನಿಂತ ಮನುಷ್ಯ ಸಹಜ ಬದುಕನ್ನು ಮಾರಿಕೊಳ್ಳುತ್ತಾನೆ. ಅದರಿಂದ ಹೊರಬರಬೇಕಾದರೆ ಪ್ರಕೃತಿಯ ಸಹಜ ಸೌಂದರ್ಯದಿಂದ ಮಾತ್ರ ಸಾಧ್ಯ, ಪ್ರಕೃತಿಯನ್ನು ಕಲುಷಿತವಾಗದಂತೆ ಕಾಯ್ದುಕೊಳ್ಳುವ ಜವಾಬ್ದಾರಿ ಎಲ್ಲರದೂ’ ಎಂದು ಪ್ರತಿಪಾದಿಸಿದ್ದ ಉದಾತ್ತ ಜೀವಿಯನ್ನು ಇಂದು ಜಗತ್ತು ಸ್ಮರಿಸುತ್ತಿದೆ.

ಸರಕಾರ ಇರೋದು ಅಕಾರದಲ್ಲಿರೊರ ಪರ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ರಿ


ರಾಜಕಾರಣಕ್ಕೂ ಪ್ರಾಮಾಣಿಕತೆಗೂ ಎಣ್ಣೆ ಸೀಗೇಕಾಯಿ ಸಂಬಂಧ. ರಾಜಕಾರಣದಲ್ಲಿ ಪ್ರಾಮಾಣಿಕರಾಗಿರುವುದು, ಪ್ರಾಮಾಣಿಕರು ರಾಜಕಾರಣ ಮಾಡುವುದು ಎಂದರೆ ಪೂರ್ವ ಪಶ್ಚಿಮಗಳು ಒಂದಾದಂತೆ ಎನ್ನುವ ವಾತಾವರಣ ಸಮಾಜದಲ್ಲಿ ನಿರ್ಮಾಣವಾಗಿದೆ. ಆ ಕ್ಷೇತ್ರದಲ್ಲಿರುವ ಪ್ರಾಮಾಣಿಕರನ್ನೂ ಸಮಾಜ ಅದೇ ದೃಷ್ಟಿಯಿಂದ ನೋಡುತ್ತಿದೆ. ರಾಜಕಾರಣಿ ಇದ್ದದ್ದನ್ನು ಇಂದ್ದಂತೆ ಹೇಳುವುದು ಅದನ್ನು ಅರಗಿಸಿಕೊಳ್ಳುವು ಒಂದು ರೀತಿಯ ಸವಾಲು. ಕಾರಣ, ಪ್ರಾಮಾಣಿಕತೆ-ರಾಜಕಾರಣದ ನಡುವೆ ಇರುವ ಕಂದರ ಅಷ್ಟು ದೊಡ್ಡದು. ವಕ್ ಮತ್ತು ಹಜ್ ಖಾತೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಪ್ರೊ.ಮುಮ್ತಾಜ್ ಆಲಿ ಖಾನ್ ಅವರದು ವಿಶೇಷ ವ್ಯಕ್ತಿತ್ವ. ಸಧ್ಯದ ರಾಜಕಾರಣದಲ್ಲಿರುವ ಸಾಹಿತಿಯೂ ಆಗಿರುವ ಅವರು ಸತ್ಯದ ಕಹಿಗಳನ್ನು ಹೇಳುವಾಗ ಅದರ ಎಡಬಲಗಳನ್ನು ಯೋಚಿಸುವುದೇ ಇಲ್ಲ.
ಇವರು ಆಡಿದ ಮಾತುಗಳು ಮತಾಂಧರೂ ಸೇರಿದಂತೆ ಹಲವರ ಟೀಕೆಗೆ ಗುರಿಯಾಗಿವೆ. ಇವರ ನೇರ ಮಾತು, ಪ್ರಾಮಾಣಿಕತೆಯೇ ದೌರ್ಭಲ್ಯಗಳಾಗಿಯೂ ಕಂಡ ಉದಾಹರಣೆಗಳಿವೆ.
ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಸಚಿವರನ್ನು ಬಿಜೆಪಿಯ ಕೆಲವು ಮುಖಂಡರು ಭೇಟಿ ಮಾಡಿ, ‘ಜಿಲ್ಲಾಡಳಿತದ ಬಿಗಿಯಿಲ್ಲದೆ ತಾಲೂಕಿನಲ್ಲಿ ಅಕಾರಿಗಳು ಭ್ರಷ್ಟರಾಗಿದ್ದಾರೆ ಇದರಿಂದ ಜನಸಾಮಾನ್ಯರ ಯಾವುದೇ ಕೆಲಸಗಳಾಗುತ್ತಿಲ್ಲ’ ಎಂದು ದೂರಿದರು. ಇದನ್ನು ಕೇಳಿದ ಸಚಿವರು, ‘ಸರಕಾರ ಹಾಗೂ ಅಕಾರಿಗಳಿರೋದು ಅಕಾರದಲ್ಲಿರೊರ ಪರವೇ ಹೊರತು ಸಾಮಾನ್ಯ ಜನರಪರವಾಗಿ ಅಲ್ಲ. ಆದ್ದರಿಂದ ಏನ್ಮಾಡೋದು ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ರಿ’ ಎಂದು ಪ್ರೊಫೆಸರ್ ಆಳುವವರ ಧೋರಣೆಗಳನ್ನು ತಣ್ಣಗೆ ಬಿಚ್ಚಿಟ್ಟರು. ಅದಕ್ಕೆ ಸುಮ್ಮನಾಗದ ಕಾರ್ಯಕರ್ತರು, ‘ಅಲ್ಲ ಸಾರ್ ಖಾತೆ ಮಾಡೋದಕ್ಕೂ ಹಣ ಕೇಳ್ತಾರೆ, ಹಣ ಕೊಟ್ಟರೂ ಕೆಲವರು ಕೆಲ್ಸ ಮಾಡ್ತಿಲ್ಲ ಹಿಂಗಾದ್ರೆ ಹೆಂಗೆ’ ಎಂದು ಮರುಪ್ರಶ್ನೆ ಹಾಕಿಯೇಬಿಟ್ಟರು ಅದಕ್ಕೆ ಸಚಿವರು, ‘ಅಯ್ಯೊ ನಿಮ್ಮದು ಇರಲಿ, ದೇವನಹಳ್ಳಿ ಬಳಿ ಇರೋ ನನ್ನ ಜಮೀನಿನ ಖಾತೆ ಬದಲಾವಣೆಗೆ ಅರ್ಜಿ ಕೊಟ್ಟು ಮೂರು ವರ್ಷ ಕಳೆದರೂ ಕೆಲಸ ಆಗಲಿಲ್ಲ. ನಾನು ಮಿನಿಷ್ಟ್ರಾದ ಮೇಲೆ ಖಾತೆ ಮಾಡಿಸಿಕೊಂಡೆ ಏನ್ಮಾಡೋದು ಹೇಳಿ’ ಎಂದು ಕೇಳಿರು ಇದರಿಂದ ದೂರು ನೀಡಲುಹೋಗಿದ್ದವರೇ ಒಂದು ಕ್ಷಣ ತಬ್ಬಿಬ್ಬಾಗಿದ್ದರು.
ಸಾರ್ ಇಲ್ಲಿನ ತಹಸೀಲ್ದಾರ್ ‘ನಾನು ಜಿಲ್ಲಾ ಉಸ್ತುವಾರಿ ಸಚಿವರ ಸಂಬಂ’ ಎಂದು ಹೇಳಿಕೊಂಡು ದಬ್ಬಾಳಿಕೆ ಮಾಡ್ತ್ತಿದ್ದಾರೆ ಅವರೊಬ್ಬರನ್ನಾದರೂ ಟ್ರಾನ್ಸ್‌ಫರ್ ಮಾಡಿಸ್ರಿ ಎಂದಾಗ, ‘ಆಕೆ ನನ್ನ ಮಗಳಿದ್ದಂತೆ. ಹೆಣ್ಣುಮಕ್ಕಳ ಮೇಲೆ ಹಾಗೆಲ್ಲ ಆಕ್ಷನ್ ತಗೊಳ್ಳೋದು ನನ್ನ ಜಾಯಮಾನ ಅಲ್ರಿ’ ಎಂದುಬಿಡೋದೆ?
ಅದೊಂದು ದಿನ ಸಚಿವರು ಬಂದರು ಅವತ್ತು ಎರಡನೇ ಶನಿವಾರ. ಅವರ ಬಳಿ ಯಾವೊಬ್ಬ ಅಕಾರಿಯೂ ಇರಲ್ಲಿ. ಅದನ್ನು ನೋಡಿದ ಕಾರ್ಯಕರ್ತರು, ‘ಸಾರ್ ನೀವು ಜಿಲ್ಲಾ ಉಸ್ತುವಾರಿ ಸಚಿವರು. ಬೆಂಗಾವಲಿನ ಪೊಲೀಸ್ ಬಿಟ್ಟರೆ ಯಾವೊಬ್ಬ ಅಕಾರಿಯೂ ಜತೆಗಿಲ್ಲ. ಅಕಾರಿಗಳ ಮೇಲೆ ನಿಮ್ಮ ಹಿಡಿತ ಎಷ್ಟರಮಟ್ಟಿಗೆ ಇದೆ ಅನ್ನೋದು ಇದರಿಂದ ಗೊತ್ತಾಗುತ್ತೆ’ ಎಂದಾಗ, ‘ಇವತ್ತು ಸೆಕೆಂಡ್ ಸಾಟರ್ಡೆ. ಸರಕಾರಿ ರಜೆ. ಅಕಾರಿಗಳಿಗೆ ಮನೆ -ಮಠ, ಹೆಂಡತಿ ಮಕ್ಕಳು ಇರಲ್ವೆ’ ಎಂದು ಅವರೇ ಪ್ರಶ್ನಿಸಿದ್ದರು.
ಅವರ ಉಸ್ತುವಾರಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾ.ಪಂ.ವೊಂದರ ಆವರಣದಲ್ಲಿ ಅವೈಜ್ಞಾನಿಕವಾಗಿ ತೆಗೆದಿದ್ದ ನೀರಿನ ತೊಟ್ಟಿಗೆ ಮಗುವೊಂದು ಬಿದ್ದು ಮೃತಪಟ್ಟಿತ್ತು. ಕುಟುಂಬಕ್ಕೆ ಸಾಂತ್ವನ ಹೇಳಲು ಸಚಿವರು ತೆರಳಿದ್ದರು. ತೊಟ್ಟಿಯನ್ನು ವೀಕ್ಷಿಸಿ, ಈ ಘಟನೆ ಸಂಭವಿಸಲು ತೊಟ್ಟಿ ನಿರ್ಮಿಸಿದ ಗುತ್ತಿಗೆದಾರ, ಗ್ರಾ.ಪಂ.ಕಾರ್ಯದರ್ಶಿ ನಿರ್ಲಕ್ಷ್ಯ ಕಾರಣ. ಕಾಮಗಾರಿ ಅವೈಜ್ಞಾನಿಕವಾಗಿರುವುದರಿಂದ ತಪ್ಪು ಮಾಡಿದವರಿಂದಲೇ ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ಕೊಡಿಸುವಂತೆ ಹಿರಿಯ ಅಕಾರಿಗಳಿಗೆ ಸೂಚಿಸಿದರು. ಯಾರು ತಪ್ಪು ಮಾಡುತ್ತಾರೋ ಅವರಿಗೇ ಶಿಕ್ಷೆಯಾಗಬೇಕು. ಎಲ್ಲರ ತಪ್ಪುಗಳಿಗೆ ಸರಕಾರ ಹಣ ನೀಡುತ್ತಹೋದರೆ ಇಂಥ ತಪ್ಪುಗಳು ಮರುಕಳಿಸುತ್ತಲೇ ಇರುತ್ತವೆ ಎಂದು ಈ ಆದೇಶ ನೀಡಿದ್ದರು. ಅಲ್ಲೇ ಇದ್ದ ಕೆಲವು ಗ್ರಾಮಸ್ಥರು ಸರಕಾರದಿಂದ ಎಷ್ಟು ಪರಿಹಾರ ಕೊಡಿಸ್ತೀರಿ ಅನ್ನೊದನ್ನು ಘೋಷಣೆ ಮಾಡಿ ಎಂದು ಪಟ್ಟು ಹಿಡಿದರು.
‘ಪರಿಹಾರ ಇಷ್ಟೆ ಕೊಡಿಸ್ತಿನಿ ಅಂತ ಹೇಳೋಕಾಗೊಲ್ಲ, ಅದಕ್ಕೆಲ್ಲ ಕೆಲವು ನಿಯಮಗಳಿವೆ ಅವನ್ನು ಪಾಲಿಸಬೇಕಾಗುತ್ತದೆ ಎಂದರು. ಇದರಿಂದ ರೊಚ್ಚಿಗೆದ್ದ ಕೆಲವರು ಧರಣಿ ನಡೆಸುವುದಾಗಿ ಧಮಕಿ ಹಾಕಿದರು. ಧರಣಿ? ಮಾಡ್ಕೊಳ್ಳಿ ನನಗೇನು ಎಂದು ಪ್ರೊಫೆಸರ್ ಸಾಹೇಬರು ಕಾರಿನತ್ತ ಹೊರಟರು. ಧರಣಿ ಮಾಡಲು ನಿರ್ಧರಿಸಿದವರು ಏನು ಮಾಡಬೇಕೆಂದು ಗೊತ್ತಾಗದೆ ಕಣ್ ಕಣ್ ಬಿಡತೊಡಗಿದ್ದರು.
ಬೆಂಗಳೂರಿನ ಹೋಟೆಲ್ ವಿಂಡ್ಸರ್ ಮ್ಯಾನರ್ ಜಾಗದ ಬಗ್ಗೆಯೂ ಅವರು ‘ಇದು ವಕ್ ಆಸ್ತಿ ಇದನ್ನು ಹೋಟೆಲ್ ನಡೆಸಲು ಕೊಟ್ಟಿದ್ದಾರೆ. ಇಲ್ಲಿ ಹಂದಿ ತಿನ್ನುತ್ತಾರೆ, ಕುರಾನ್‌ನಲ್ಲಿ ಇದಕ್ಕೆ ಅವಕಾಶವಿಲ್ಲ ಇದು ಧರ್ಮ ದ್ರೋಹ. ಇದಕ್ಕೆ ಅವಕಾಶ ನೀಡಿದವರೂ ಧರ್ಮ ದ್ರೋಹಿಗಳು’ ಎಂದು ಪ್ರಮಾಮಾಣಿಕವಾಗಿ ನುಡಿದು ಸುದ್ದಿಯಾಗಿದ್ದರು.
ಮುಜರಾಯಿ ಸಚಿವ ಕೃಷ್ಣಯ್ಯ ಶಟ್ಟಿ ಕೈಲಾಸ ಯಾತ್ರಿಗಳಿಗೆ ಲಾಡು ಹಂಚಿದರೆ, ಮುಮ್ತಾಜ್‌ಅಲಿಖಾನ್ ಅವರು ಹಜ್ ಯಾತ್ರಿಗಳಿಗೆ ಖರ್ಜೂರ ಹಂಚಿದ್ದರು.
ಮಂತ್ರಿಗಳು ರಾಜರು, ಅವರ ಮಕ್ಕಳು ರಾಜಕುಮಾರರು, ಕಾನೂನುಗಳಿರುವುದು ದೊಡ್ಡವರ ಮಕ್ಕಳು ಉಲ್ಲಂಘಿಸಲು ಎನ್ನುವಂಥ ವಾತಾವರಣವಿದೆ. ಆದರೆ ಮುಮ್ತಾಜ್ ಅಲಿ ಖಾನ್ ಅವರು ಎಂದೂ ಅಂಥ ಠೀವಿಯಿಂದ ಬೀಗಿದವರಲ್ಲ. ಅವರು ಸಚಿವರಾಗಿದ್ದಾಗಲೇ ಸ್ಕೂಟರ್ ಅಪಘಾತದಲ್ಲಿ ಪುತ್ರ ಮೃತಪಟ್ಟ. ಇರಿಂದ ಅವರು ತೀವ್ರನೊಂದಿದ್ದರು. ಮನಸು ಮಾಡಿದ್ದರೆ ವಕ್ ಮಂಡಳಿಯಿಂದ ಉತ್ತಮ ದರ್ಜೇಯ ಕಾರುಗಳನ್ನು ತರಿಸಿ ಮಗನನ್ನು ಪೊಲೀಸ್ ಬೆಂಗಾವಲಿನಲ್ಲ ಕಳಿಸಿಕೊಡಬಹುದಾಗಿತ್ತು. ಆದರೆ ಅವರು ಎಂದೂ ಹಾಗೆ ಅಕಾರ ದುರುಪಯೋಗಪಡಿಸಿಕೊಂಡವರೂ ಅಲ್ಲ, ಅದನ್ನು ಅನಗತ್ಯವಾಗಿ ಮೈಮೇಲೆ ಎಳೆದುಕೊಂಡು ಗುದ್ದಾಡಿದವರೂ ಅಲ್ಲ.
‘ಲಂಚ ತಗೊಳ್ಳೋದು ಅಪರಾಧ, ಲಂಚ ತಿನ್ನುವವರು ಪಾಪಿಗಳು, ಅವರು ನರಕಕ್ಕೆ ಹೋಗುತ್ತಾರೆ’ ಎಂಬುದನ್ನು ಅವರು ಆಗಾಗ ವೇದಿಕೆಗಳಲ್ಲಿ ಹೇಳುತ್ತಲೇ ಇರುತ್ತಾರೆ. ಸಮಾಜದಲ್ಲಿ ನಡೆಯುವ ಅನ್ಯಾಯದ ಬಗ್ಗೆ ಮತ್ತು ಅದನ್ನು ತಡೆಯಲಾಗದ ಬಗ್ಗೆ ಅವರಲ್ಲಿ ಯಾವಾಗಲೂ ಒಂದು ಬೇಸರ, ಆತಂಕ ಮನೆಮಾಡಿರುತ್ತದೆ. ಯಾರಾದರೂ ಬಂದು ಸಚಿವರನ್ನು ಭೇಟಿ ಮಾಡಿ ಸಾರ್.... ನನ್ನ ಕೆಲಸ ಆಗಿಲ್ಲ ಎಂದರೆ ತಕ್ಷಣ ಜಿಲ್ಲಾಕಾರಿಗೆ ಫೋನ್ ಮಾಡಿ ‘ಏನ್ರಿ ನೀವು ಸರಿಯಾಗಿ ಕೆಲಸ ಮಾಡಲ್ಲ ಜನ ನನ್ನ ಮೇಲೆ ನಂಬಿಕೆ ಕಳೆದುಕೊಳ್ತಿದ್ದಾರೆ. ನನ್ನ ಸರಳತೆಯನ್ನು ನೀವು ದೌರ್ಭಲ್ಯ ಅಂಥ ಭಾವಿಸಬಾರದು’ ಎಂದು ಮತ್ತೊಂದು ಮನವಿ ಮಾಡುತ್ತಾರೆ. ‘ನೋಡ್ರಿ ನನಿಗೆ ಹಣ ಮಾಡುವ ಆಸೆ ಇಲ್ಲ, ಭ್ರಷ್ಟ ರಾಜಕಾರಣಿ ಎಂದು ‘ಕೀರ್ತಿ’ ಪಡೆಯುವ ಹುಮ್ಮಸ್ಸಿಲ್ಲ, ಜಿಲ್ಲೆಯ ಅಭಿವೃದ್ಧಿ ನನ್ನ ಗುರಿ ಎನ್ನುತ್ತಾರೆ. ಆದರೂ ಅವರ ಉಸುವಾರಿ ಜಿಲ್ಲೆ ಭಿವೃದ್ಧಿಯಲ್ಲಿ ಅಷ್ಟಕ್ಕಷ್ಟೆ ಎನ್ನುವುದು ಸ್ಥಳೀಯರ ಮತ್ತು ಪ್ರತಿಪಕ್ಷದವರ ಆರೋಪ. ಸಚಿವರ ಬಳಿ ಅನಗತ್ಯ ಪೊಲೀಸ್ ಪಹರೆ ಇರುವುದಿಲ್ಲ, ಭಟ್ಟಂಗಿಗಳಿಗೆ ಜಾಗವೇ ಇಲ್ಲ, ‘ಹೌದಪ್ಪ’ಗಳು ಹತ್ತುಮಾರು ದೂರ. ರಾಜಕಾರಣಿಗಳು ಎಂದೂ ಒಪ್ಪಲಾಗದ ಸರಳತೆ, ನೇರ ನಡೆ ನುಡಿ ಅವರದು. ಯಾರೇ ಹೋದರೂ ಅವರನ್ನು ನೇರವಾಗಿ ಭೇಟಿಮಾಡಿ ಮಾತನಾಡಬಹುದಾದಷ್ಟು ಪ್ರಜಾಪ್ರಭುತ್ವವಿರುತ್ತದೆ. ಇಲ್ಲಿ ಕೆಲಸ ಕಡಿಮೆ. ಪ್ರಾಮಾಣಿಕತೆ ಜಾಸ್ತಿ!

ಸರಕಾರ ಇರೋದು ಅಕಾರದಲ್ಲಿರೊರ ಪರ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ರಿ ರಾಜಕಾರಣಕ್ಕೂ ಪ್ರಾಮಾಣಿಕತೆಗೂ ಎಣ್ಣೆ ಸೀಗೇಕಾಯಿ ಸಂಬಂಧ. ರಾಜಕಾರಣದಲ್ಲಿ ಪ್ರಾಮಾಣಿಕರಾಗಿರುವುದು, ಪ್ರಾಮಾಣಿಕರು

ಸರಕಾರ ಇರೋದು ಅಕಾರದಲ್ಲಿರೊರ ಪರ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ರಿ
ರಾಜಕಾರಣಕ್ಕೂ ಪ್ರಾಮಾಣಿಕತೆಗೂ ಎಣ್ಣೆ ಸೀಗೇಕಾಯಿ ಸಂಬಂಧ. ರಾಜಕಾರಣದಲ್ಲಿ ಪ್ರಾಮಾಣಿಕರಾಗಿರುವುದು, ಪ್ರಾಮಾಣಿಕರು ರಾಜಕಾರಣ ಮಾಡುವುದು ಎಂದರೆ ಪೂರ್ವ ಪಶ್ಚಿಮಗಳು ಒಂದಾದಂತೆ ಎನ್ನುವ ವಾತಾವರಣ ಸಮಾಜದಲ್ಲಿ ನಿರ್ಮಾಣವಾಗಿದೆ. ಆ ಕ್ಷೇತ್ರದಲ್ಲಿರುವ ಪ್ರಾಮಾಣಿಕರನ್ನೂ ಸಮಾಜ ಅದೇ ದೃಷ್ಟಿಯಿಂದ ನೋಡುತ್ತಿದೆ. ರಾಜಕಾರಣಿ ಇದ್ದದ್ದನ್ನು ಇಂದ್ದಂತೆ ಹೇಳುವುದು ಅದನ್ನು ಅರಗಿಸಿಕೊಳ್ಳುವು ಒಂದು ರೀತಿಯ ಸವಾಲು. ಕಾರಣ, ಪ್ರಾಮಾಣಿಕತೆ-ರಾಜಕಾರಣದ ನಡುವೆ ಇರುವ ಕಂದರ ಅಷ್ಟು ದೊಡ್ಡದು. ವಕ್ ಮತ್ತು ಹಜ್ ಖಾತೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಪ್ರೊ.ಮುಮ್ತಾಜ್ ಆಲಿ ಖಾನ್ ಅವರದು ವಿಶೇಷ ವ್ಯಕ್ತಿತ್ವ. ಸಧ್ಯದ ರಾಜಕಾರಣದಲ್ಲಿರುವ ಸಾಹಿತಿಯೂ ಆಗಿರುವ ಅವರು ಸತ್ಯದ ಕಹಿಗಳನ್ನು ಹೇಳುವಾಗ ಅದರ ಎಡಬಲಗಳನ್ನು ಯೋಚಿಸುವುದೇ ಇಲ್ಲ.
ಇವರು ಆಡಿದ ಮಾತುಗಳು ಮತಾಂಧರೂ ಸೇರಿದಂತೆ ಹಲವರ ಟೀಕೆಗೆ ಗುರಿಯಾಗಿವೆ. ಇವರ ನೇರ ಮಾತು, ಪ್ರಾಮಾಣಿಕತೆಯೇ ದೌರ್ಭಲ್ಯಗಳಾಗಿಯೂ ಕಂಡ ಉದಾಹರಣೆಗಳಿವೆ.
ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಸಚಿವರನ್ನು ಬಿಜೆಪಿಯ ಕೆಲವು ಮುಖಂಡರು ಭೇಟಿ ಮಾಡಿ, ‘ಜಿಲ್ಲಾಡಳಿತದ ಬಿಗಿಯಿಲ್ಲದೆ ತಾಲೂಕಿನಲ್ಲಿ ಅಕಾರಿಗಳು ಭ್ರಷ್ಟರಾಗಿದ್ದಾರೆ ಇದರಿಂದ ಜನಸಾಮಾನ್ಯರ ಯಾವುದೇ ಕೆಲಸಗಳಾಗುತ್ತಿಲ್ಲ’ ಎಂದು ದೂರಿದರು. ಇದನ್ನು ಕೇಳಿದ ಸಚಿವರು, ‘ಸರಕಾರ ಹಾಗೂ ಅಕಾರಿಗಳಿರೋದು ಅಕಾರದಲ್ಲಿರೊರ ಪರವೇ ಹೊರತು ಸಾಮಾನ್ಯ ಜನರಪರವಾಗಿ ಅಲ್ಲ. ಆದ್ದರಿಂದ ಏನ್ಮಾಡೋದು ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ರಿ’ ಎಂದು ಪ್ರೊಫೆಸರ್ ಆಳುವವರ ಧೋರಣೆಗಳನ್ನು ತಣ್ಣಗೆ ಬಿಚ್ಚಿಟ್ಟರು. ಅದಕ್ಕೆ ಸುಮ್ಮನಾಗದ ಕಾರ್ಯಕರ್ತರು, ‘ಅಲ್ಲ ಸಾರ್ ಖಾತೆ ಮಾಡೋದಕ್ಕೂ ಹಣ ಕೇಳ್ತಾರೆ, ಹಣ ಕೊಟ್ಟರೂ ಕೆಲವರು ಕೆಲ್ಸ ಮಾಡ್ತಿಲ್ಲ ಹಿಂಗಾದ್ರೆ ಹೆಂಗೆ’ ಎಂದು ಮರುಪ್ರಶ್ನೆ ಹಾಕಿಯೇಬಿಟ್ಟರು ಅದಕ್ಕೆ ಸಚಿವರು, ‘ಅಯ್ಯೊ ನಿಮ್ಮದು ಇರಲಿ, ದೇವನಹಳ್ಳಿ ಬಳಿ ಇರೋ ನನ್ನ ಜಮೀನಿನ ಖಾತೆ ಬದಲಾವಣೆಗೆ ಅರ್ಜಿ ಕೊಟ್ಟು ಮೂರು ವರ್ಷ ಕಳೆದರೂ ಕೆಲಸ ಆಗಲಿಲ್ಲ. ನಾನು ಮಿನಿಷ್ಟ್ರಾದ ಮೇಲೆ ಖಾತೆ ಮಾಡಿಸಿಕೊಂಡೆ ಏನ್ಮಾಡೋದು ಹೇಳಿ’ ಎಂದು ಕೇಳಿರು ಇದರಿಂದ ದೂರು ನೀಡಲುಹೋಗಿದ್ದವರೇ ಒಂದು ಕ್ಷಣ ತಬ್ಬಿಬ್ಬಾಗಿದ್ದರು.
ಸಾರ್ ಇಲ್ಲಿನ ತಹಸೀಲ್ದಾರ್ ‘ನಾನು ಜಿಲ್ಲಾ ಉಸ್ತುವಾರಿ ಸಚಿವರ ಸಂಬಂ’ ಎಂದು ಹೇಳಿಕೊಂಡು ದಬ್ಬಾಳಿಕೆ ಮಾಡ್ತ್ತಿದ್ದಾರೆ ಅವರೊಬ್ಬರನ್ನಾದರೂ ಟ್ರಾನ್ಸ್‌ಫರ್ ಮಾಡಿಸ್ರಿ ಎಂದಾಗ, ‘ಆಕೆ ನನ್ನ ಮಗಳಿದ್ದಂತೆ. ಹೆಣ್ಣುಮಕ್ಕಳ ಮೇಲೆ ಹಾಗೆಲ್ಲ ಆಕ್ಷನ್ ತಗೊಳ್ಳೋದು ನನ್ನ ಜಾಯಮಾನ ಅಲ್ರಿ’ ಎಂದುಬಿಡೋದೆ?
ಅದೊಂದು ದಿನ ಸಚಿವರು ಬಂದರು ಅವತ್ತು ಎರಡನೇ ಶನಿವಾರ. ಅವರ ಬಳಿ ಯಾವೊಬ್ಬ ಅಕಾರಿಯೂ ಇರಲ್ಲಿ. ಅದನ್ನು ನೋಡಿದ ಕಾರ್ಯಕರ್ತರು, ‘ಸಾರ್ ನೀವು ಜಿಲ್ಲಾ ಉಸ್ತುವಾರಿ ಸಚಿವರು. ಬೆಂಗಾವಲಿನ ಪೊಲೀಸ್ ಬಿಟ್ಟರೆ ಯಾವೊಬ್ಬ ಅಕಾರಿಯೂ ಜತೆಗಿಲ್ಲ. ಅಕಾರಿಗಳ ಮೇಲೆ ನಿಮ್ಮ ಹಿಡಿತ ಎಷ್ಟರಮಟ್ಟಿಗೆ ಇದೆ ಅನ್ನೋದು ಇದರಿಂದ ಗೊತ್ತಾಗುತ್ತೆ’ ಎಂದಾಗ, ‘ಇವತ್ತು ಸೆಕೆಂಡ್ ಸಾಟರ್ಡೆ. ಸರಕಾರಿ ರಜೆ. ಅಕಾರಿಗಳಿಗೆ ಮನೆ -ಮಠ, ಹೆಂಡತಿ ಮಕ್ಕಳು ಇರಲ್ವೆ’ ಎಂದು ಅವರೇ ಪ್ರಶ್ನಿಸಿದ್ದರು.
ಅವರ ಉಸ್ತುವಾರಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾ.ಪಂ.ವೊಂದರ ಆವರಣದಲ್ಲಿ ಅವೈಜ್ಞಾನಿಕವಾಗಿ ತೆಗೆದಿದ್ದ ನೀರಿನ ತೊಟ್ಟಿಗೆ ಮಗುವೊಂದು ಬಿದ್ದು ಮೃತಪಟ್ಟಿತ್ತು. ಕುಟುಂಬಕ್ಕೆ ಸಾಂತ್ವನ ಹೇಳಲು ಸಚಿವರು ತೆರಳಿದ್ದರು. ತೊಟ್ಟಿಯನ್ನು ವೀಕ್ಷಿಸಿ, ಈ ಘಟನೆ ಸಂಭವಿಸಲು ತೊಟ್ಟಿ ನಿರ್ಮಿಸಿದ ಗುತ್ತಿಗೆದಾರ, ಗ್ರಾ.ಪಂ.ಕಾರ್ಯದರ್ಶಿ ನಿರ್ಲಕ್ಷ್ಯ ಕಾರಣ. ಕಾಮಗಾರಿ ಅವೈಜ್ಞಾನಿಕವಾಗಿರುವುದರಿಂದ ತಪ್ಪು ಮಾಡಿದವರಿಂದಲೇ ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ಕೊಡಿಸುವಂತೆ ಹಿರಿಯ ಅಕಾರಿಗಳಿಗೆ ಸೂಚಿಸಿದರು. ಯಾರು ತಪ್ಪು ಮಾಡುತ್ತಾರೋ ಅವರಿಗೇ ಶಿಕ್ಷೆಯಾಗಬೇಕು. ಎಲ್ಲರ ತಪ್ಪುಗಳಿಗೆ ಸರಕಾರ ಹಣ ನೀಡುತ್ತಹೋದರೆ ಇಂಥ ತಪ್ಪುಗಳು ಮರುಕಳಿಸುತ್ತಲೇ ಇರುತ್ತವೆ ಎಂದು ಈ ಆದೇಶ ನೀಡಿದ್ದರು. ಅಲ್ಲೇ ಇದ್ದ ಕೆಲವು ಗ್ರಾಮಸ್ಥರು ಸರಕಾರದಿಂದ ಎಷ್ಟು ಪರಿಹಾರ ಕೊಡಿಸ್ತೀರಿ ಅನ್ನೊದನ್ನು ಘೋಷಣೆ ಮಾಡಿ ಎಂದು ಪಟ್ಟು ಹಿಡಿದರು.
‘ಪರಿಹಾರ ಇಷ್ಟೆ ಕೊಡಿಸ್ತಿನಿ ಅಂತ ಹೇಳೋಕಾಗೊಲ್ಲ, ಅದಕ್ಕೆಲ್ಲ ಕೆಲವು ನಿಯಮಗಳಿವೆ ಅವನ್ನು ಪಾಲಿಸಬೇಕಾಗುತ್ತದೆ ಎಂದರು. ಇದರಿಂದ ರೊಚ್ಚಿಗೆದ್ದ ಕೆಲವರು ಧರಣಿ ನಡೆಸುವುದಾಗಿ ಧಮಕಿ ಹಾಕಿದರು. ಧರಣಿ? ಮಾಡ್ಕೊಳ್ಳಿ ನನಗೇನು ಎಂದು ಪ್ರೊಫೆಸರ್ ಸಾಹೇಬರು ಕಾರಿನತ್ತ ಹೊರಟರು. ಧರಣಿ ಮಾಡಲು ನಿರ್ಧರಿಸಿದವರು ಏನು ಮಾಡಬೇಕೆಂದು ಗೊತ್ತಾಗದೆ ಕಣ್ ಕಣ್ ಬಿಡತೊಡಗಿದ್ದರು.
ಬೆಂಗಳೂರಿನ ಹೋಟೆಲ್ ವಿಂಡ್ಸರ್ ಮ್ಯಾನರ್ ಜಾಗದ ಬಗ್ಗೆಯೂ ಅವರು ‘ಇದು ವಕ್ ಆಸ್ತಿ ಇದನ್ನು ಹೋಟೆಲ್ ನಡೆಸಲು ಕೊಟ್ಟಿದ್ದಾರೆ. ಇಲ್ಲಿ ಹಂದಿ ತಿನ್ನುತ್ತಾರೆ, ಕುರಾನ್‌ನಲ್ಲಿ ಇದಕ್ಕೆ ಅವಕಾಶವಿಲ್ಲ ಇದು ಧರ್ಮ ದ್ರೋಹ. ಇದಕ್ಕೆ ಅವಕಾಶ ನೀಡಿದವರೂ ಧರ್ಮ ದ್ರೋಹಿಗಳು’ ಎಂದು ಪ್ರಮಾಮಾಣಿಕವಾಗಿ ನುಡಿದು ಸುದ್ದಿಯಾಗಿದ್ದರು.
ಮುಜರಾಯಿ ಸಚಿವ ಕೃಷ್ಣಯ್ಯ ಶಟ್ಟಿ ಕೈಲಾಸ ಯಾತ್ರಿಗಳಿಗೆ ಲಾಡು ಹಂಚಿದರೆ, ಮುಮ್ತಾಜ್‌ಅಲಿಖಾನ್ ಅವರು ಹಜ್ ಯಾತ್ರಿಗಳಿಗೆ ಖರ್ಜೂರ ಹಂಚಿದ್ದರು.
ಮಂತ್ರಿಗಳು ರಾಜರು, ಅವರ ಮಕ್ಕಳು ರಾಜಕುಮಾರರು, ಕಾನೂನುಗಳಿರುವುದು ದೊಡ್ಡವರ ಮಕ್ಕಳು ಉಲ್ಲಂಘಿಸಲು ಎನ್ನುವಂಥ ವಾತಾವರಣವಿದೆ. ಆದರೆ ಮುಮ್ತಾಜ್ ಅಲಿ ಖಾನ್ ಅವರು ಎಂದೂ ಅಂಥ ಠೀವಿಯಿಂದ ಬೀಗಿದವರಲ್ಲ. ಅವರು ಸಚಿವರಾಗಿದ್ದಾಗಲೇ ಸ್ಕೂಟರ್ ಅಪಘಾತದಲ್ಲಿ ಪುತ್ರ ಮೃತಪಟ್ಟ. ಇರಿಂದ ಅವರು ತೀವ್ರನೊಂದಿದ್ದರು. ಮನಸು ಮಾಡಿದ್ದರೆ ವಕ್ ಮಂಡಳಿಯಿಂದ ಉತ್ತಮ ದರ್ಜೇಯ ಕಾರುಗಳನ್ನು ತರಿಸಿ ಮಗನನ್ನು ಪೊಲೀಸ್ ಬೆಂಗಾವಲಿನಲ್ಲ ಕಳಿಸಿಕೊಡಬಹುದಾಗಿತ್ತು. ಆದರೆ ಅವರು ಎಂದೂ ಹಾಗೆ ಅಕಾರ ದುರುಪಯೋಗಪಡಿಸಿಕೊಂಡವರೂ ಅಲ್ಲ, ಅದನ್ನು ಅನಗತ್ಯವಾಗಿ ಮೈಮೇಲೆ ಎಳೆದುಕೊಂಡು ಗುದ್ದಾಡಿದವರೂ ಅಲ್ಲ.
‘ಲಂಚ ತಗೊಳ್ಳೋದು ಅಪರಾಧ, ಲಂಚ ತಿನ್ನುವವರು ಪಾಪಿಗಳು, ಅವರು ನರಕಕ್ಕೆ ಹೋಗುತ್ತಾರೆ’ ಎಂಬುದನ್ನು ಅವರು ಆಗಾಗ ವೇದಿಕೆಗಳಲ್ಲಿ ಹೇಳುತ್ತಲೇ ಇರುತ್ತಾರೆ. ಸಮಾಜದಲ್ಲಿ ನಡೆಯುವ ಅನ್ಯಾಯದ ಬಗ್ಗೆ ಮತ್ತು ಅದನ್ನು ತಡೆಯಲಾಗದ ಬಗ್ಗೆ ಅವರಲ್ಲಿ ಯಾವಾಗಲೂ ಒಂದು ಬೇಸರ, ಆತಂಕ ಮನೆಮಾಡಿರುತ್ತದೆ. ಯಾರಾದರೂ ಬಂದು ಸಚಿವರನ್ನು ಭೇಟಿ ಮಾಡಿ ಸಾರ್.... ನನ್ನ ಕೆಲಸ ಆಗಿಲ್ಲ ಎಂದರೆ ತಕ್ಷಣ ಜಿಲ್ಲಾಕಾರಿಗೆ ಫೋನ್ ಮಾಡಿ ‘ಏನ್ರಿ ನೀವು ಸರಿಯಾಗಿ ಕೆಲಸ ಮಾಡಲ್ಲ ಜನ ನನ್ನ ಮೇಲೆ ನಂಬಿಕೆ ಕಳೆದುಕೊಳ್ತಿದ್ದಾರೆ. ನನ್ನ ಸರಳತೆಯನ್ನು ನೀವು ದೌರ್ಭಲ್ಯ ಅಂಥ ಭಾವಿಸಬಾರದು’ ಎಂದು ಮತ್ತೊಂದು ಮನವಿ ಮಾಡುತ್ತಾರೆ. ‘ನೋಡ್ರಿ ನನಿಗೆ ಹಣ ಮಾಡುವ ಆಸೆ ಇಲ್ಲ, ಭ್ರಷ್ಟ ರಾಜಕಾರಣಿ ಎಂದು ‘ಕೀರ್ತಿ’ ಪಡೆಯುವ ಹುಮ್ಮಸ್ಸಿಲ್ಲ, ಜಿಲ್ಲೆಯ ಅಭಿವೃದ್ಧಿ ನನ್ನ ಗುರಿ ಎನ್ನುತ್ತಾರೆ. ಆದರೂ ಅವರ ಉಸುವಾರಿ ಜಿಲ್ಲೆ ಭಿವೃದ್ಧಿಯಲ್ಲಿ ಅಷ್ಟಕ್ಕಷ್ಟೆ ಎನ್ನುವುದು ಸ್ಥಳೀಯರ ಮತ್ತು ಪ್ರತಿಪಕ್ಷದವರ ಆರೋಪ. ಸಚಿವರ ಬಳಿ ಅನಗತ್ಯ ಪೊಲೀಸ್ ಪಹರೆ ಇರುವುದಿಲ್ಲ, ಭಟ್ಟಂಗಿಗಳಿಗೆ ಜಾಗವೇ ಇಲ್ಲ, ‘ಹೌದಪ್ಪ’ಗಳು ಹತ್ತುಮಾರು ದೂರ. ರಾಜಕಾರಣಿಗಳು ಎಂದೂ ಒಪ್ಪಲಾಗದ ಸರಳತೆ, ನೇರ ನಡೆ ನುಡಿ ಅವರದು. ಯಾರೇ ಹೋದರೂ ಅವರನ್ನು ನೇರವಾಗಿ ಭೇಟಿಮಾಡಿ ಮಾತನಾಡಬಹುದಾದಷ್ಟು ಪ್ರಜಾಪ್ರಭುತ್ವವಿರುತ್ತದೆ. ಇಲ್ಲಿ ಕೆಲಸ ಕಡಿಮೆ. ಪ್ರಾಮಾಣಿಕತೆ ಜಾಸ್ತಿ!
ಸರಕಾರ ಇರೋದು ಅಕಾರದಲ್ಲಿರೊರ ಪರ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ರಿ
ರಾಜಕಾರಣಕ್ಕೂ ಪ್ರಾಮಾಣಿಕತೆಗೂ ಎಣ್ಣೆ ಸೀಗೇಕಾಯಿ ಸಂಬಂಧ. ರಾಜಕಾರಣದಲ್ಲಿ ಪ್ರಾಮಾಣಿಕರಾಗಿರುವುದು, ಪ್ರಾಮಾಣಿಕರು ರಾಜಕಾರಣ ಮಾಡುವುದು ಎಂದರೆ ಪೂರ್ವ ಪಶ್ಚಿಮಗಳು ಒಂದಾದಂತೆ ಎನ್ನುವ ವಾತಾವರಣ ಸಮಾಜದಲ್ಲಿ ನಿರ್ಮಾಣವಾಗಿದೆ. ಆ ಕ್ಷೇತ್ರದಲ್ಲಿರುವ ಪ್ರಾಮಾಣಿಕರನ್ನೂ ಸಮಾಜ ಅದೇ ದೃಷ್ಟಿಯಿಂದ ನೋಡುತ್ತಿದೆ. ರಾಜಕಾರಣಿ ಇದ್ದದ್ದನ್ನು ಇಂದ್ದಂತೆ ಹೇಳುವುದು ಅದನ್ನು ಅರಗಿಸಿಕೊಳ್ಳುವು ಒಂದು ರೀತಿಯ ಸವಾಲು. ಕಾರಣ, ಪ್ರಾಮಾಣಿಕತೆ-ರಾಜಕಾರಣದ ನಡುವೆ ಇರುವ ಕಂದರ ಅಷ್ಟು ದೊಡ್ಡದು. ವಕ್ ಮತ್ತು ಹಜ್ ಖಾತೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಪ್ರೊ.ಮುಮ್ತಾಜ್ ಆಲಿ ಖಾನ್ ಅವರದು ವಿಶೇಷ ವ್ಯಕ್ತಿತ್ವ. ಸಧ್ಯದ ರಾಜಕಾರಣದಲ್ಲಿರುವ ಸಾಹಿತಿಯೂ ಆಗಿರುವ ಅವರು ಸತ್ಯದ ಕಹಿಗಳನ್ನು ಹೇಳುವಾಗ ಅದರ ಎಡಬಲಗಳನ್ನು ಯೋಚಿಸುವುದೇ ಇಲ್ಲ.
ಇವರು ಆಡಿದ ಮಾತುಗಳು ಮತಾಂಧರೂ ಸೇರಿದಂತೆ ಹಲವರ ಟೀಕೆಗೆ ಗುರಿಯಾಗಿವೆ. ಇವರ ನೇರ ಮಾತು, ಪ್ರಾಮಾಣಿಕತೆಯೇ ದೌರ್ಭಲ್ಯಗಳಾಗಿಯೂ ಕಂಡ ಉದಾಹರಣೆಗಳಿವೆ.
ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಸಚಿವರನ್ನು ಬಿಜೆಪಿಯ ಕೆಲವು ಮುಖಂಡರು ಭೇಟಿ ಮಾಡಿ, ‘ಜಿಲ್ಲಾಡಳಿತದ ಬಿಗಿಯಿಲ್ಲದೆ ತಾಲೂಕಿನಲ್ಲಿ ಅಕಾರಿಗಳು ಭ್ರಷ್ಟರಾಗಿದ್ದಾರೆ ಇದರಿಂದ ಜನಸಾಮಾನ್ಯರ ಯಾವುದೇ ಕೆಲಸಗಳಾಗುತ್ತಿಲ್ಲ’ ಎಂದು ದೂರಿದರು. ಇದನ್ನು ಕೇಳಿದ ಸಚಿವರು, ‘ಸರಕಾರ ಹಾಗೂ ಅಕಾರಿಗಳಿರೋದು ಅಕಾರದಲ್ಲಿರೊರ ಪರವೇ ಹೊರತು ಸಾಮಾನ್ಯ ಜನರಪರವಾಗಿ ಅಲ್ಲ. ಆದ್ದರಿಂದ ಏನ್ಮಾಡೋದು ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ರಿ’ ಎಂದು ಪ್ರೊಫೆಸರ್ ಆಳುವವರ ಧೋರಣೆಗಳನ್ನು ತಣ್ಣಗೆ ಬಿಚ್ಚಿಟ್ಟರು. ಅದಕ್ಕೆ ಸುಮ್ಮನಾಗದ ಕಾರ್ಯಕರ್ತರು, ‘ಅಲ್ಲ ಸಾರ್ ಖಾತೆ ಮಾಡೋದಕ್ಕೂ ಹಣ ಕೇಳ್ತಾರೆ, ಹಣ ಕೊಟ್ಟರೂ ಕೆಲವರು ಕೆಲ್ಸ ಮಾಡ್ತಿಲ್ಲ ಹಿಂಗಾದ್ರೆ ಹೆಂಗೆ’ ಎಂದು ಮರುಪ್ರಶ್ನೆ ಹಾಕಿಯೇಬಿಟ್ಟರು ಅದಕ್ಕೆ ಸಚಿವರು, ‘ಅಯ್ಯೊ ನಿಮ್ಮದು ಇರಲಿ, ದೇವನಹಳ್ಳಿ ಬಳಿ ಇರೋ ನನ್ನ ಜಮೀನಿನ ಖಾತೆ ಬದಲಾವಣೆಗೆ ಅರ್ಜಿ ಕೊಟ್ಟು ಮೂರು ವರ್ಷ ಕಳೆದರೂ ಕೆಲಸ ಆಗಲಿಲ್ಲ. ನಾನು ಮಿನಿಷ್ಟ್ರಾದ ಮೇಲೆ ಖಾತೆ ಮಾಡಿಸಿಕೊಂಡೆ ಏನ್ಮಾಡೋದು ಹೇಳಿ’ ಎಂದು ಕೇಳಿರು ಇದರಿಂದ ದೂರು ನೀಡಲುಹೋಗಿದ್ದವರೇ ಒಂದು ಕ್ಷಣ ತಬ್ಬಿಬ್ಬಾಗಿದ್ದರು.
ಸಾರ್ ಇಲ್ಲಿನ ತಹಸೀಲ್ದಾರ್ ‘ನಾನು ಜಿಲ್ಲಾ ಉಸ್ತುವಾರಿ ಸಚಿವರ ಸಂಬಂ’ ಎಂದು ಹೇಳಿಕೊಂಡು ದಬ್ಬಾಳಿಕೆ ಮಾಡ್ತ್ತಿದ್ದಾರೆ ಅವರೊಬ್ಬರನ್ನಾದರೂ ಟ್ರಾನ್ಸ್‌ಫರ್ ಮಾಡಿಸ್ರಿ ಎಂದಾಗ, ‘ಆಕೆ ನನ್ನ ಮಗಳಿದ್ದಂತೆ. ಹೆಣ್ಣುಮಕ್ಕಳ ಮೇಲೆ ಹಾಗೆಲ್ಲ ಆಕ್ಷನ್ ತಗೊಳ್ಳೋದು ನನ್ನ ಜಾಯಮಾನ ಅಲ್ರಿ’ ಎಂದುಬಿಡೋದೆ?
ಅದೊಂದು ದಿನ ಸಚಿವರು ಬಂದರು ಅವತ್ತು ಎರಡನೇ ಶನಿವಾರ. ಅವರ ಬಳಿ ಯಾವೊಬ್ಬ ಅಕಾರಿಯೂ ಇರಲ್ಲಿ. ಅದನ್ನು ನೋಡಿದ ಕಾರ್ಯಕರ್ತರು, ‘ಸಾರ್ ನೀವು ಜಿಲ್ಲಾ ಉಸ್ತುವಾರಿ ಸಚಿವರು. ಬೆಂಗಾವಲಿನ ಪೊಲೀಸ್ ಬಿಟ್ಟರೆ ಯಾವೊಬ್ಬ ಅಕಾರಿಯೂ ಜತೆಗಿಲ್ಲ. ಅಕಾರಿಗಳ ಮೇಲೆ ನಿಮ್ಮ ಹಿಡಿತ ಎಷ್ಟರಮಟ್ಟಿಗೆ ಇದೆ ಅನ್ನೋದು ಇದರಿಂದ ಗೊತ್ತಾಗುತ್ತೆ’ ಎಂದಾಗ, ‘ಇವತ್ತು ಸೆಕೆಂಡ್ ಸಾಟರ್ಡೆ. ಸರಕಾರಿ ರಜೆ. ಅಕಾರಿಗಳಿಗೆ ಮನೆ -ಮಠ, ಹೆಂಡತಿ ಮಕ್ಕಳು ಇರಲ್ವೆ’ ಎಂದು ಅವರೇ ಪ್ರಶ್ನಿಸಿದ್ದರು.
ಅವರ ಉಸ್ತುವಾರಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾ.ಪಂ.ವೊಂದರ ಆವರಣದಲ್ಲಿ ಅವೈಜ್ಞಾನಿಕವಾಗಿ ತೆಗೆದಿದ್ದ ನೀರಿನ ತೊಟ್ಟಿಗೆ ಮಗುವೊಂದು ಬಿದ್ದು ಮೃತಪಟ್ಟಿತ್ತು. ಕುಟುಂಬಕ್ಕೆ ಸಾಂತ್ವನ ಹೇಳಲು ಸಚಿವರು ತೆರಳಿದ್ದರು. ತೊಟ್ಟಿಯನ್ನು ವೀಕ್ಷಿಸಿ, ಈ ಘಟನೆ ಸಂಭವಿಸಲು ತೊಟ್ಟಿ ನಿರ್ಮಿಸಿದ ಗುತ್ತಿಗೆದಾರ, ಗ್ರಾ.ಪಂ.ಕಾರ್ಯದರ್ಶಿ ನಿರ್ಲಕ್ಷ್ಯ ಕಾರಣ. ಕಾಮಗಾರಿ ಅವೈಜ್ಞಾನಿಕವಾಗಿರುವುದರಿಂದ ತಪ್ಪು ಮಾಡಿದವರಿಂದಲೇ ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ಕೊಡಿಸುವಂತೆ ಹಿರಿಯ ಅಕಾರಿಗಳಿಗೆ ಸೂಚಿಸಿದರು. ಯಾರು ತಪ್ಪು ಮಾಡುತ್ತಾರೋ ಅವರಿಗೇ ಶಿಕ್ಷೆಯಾಗಬೇಕು. ಎಲ್ಲರ ತಪ್ಪುಗಳಿಗೆ ಸರಕಾರ ಹಣ ನೀಡುತ್ತಹೋದರೆ ಇಂಥ ತಪ್ಪುಗಳು ಮರುಕಳಿಸುತ್ತಲೇ ಇರುತ್ತವೆ ಎಂದು ಈ ಆದೇಶ ನೀಡಿದ್ದರು. ಅಲ್ಲೇ ಇದ್ದ ಕೆಲವು ಗ್ರಾಮಸ್ಥರು ಸರಕಾರದಿಂದ ಎಷ್ಟು ಪರಿಹಾರ ಕೊಡಿಸ್ತೀರಿ ಅನ್ನೊದನ್ನು ಘೋಷಣೆ ಮಾಡಿ ಎಂದು ಪಟ್ಟು ಹಿಡಿದರು.
‘ಪರಿಹಾರ ಇಷ್ಟೆ ಕೊಡಿಸ್ತಿನಿ ಅಂತ ಹೇಳೋಕಾಗೊಲ್ಲ, ಅದಕ್ಕೆಲ್ಲ ಕೆಲವು ನಿಯಮಗಳಿವೆ ಅವನ್ನು ಪಾಲಿಸಬೇಕಾಗುತ್ತದೆ ಎಂದರು. ಇದರಿಂದ ರೊಚ್ಚಿಗೆದ್ದ ಕೆಲವರು ಧರಣಿ ನಡೆಸುವುದಾಗಿ ಧಮಕಿ ಹಾಕಿದರು. ಧರಣಿ? ಮಾಡ್ಕೊಳ್ಳಿ ನನಗೇನು ಎಂದು ಪ್ರೊಫೆಸರ್ ಸಾಹೇಬರು ಕಾರಿನತ್ತ ಹೊರಟರು. ಧರಣಿ ಮಾಡಲು ನಿರ್ಧರಿಸಿದವರು ಏನು ಮಾಡಬೇಕೆಂದು ಗೊತ್ತಾಗದೆ ಕಣ್ ಕಣ್ ಬಿಡತೊಡಗಿದ್ದರು.
ಬೆಂಗಳೂರಿನ ಹೋಟೆಲ್ ವಿಂಡ್ಸರ್ ಮ್ಯಾನರ್ ಜಾಗದ ಬಗ್ಗೆಯೂ ಅವರು ‘ಇದು ವಕ್ ಆಸ್ತಿ ಇದನ್ನು ಹೋಟೆಲ್ ನಡೆಸಲು ಕೊಟ್ಟಿದ್ದಾರೆ. ಇಲ್ಲಿ ಹಂದಿ ತಿನ್ನುತ್ತಾರೆ, ಕುರಾನ್‌ನಲ್ಲಿ ಇದಕ್ಕೆ ಅವಕಾಶವಿಲ್ಲ ಇದು ಧರ್ಮ ದ್ರೋಹ. ಇದಕ್ಕೆ ಅವಕಾಶ ನೀಡಿದವರೂ ಧರ್ಮ ದ್ರೋಹಿಗಳು’ ಎಂದು ಪ್ರಮಾಮಾಣಿಕವಾಗಿ ನುಡಿದು ಸುದ್ದಿಯಾಗಿದ್ದರು.
ಮುಜರಾಯಿ ಸಚಿವ ಕೃಷ್ಣಯ್ಯ ಶಟ್ಟಿ ಕೈಲಾಸ ಯಾತ್ರಿಗಳಿಗೆ ಲಾಡು ಹಂಚಿದರೆ, ಮುಮ್ತಾಜ್‌ಅಲಿಖಾನ್ ಅವರು ಹಜ್ ಯಾತ್ರಿಗಳಿಗೆ ಖರ್ಜೂರ ಹಂಚಿದ್ದರು.
ಮಂತ್ರಿಗಳು ರಾಜರು, ಅವರ ಮಕ್ಕಳು ರಾಜಕುಮಾರರು, ಕಾನೂನುಗಳಿರುವುದು ದೊಡ್ಡವರ ಮಕ್ಕಳು ಉಲ್ಲಂಘಿಸಲು ಎನ್ನುವಂಥ ವಾತಾವರಣವಿದೆ. ಆದರೆ ಮುಮ್ತಾಜ್ ಅಲಿ ಖಾನ್ ಅವರು ಎಂದೂ ಅಂಥ ಠೀವಿಯಿಂದ ಬೀಗಿದವರಲ್ಲ. ಅವರು ಸಚಿವರಾಗಿದ್ದಾಗಲೇ ಸ್ಕೂಟರ್ ಅಪಘಾತದಲ್ಲಿ ಪುತ್ರ ಮೃತಪಟ್ಟ. ಇರಿಂದ ಅವರು ತೀವ್ರನೊಂದಿದ್ದರು. ಮನಸು ಮಾಡಿದ್ದರೆ ವಕ್ ಮಂಡಳಿಯಿಂದ ಉತ್ತಮ ದರ್ಜೇಯ ಕಾರುಗಳನ್ನು ತರಿಸಿ ಮಗನನ್ನು ಪೊಲೀಸ್ ಬೆಂಗಾವಲಿನಲ್ಲ ಕಳಿಸಿಕೊಡಬಹುದಾಗಿತ್ತು. ಆದರೆ ಅವರು ಎಂದೂ ಹಾಗೆ ಅಕಾರ ದುರುಪಯೋಗಪಡಿಸಿಕೊಂಡವರೂ ಅಲ್ಲ, ಅದನ್ನು ಅನಗತ್ಯವಾಗಿ ಮೈಮೇಲೆ ಎಳೆದುಕೊಂಡು ಗುದ್ದಾಡಿದವರೂ ಅಲ್ಲ.
‘ಲಂಚ ತಗೊಳ್ಳೋದು ಅಪರಾಧ, ಲಂಚ ತಿನ್ನುವವರು ಪಾಪಿಗಳು, ಅವರು ನರಕಕ್ಕೆ ಹೋಗುತ್ತಾರೆ’ ಎಂಬುದನ್ನು ಅವರು ಆಗಾಗ ವೇದಿಕೆಗಳಲ್ಲಿ ಹೇಳುತ್ತಲೇ ಇರುತ್ತಾರೆ. ಸಮಾಜದಲ್ಲಿ ನಡೆಯುವ ಅನ್ಯಾಯದ ಬಗ್ಗೆ ಮತ್ತು ಅದನ್ನು ತಡೆಯಲಾಗದ ಬಗ್ಗೆ ಅವರಲ್ಲಿ ಯಾವಾಗಲೂ ಒಂದು ಬೇಸರ, ಆತಂಕ ಮನೆಮಾಡಿರುತ್ತದೆ. ಯಾರಾದರೂ ಬಂದು ಸಚಿವರನ್ನು ಭೇಟಿ ಮಾಡಿ ಸಾರ್.... ನನ್ನ ಕೆಲಸ ಆಗಿಲ್ಲ ಎಂದರೆ ತಕ್ಷಣ ಜಿಲ್ಲಾಕಾರಿಗೆ ಫೋನ್ ಮಾಡಿ ‘ಏನ್ರಿ ನೀವು ಸರಿಯಾಗಿ ಕೆಲಸ ಮಾಡಲ್ಲ ಜನ ನನ್ನ ಮೇಲೆ ನಂಬಿಕೆ ಕಳೆದುಕೊಳ್ತಿದ್ದಾರೆ. ನನ್ನ ಸರಳತೆಯನ್ನು ನೀವು ದೌರ್ಭಲ್ಯ ಅಂಥ ಭಾವಿಸಬಾರದು’ ಎಂದು ಮತ್ತೊಂದು ಮನವಿ ಮಾಡುತ್ತಾರೆ. ‘ನೋಡ್ರಿ ನನಿಗೆ ಹಣ ಮಾಡುವ ಆಸೆ ಇಲ್ಲ, ಭ್ರಷ್ಟ ರಾಜಕಾರಣಿ ಎಂದು ‘ಕೀರ್ತಿ’ ಪಡೆಯುವ ಹುಮ್ಮಸ್ಸಿಲ್ಲ, ಜಿಲ್ಲೆಯ ಅಭಿವೃದ್ಧಿ ನನ್ನ ಗುರಿ ಎನ್ನುತ್ತಾರೆ. ಆದರೂ ಅವರ ಉಸುವಾರಿ ಜಿಲ್ಲೆ ಭಿವೃದ್ಧಿಯಲ್ಲಿ ಅಷ್ಟಕ್ಕಷ್ಟೆ ಎನ್ನುವುದು ಸ್ಥಳೀಯರ ಮತ್ತು ಪ್ರತಿಪಕ್ಷದವರ ಆರೋಪ. ಸಚಿವರ ಬಳಿ ಅನಗತ್ಯ ಪೊಲೀಸ್ ಪಹರೆ ಇರುವುದಿಲ್ಲ, ಭಟ್ಟಂಗಿಗಳಿಗೆ ಜಾಗವೇ ಇಲ್ಲ, ‘ಹೌದಪ್ಪ’ಗಳು ಹತ್ತುಮಾರು ದೂರ. ರಾಜಕಾರಣಿಗಳು ಎಂದೂ ಒಪ್ಪಲಾಗದ ಸರಳತೆ, ನೇರ ನಡೆ ನುಡಿ ಅವರದು. ಯಾರೇ ಹೋದರೂ ಅವರನ್ನು ನೇರವಾಗಿ ಭೇಟಿಮಾಡಿ ಮಾತನಾಡಬಹುದಾದಷ್ಟು ಪ್ರಜಾಪ್ರಭುತ್ವವಿರುತ್ತದೆ. ಇಲ್ಲಿ ಕೆಲಸ ಕಡಿಮೆ. ಪ್ರಾಮಾಣಿಕತೆ ಜಾಸ್ತಿ!

ಆಹಾರ ಆಮದಿನ ಸಂಕೋಲೆಯಲ್ಲಿ ಭಾರತ

ಈಗ ನಮ್ಮೆದುರು ಎರಡು ಭಾರತಗಳಿವೆ. ಒಂದು ಸಮೃದ್ಧ ಭಾರತ ಅಥವಾ ಶ್ರೀಮಂತ ಭಾರತ. ಇನ್ನೊಂದು ಬಡ ಭಾರತ ಅಥವಾ ಕೊರತೆ ಭಾರತ. ಮೊದಲನೆಯವರಿಗೆ ದೇಶದ ಸಂಪತ್ತು ಮಾತ್ರ ಮುಖ್ಯ. ಪ್ರಾಕೃತಿಕ, ಮಾನವ... ಯಾವುದಾದರೂ ಆಗಬಹುದು. ಎಲ್ಲದೂ ಹಣವಾಗಿಯೇ ಕಾಣುತ್ತದೆ. ಅದೆಲ್ಲವನ್ನೂ ಒಂದೆಡೆ ಸೇರಿಸಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತ, ಭದ್ರಪಡಿಸುತ್ತ ಸಾಗುತ್ತಿದ್ದಾರೆ. ಹಣ ಕ್ರೋಢೀಕರಿಸುವ ಆತುರದಲ್ಲಿ ಅನೇಕ ಕಡೆ ಅವರಿಗೆ ಅವರೇ ಪ್ರತಿರ್ಸ್ಪಗಳಾಗಿದ್ದಾರೆ.
ಎರಡನೆಯದರ ಕಥೆಯೇ ಬೇರೆತೆರನಾದದ್ದು. ಇದು ಸಂಕಟಗಳನ್ನು ಅನುಭವಿಸುತ್ತಲೇ ಅದರೊಂದಿಗೆ ತನ್ನನ್ನು ತಾನು ಒಪ್ಪಿಸಿಕೊಂಡಿದೆ. ಅದೇ ಭಾರತದ ಬಹು ಸಂಖ್ಯಾತ ರೈತ ವರ್ಗ. ಮಳೆ ಬೀಳದಿದ್ದರೆ ಹಸಿದು ಸಾಯುತ್ತದೆ. ಹೆಚ್ಚು ಮಳೆ ಬಿದ್ದರೆ ಕೊಚ್ಚಿಹೋದ ಕನಸುಗಳನ್ನು ನೆನೆದು ಹಳಹಳಿಸುತ್ತದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇದು ನಿರಂತರ ಸವಾಲುಗಳನ್ನು ಎದುರಿಸುತ್ತ ಗೆದ್ದರೆ ಸಾಮ್ರಾಜ್ಯ. ಸೋತರೆ ಸ್ವರ್ಗ ಎಂಬ ಅತಾರ್ಕಿಕಗಳಿಗೆ ತನ್ನನ್ನು ತಾನೇ ಒಡ್ಡಿಕೊಂಡಿದೆ.
ಎಚ್ ೧ ಎನ್ ೧ನಂಥ ಭೀಕರ ಜ್ವರ ಆವರಿಸಿ ದೇಶದ ಜನ ಭಯದಿಂದ ತಲ್ಲಣಿಸುತ್ತಿದ್ದರೆ ಅಂಬಾನಿ ಸೋದರರು ಇಂಧನ ಹಂಚಿಕೆಯ ಕುರಿತು ಸರಕಾರವನ್ನೇ ಹಾವಾಡಿಗರಂತೆ ಆಡಿಸುತ್ತಿದ್ದರು. ಸರಕಾರವೂ ಹಾಗೇ ಆಡುತ್ತಿತ್ತು. ದೇಶದಲ್ಲಿ ಭೀಕರ ಕ್ಷಾಮ ಎದುರಾಗಲಿದೆ. ಮಳೆ ಬೀಳದೆ ಸಾಮಾನ್ಯ ಜನರ ಬದುಕು ದಿವಾಳಿಯಾಗುತ್ತಿದೆ ಎಂಬ ಅವ್ಯಕ್ತ ಭಯದಿಂದ ದೇಶದ ಬಹುಭಾಗದ ಜನರು ಕಂಪಿಸುತ್ತಿದ್ದರೆ ಕೃಷಿ ಸಚಿವರು ವಿದೇಶದಲ್ಲಿ ಕ್ರಿಕೆಟ್ ಮಂಡಳಿ ಸಭೆ ನಡೆಸುತ್ತಿದ್ದರು. ಇಂಥ ವೈರುಧ್ಯಗಳ ನಡುವೆ ದೇಶ ಭೀಕರ ಬರ ಮತ್ತು ಆಹಾರ ಸಮಸ್ಯೆಯಂಥ ಹೊಸ ಸವಾಲು ಎದುರಿಸಲು ಸಿದ್ಧವಾಗಬೇಕಿದೆ.
ಇಂಥ ಏರುಪೇರುಗಳ ಭಾರತವನ್ನು ಕಣ್ಮುಂದೆ ಇಟ್ಟುಕೊಂಡು ನೋಡುವುದಾದರೆ ತಕ್ಷಣ ನಮಗೆ ಎದುರಾಗುವುದು ಕೊರತೆ ಭಾರತವೆ! ಕಾರಣವಿಷ್ಟೆ, ನಮ್ಮ ಬಳಿ ಸಾಕಷ್ಟು ಧಾನ್ಯವಿದೆ. ಸರಿಸುಮಾರು ೩೦ ತಿಂಗಳು ಇಡೀ ದೇಶದ ಜನರ ಹಸಿವು ನೀಗುವಷ್ಟು ಶಕ್ತರಾಗಿದ್ದೇವೆ ಎಂದು ವಿದೇಶದಿಂದ ಹೇಳಿಕೆ ನೀಡಿದ ಕೃಷಿ ಸಚಿವರು ದೇಶಕ್ಕೆ ಮರಳಿದ ನಂತರ ತಮ್ಮ ಹೇಳಿಕೆಯನ್ನು ನಿಧಾನವಾಗಿ ಬದಲಿಸಿದರು. ‘ದೇಶದಲ್ಲಿ ಉತ್ಪಾದನೆ ಕುಂಠಿತಗೊಂಡಿದೆ. ಬೆಲೆ ಏರಿಕೆ ನಿಯಂತ್ರಣ ಕಷ್ಟ’ ಎಂದರು. ಪ್ರಧಾನಿ ಕೂಡಾ ಅದನ್ನೇ ಸಮರ್ಥಿಸಿಕೊಂಡರು. ಅಂದರೆ ನಮ್ಮ ಗೋದಾಮುಗಳು ತುಂಬಿವೆ ಎಂದು ಹೇಳಿದ್ದ ತಮ್ಮ ಮಾತುಗಳು ಉತ್ಪ್ರೇಕ್ಷೆಯಿಂದ ಕೂಡಿದ್ದವು ಎನ್ನುವುನ್ನು ಸಚಿವರು ಪರೋಕ್ಷವಾಗಿ ಒಪ್ಪಿಕೊಂಡಿದ್ದರು.
ಎರಡು ವರ್ಷಗಳ ಹಿಂದೆ ಕೆಲವೇ ಶ್ರೀಮಂತರ ಆದಾಯ ಹೆಚ್ಚಿದ್ದನ್ನು ದೇಶದ ಆದಾಯ ಹೆಚ್ಚಳ ಎಂದು ಬಿಂಬಿಸಲಾಯಿತು. ಕೆಳವರ್ಗ ಮತ್ತು ಮಧ್ಯಮ ವರ್ಗದ ಆರ್ಥಿಕ ಸ್ಥಿತಿ ಸುಧಾರಿಸಿದೆ, ಅವರ ತಲಾ ವರಮಾನ ಹೆಚ್ಚಾಗಿದೆ ಎಂದು ಹೇಳಲಾಯಿತು. ಅರ್ಥಸಚಿವಾಲಯ ಹೇಳಿದ ಪ್ರಮಾಣದಲ್ಲಿ ಈ ಎರಡೂ ವರ್ಗಗಳ ಆರ್ಥಿಕ ಮಟ್ಟ ಸುಧಾರಿಸಿರಲಿಲ್ಲ. ಯಾವುದೋ ಐಟಿ ಬಿಟಿಯಲ್ಲಿ ಕೆಲಸ ಮಾಡುವ ಕೆಲವೇ ಜನರನ್ನು ಪರಿಗಣಿಸಿ ಇಂಥ ಅಸಂಬದ್ಧ ಹೇಳಿಕೆಗಳನ್ನು ನೀಡಲಾಯಿತು. ಆದರೆ ಕೆಳವರ್ಗದ ಜನರ ಬದುಕು ನಿಂತ ಜಾಗದಲ್ಲೇ ಇದ್ದುದನ್ನು ಸರಕಾರದ ಹೇಳಿಕೆಗಳು ಗ್ರಹಿಸಿರಲಿಲ್ಲ. ನಂತರ ಎದುರಾದ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಎಲ್ಲ ವರ್ಗವನ್ನೂ ಬಲಿಪಶು ಮಾಡಲಾಯಿತು.
ಭಾರತದಲ್ಲಿ ಆಹಾರ ಉತ್ಪಾದನೆ ಕುಂಠಿತವಾಗುತ್ತಿರುವ ಬಗ್ಗೆ ಆಹಾರ ಮತ್ತು ಕೃಷಿ ಸಂಘಟನೆ ಸೇರಿದಂತೆ ಅನೇಕ ಸಂಘಟನೆಗಳು ಎಚ್ಚರಿಸುತ್ತಲೇ ಬಂದಿದ್ದವು. ಆದರೂ ಸರಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಬಹಳ ಮುಖ್ಯವಾಗಿ ಸಕ್ಕರೆ ಬೆಲೆ ಹೆಚ್ಚುತ್ತಿದೆ. ಕಾರ್ಖಾನೆಗಳ ದುಸ್ಥಿತಿಯೇ ಇದಕ್ಕೆ ಕಾರಣ. ದೇಶದ ನಾನಾ ಭಾಗದಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯದ ಸ್ಥಿತಿ ತಲುಪಿವೆ. ಶೇ. ೪೫ರಷ್ಟು ಕಬ್ಬು ಬೆಳೆ ಕಡಿಮೆಯಾಗಿದೆ. ಇದು ಉತ್ಪಾದನೆ ಕುಸಿತಕ್ಕೆ ಕಾರಣವಾಗಲಿದೆ ಎಂಬುದನ್ನು ಮೂರು ವರ್ಷಗಳ ಹಿಂದೆಯೇ ತಿಳಿಸಿದ್ದವು. ಆದರೂ ಕಬ್ಬು ಬೆಳೆಗಾರರನ್ನು ಪ್ರೋತ್ಸಾಹಿಸುವಂಥ ಯೋಜನೆಗಳನ್ನು ರೂಪಿಸಲು ರಾಜ್ಯ, ಕೇಂದ್ರ ಸರಕಾರ ಮುಂದಾಗಲಿಲ್ಲ. ಇದೇ ಸಂದರ್ಭದಲ್ಲಿ ಖಾಸಗಿ ಕಾರ್ಖಾನೆಗಳು ರೈತರನ್ನು ಗುಲಾಮರಂತೆ ಕಾಣುವುದು ಮತ್ತು ಸಮಯಕ್ಕೆ ಸರಿಯಾಗಿ ಹಣ ಪಾವತಿಸದೇ ಅಲೆದಾಡಿಸಿದವು ಇಂಥ ಹೀನ ಸ್ಥಿತಿಯಿಂದ ಬೇಸತ್ತ ರೈತರು ಕಬ್ಬು ಬೆಳೆಯುವುದನ್ನೇ ನಿಲ್ಲಿಸಿದರು.
ದೇಶದಲ್ಲಿ ೨೦೬ ಸಕ್ಕರೆ ಕಾರ್ಖಾನೆಗಳು ರೋಗಗ್ರಸ್ತವಾಗಿವೆ. ಅದರಲ್ಲಿ ೬೧ ಖಾಸಗಿಯವು ೧೪೫ ಸಹಕಾರ ವಲಯಕ್ಕೆ ಸೇರಿದವು. ಅವುಗಳಲ್ಲಿ ಕರ್ನಾಟಕದ ೨೨ ಸೇರಿವೆ. ಅವೆಲ್ಲ ರಾಜಕೀಯ ನಾಯಕರ ಒಡೆತನದಲ್ಲಿವೆ. ಇವು ನಮ್ಮ ಅಭಿವೃದ್ಧಿಯ ಪಾಠ ಹೇಳುವವರು ಮಾಡಿದ ಘನಕಾರ್ಯಗಳು. ಇದರಿಂದಾಗಿ ಕೇವಲ ಎರಡು ವರ್ಷದ ಹಿಂದೆ ೧೬ ರೂ. ಇದ್ದ ಕೆ.ಜಿ. ಸಕ್ಕರೆ ಬೆಲೆ ಇಂದು ೩೩ ರೂಪಾಯಿಗೇರಿದೆ. ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದರಿಂದ ಭಾರತ ಈಗ ೩೦ ಲಕ್ಷಕ್ಕೂ ಹೆಚ್ಚು ಟನ್ ಸಕ್ಕರೆಯನ್ನು ಆಮದು ಮಾಡಿಕೊಳ್ಳುವ ಅನಿವಾರ್ಯತೆಗೆ ಸಿಲುಕಿಹಾಕಿದೆ. ಈ ಮಟ್ಟದಲ್ಲಿ ಭಾರತ ಎಂದೂ ಸಕ್ಕರೆ ಆಮದು ಮಾಡಿಕೊಂಡಿರಲಿಲ್ಲ. ಬೆಲೆಯೂ ಕೂಡ ೨೮ ವರ್ಷಗಳಲ್ಲಿ ಇದೇ ಮೊದಲು ದಾಖಲೆ ಪ್ರಮಾಣದಲ್ಲಿ ಏರಿದೆ.
ಸಕ್ಕರೆ ಇಲ್ಲಿ ಉದಾಹರಣೆಯಷ್ಟೆ. ಪ್ರತಿಯೊಂದೂ ಆಮದಾಗಲೇಬೇಕಾಗಿದೆ. ಅಕ್ಕಿ, ಬೇಳೆ, ಗೋ ಯಾವುದೂ ದೇಶದ ಬರ ಪರಿಸ್ಥಿತಿ ಎದುರಿಸುವಷ್ಟು ದಾಸ್ತಾನಿಲ್ಲ ಎನ್ನುವುದನ್ನು ಸರಕಾರಗಳು ಒಪ್ಪಲು ಸಿದ್ಧವಿಲ್ಲದ ಕಾರಣ ಒಂದೊಂದಾಗಿ ಬಯಲಾಗುತ್ತಿವೆ. ಒಂದು ದಶಕದಿಂದ ಉತ್ಪಾದನೆ ಪ್ರಮಾಣ ಏರಿಕೆಯಾಗದಿರುವುರಿಂದ ಈಗ ಬೇಡಿಕೆ ಮತ್ತು ಪೂರೈಕೆ ನಡುವೆ ಕಂದರ ಸೃಷ್ಟಿಯಾಗಿದೆ. ಜಗತ್ತಿನ ಅಕ್ಕಿ ಕಣಜ ಎಂದೇ ಹೆಸರಾಗಿರುವ ಥಾಯ್ಲೆಂಡ್, ವಿಯೆಟ್ನಾಂಗಳಿಂದ ಅಕ್ಕಿ ಆಮದಿಗೆ ಈಗ ಹಲವಾರು ಅಡೆತಡೆಗಳು ಎದುರಾವೆ. ಭಾರತ ಅಕ್ಕಿ ಆಮದಿಗೆ ಮುಂದಾಗುತ್ತಿದ್ದಂತೆಯೇ ಆ ದೇಶಗಳು ರಫ್ತು ನೀತಿಗಳಲ್ಲಿ ಬದಲಾವಣೆ ಮಾಡಿಕೊಂಡಿವೆ. ಇದು ಭಾರತಕ್ಕೆ ಸಂಕಷ್ಟದ ಸ್ಥಿತಿ ತಂದೊಡ್ಡಿದೆ. ಆಮದು ಬೆಲೆ ಹೆಚ್ಚಾಗಿರುವುದರಿಂದ ಅದನ್ನು ಭಾರತದಲ್ಲಿ ಈಗಿರುವ ಬೆಲೆಯಲ್ಲಿ ವಿತರಿಸಲು ಸಾಧ್ಯವಿಲ್ಲ ಎಂದು ಸರಕಾರಗಳೇ ಹೇಳುತ್ತಿವೆ. ದೇಶದ ಶೇಕಡ ೬೫ ಜನರ ಆಹಾರವಾಗಿರುವ ಅಕ್ಕಿ ಇಂದು ಕೊರತೆಯಾಗಿದೆ. ಚೀನಾ ಹೊರತುಪಡಿಸಿದರೆ ಭಾರತವೇ ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ದೇಶ. ಭಾರತದಲ್ಲಿ ವಾರ್ಷಿಕ ೮೫ರಿಂದ ೯೦ ಮಿಲಯನ್ ಟನ್ ಅಕ್ಕಿ ಉತ್ಪಾದನೆಯಾಗುತ್ತಿತ್ತು ಅದರಲ್ಲಿ ಕರ್ನಾಟಕದ ಪಾಲು ೪೦ ಮಿಲಿಯನ್ ಟನ್. ಪ್ರಸಕ್ತ ಸಾಲಿನಲ್ಲಿ ಉತ್ತರದ ರಾಜ್ಯಗಳಲ್ಲಿ ತೀವ್ರ ಮಳೆ ಕೊರತೆಯಿಂದ ನಿರೀಕ್ಷಿತ ಉತ್ಪಾದನೆ ಸಾಧ್ಯವಿಲ್ಲ.
ಬೇಳೆಯಂತೂ ಅನೇಕ ರೀತಿಯ ಅಡೆತಡೆಯನ್ನು ಎದುರಿಸುತ್ತಿದೆ. ನಮ್ಮ ಗುಲ್ಬರ್ಗದ ರೈತರು ತೊಗರಿ ಬೆಳೆದು ಬೆಲೆ ಸಿಗದೆ ಆತ್ಮಹತ್ಯೆ ಮಾಡಿಕೊಂಡರು. ಆದರೆ ಅವರ ಬದುಕು ಸುಧಾರಿಸಲಿಲ್ಲ. ಅಲ್ಲಿ ಸ್ಥಾಪಿಸಿರುವ ತೊಗರಿ ಮಂಡಳಿ ಕೂಡಾ ನಾಮಕಾವಸ್ತೆಯಾಗಿದೆ. ಸರಕಾರ ಕ್ವಿಂಟಾಲಿಗೆ ೧೮೦೦ರೂ. ಬೆಂಬಲ ಬೆಲೆ ನೀಡುತ್ತಿದೆ ಆದರೆ ೩೦೦೦ ರೂ. ಕೊಡಿ ಎಂಬ ರೈತರ ಒತ್ತಾಯಕ್ಕೆ ಮಾನ್ಯತೆ ಸಿಕ್ಕಿಲ್ಲ. ಆದರೆ ಮಾರುಕಟ್ಟೆಯಲ್ಲಿ ಬೆಲೆ, ಕ್ವಿಂಟಾಲ್ ಬೇಳೆಗೆ ೯.೫೦೦ರಿಂದ ೧೦,೦೦೦ ವರೆಗೆ ಇದೆ.ಬೆಳೆಯುವವರು ಮತ್ತು ಬಳಕೆದಾರರ ನಡುವೆ ಇರುವ ಇಷ್ಟು ದೊಡ್ಡ ಮಟ್ಟದ ಹಣ ದಲ್ಲಾಳಿಗಳ ಪಾಲಾಗುತ್ತಿದೆ. ಇಂಥ ಮಾರುಕಟ್ಟೆಯ ಅವಾಂತರಗಳನ್ನು ಅರ್ಥಮಾಡಿಕೊಳ್ಳಲಾಗದ ರೈತರು ಕೃಷಿಯನ್ನೇ ನಿರಾಕರಿಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದ ಪರಿಸ್ಥತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಈಗ ಬೇಳೆ ಬೆಲೆ ಗಗನಕ್ಕೇರುತ್ತಿದ್ದಂತಯೇ ಬೆಳೆಗಾರನತ್ತ ಎಲ್ಲರೂ ದೃಷ್ಟಿ ನೆಟ್ಟಿದ್ದಾರೆ. ಅನೇಕ ವರ್ಷಗಳಿಂದ ಭಾರತ ಬೇಳೆ ಆಮದನ್ನೇ ನೆಚ್ಚಿಕೊಂಡಿದೆ. ಪ್ರಸಕ್ತ ವರ್ಷ ಅದು ಹಿಂದೆಂದಿಗಿಂತ ಹೆಚ್ಚಾಗುವ ಸೂಚನೆಗಳು ಕಾಣುತ್ತಿವೆ. ಕಳೆದ ವರ್ಷ ೨೫ ಲಕ್ಷ ಟನ್ ಬೇಳೆ ಆಮದು ಮಾಡಿಕೊಳ್ಳಲಾಗಿತ್ತು.
ಭಾರತಕ್ಕೆ ಬೇಳೆ ಪೂರೈಸುವ ಪ್ರಮುಖ ರಾಷ್ಟ್ರಗಳಾದ ಕೆನಡಾ, ಆಸ್ಟ್ರೇಲಿಯಾ, ಮ್ಯಾನ್ಮಾರ್ ಮತ್ತು ಟರ್ಕಿಯಲ್ಲೇ ಈ ಬಾರಿ ಬೇಳೆ ಬೆಲೆ ಗಗನಕ್ಕೇರಿದೆ. ಕಾರಣ ಜಾಗತಿಕ ಮಟ್ಟದಲ್ಲಿ ಬೇಳೆ ಉತ್ಪಾದನೆ ೫೬ ದಶಲಕ್ಷ ಟನ್ ಕುಸಿದಿದೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಜಾಗತಿಕ ಮಟ್ಟದಲ್ಲಿ ಆಹಾರ ಉತ್ಪಾದನೆ ಪ್ರಮಾಣ ಕುಸಿದಿರುವುದು ಮನವರಿಕೆಯಾಗುತ್ತದೆ. ಆಮದು ಮಾಡಿಕೊಂಡ ಧಾನ್ಯ ಖರೀದಿಸುವಷ್ಟು ಶಕ್ತರಾಗಿ ಭಾರತೀಯರಿಲ್ಲ. ಭಾರತದಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚುತ್ತಿಲ್ಲ. ಇದರಿಂದ ಇಡೀ ದೇಶವೇ ಇಂದು ಆಹಾರ ಆಮದಿನ ಸಂಕೋಲೆಯಲ್ಲಿ ಸಿಲುಕುತ್ತಿದೆ. ಮೊದಲೇ ಹೇಳಿದಂತೆ ಭಾರತದ ಶ್ರೀಮಂತ ವರ್ಗಕ್ಕೆ ಇದರ ಸಮಸ್ಯೆಗಳು ಗೊತ್ತಾಗುತ್ತಿಲ್ಲ. ಬಡವರು ತುತ್ತಿನ ಚೀಲ ತುಂಬಲಾಗದೆ ತತ್ತರಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಹಳ್ಳಿಗಳು ಖಾಲಿಯಾಗಿ, ನಗರಗಳು ವಿಸ್ತರಿಸುತ್ತ, ತುಂಬಿ ತುಳುಕುತ್ತಿವೆ. ಇಂಥ ಅಸಮಾನತೆಗಳ ನಿವಾರಣೆಗೆ ಮಾರ್ಗಗಳನ್ನು ಕಂಡುಕೊಳ್ಳದಿದ್ದರೆ, ನಗರ ಮತ್ತು ಗ್ರಾಮಗಳ ನಡುವಿನ ತಾರತಮ್ಯ ಮತ್ತಷ್ಟು ಹೆಚ್ಚಿ ಭವಿಷ್ಯದಲ್ಲಿ ಭಾರತ ಆಹಾರ ಮಾತ್ರವಲ್ಲ ಸಾಮಾಜಿಕ ಸವಾಲುಗಳನ್ನೂ ಎದುರಿಸಬೇಕಾಗುತ್ತದೆ.

ಇದು ಸಾಧನೆಯ ಮಾತಲ್ಲ, ಮಾತುಗಳ ಸಾಧನೆ!

‘ನನಗೆ ಈ ಅಕಾರ ಕೊಟ್ಟಿದ್ದೇ ಹಸಿರು ಶಾಲು, ನಾನೂ ನಿಮ್ಮವನೇ, ನಾನೂ ರೈತನ ಮಗ’ ಎಂದು ಮುಖ್ಯಮಂತ್ರಿಯಾಗಿ ಅಕಾರ ಸ್ವೀಕರಿಸಿದ ದಿನ ರಾಮಕೃಷ್ಣ ಹೆಗಡೆ ಹೆಗಲ ಮೇಲೆ ಹೊದ್ದಿದ್ದ ಹಸಿರು ಶಾಲು ತೋರಿಸಿ ಹೇಳಿದ್ದರು. ಅದು ಅಕ್ಷರಶಃ ನಿಜವಾಗಿತ್ತು. ಕಾಂಗ್ರೆಸ್‌ನ ದುರಾಡಳಿತದಿಂದ ಬೇಸತ್ತಿದ್ದ ಜನತೆ ಕಾಂಗ್ರೆಸೇತರ ಸರಕಾರಕ್ಕಾಗಿ ಹಾತೊರೆಯುತ್ತಿದ್ದಾಗ ಜನಪರ, ಪ್ರಗತಿಪರ, ಸಮಾಜವಾದದ ಲೇಬಲ್ ಅಂಟಿಸಿಕೊಂಡಿದ್ದ ಜನತಾ ದಳವನ್ನು ರೈತ ಸಂಘ ಸೇರಿದಂತೆ ಎಲ್ಲರೂ ಬೆಂಬಲಿಸಿದ್ದರು. ಬಹಳ ಮುಖ್ಯವಾಗಿ ರಾಜ್ಯದಲ್ಲಿ ಬಹಳ ಬಲಿಷ್ಠವಾಗಿದ್ದ ರೈತ ಸಂಘ ರಾಜಕಾರಣಿಗಳ ಬಣ್ಣದ ಮಾತಿನ ಮರ್ಮ ಅರಿಯದೆ ಕಾಯಾ ವಾಚಾ ಮನಸಾ ಜನತಾ ದಳವನ್ನು ಬೆಂಬಲಿಸಿತ್ತು. ಹೆಗಡೆ ಹೇಳಿದ ಅಕಾರ ನೀಡಿದ ಮಾತು ನಿಜವಾಗಿತ್ತಾದರೂ ಅದರ ಹಿಂದೆ ಇದ್ದ ಇನ್ನೊಂದು ನಿಜವೆಂದರೆ ಅವರು ಮುಖ್ಯಮಂತ್ರಿಯಾದ ನಂತರ ಸರಕಾರವನ್ನು ಪ್ರಶ್ನಿಸುವ ರೈತ ಶಕ್ತಿಯನ್ನು ಸಹಿಸಲಿಲ್ಲ. ಆಗ ಹೆಗಡೆಯವರಲ್ಲಿದ್ದ ಪ್ರಭುತ್ವದ ದಬ್ಬಾಳಿಕೆಯ ಮನಸ್ಥಿತಿ ಜಾಗೃತವಾಯಿತು. ರಾಜ್ಯದಲ್ಲಿ ರೈತ ಸಂಘಟನೆಯನ್ನು ಬಗ್ಗುಬಡಿಯಲು ಮುಂದಾಯಿತು. ರೈತ ನಾಯಕರನ್ನು ಕಂಡಲ್ಲಿ ಬಂಸಲು ಹೆಗಡೆ ಸಂಚು ರೂಪಿಸಿ ರೈತ ಚಳವಳಿಯನ್ನೇ ನಾಶ ಮಾಡಲು ಮುಂದಾದದ್ದು ಚರಿತ್ರೆಯ ಕರಾಳ ಅಧ್ಯಾಯ. ಅವರ ಇಂಥ ಗೋಮುಖ ವ್ಯಾಘ್ರಬುದ್ಧಿಯನ್ನು ಗಮನಿಸಿದ ರೈತರು ‘ಗುಳ್ಳೆ ನರಿ ಹೆಗಡೆ’ ಎಂದು ಬಿರುದು ನೀಡಿದ್ದರು.
ಈಗ ಅದೇ ದಾರಿಯಲ್ಲಿ ನಿಂತಂತೆ ಕಾಣುತ್ತಿದ್ದಾರೆ ಮುಖ್ಯಮಂತ್ರಿ ಬಿ ಎಸ್. ಯಡಿಯೂರಪ್ಪ. ಕರ್ನಾಟಕ ರಾಜ್ಯ ರೈತ ಸಂಘದ ಲಾಂಛನವಾದ ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿ, ಈಗ ಅದೊಂದೇ ಕಾರಣಕ್ಕೆ ಪ್ರತಿಪಕ್ಷಗಳು ಸೇರಿದಂತೆ ಎಲ್ಲರ ಟೀಕೆಗೆ ಒಳಗಾಗುತ್ತಿದ್ದಾರೆ. ಅಕಾರದಿಂದ ಏನನ್ನಾದರೂ ಸಾಸಿಬಿಡಬಲ್ಲೆ ಎಂಬ ಮನಸ್ಥಿತಿಯಲ್ಲಿದ್ದ ಯಡಿಯೂರಪ್ಪ ಈಗ ತಾವೇ ಸೃಷ್ಟಿಸಿಕೊಂಡಿರುವ ವರ್ತುಲದಲ್ಲಿ ನಿಂತಿದ್ದಾರೆ. ಆರಂಭದಲ್ಲಿ ರೈತ ಮುಖಂಡರ ಸಭೆ ಕರೆದು ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿ ಚಳವಳಿಯನ್ನು ತಾತ್ಕಾಲಿಕವಾಗಿ ತಡೆದದ್ದನ್ನು ಬಿಟ್ಟರೆ ಅದೂ ಒಂದು ಚುನಾವಣೆ ಪ್ರಣಾಳಿಕೆಯಂತೆ ಕಾಣತೊಡಗಿದೆ.
ಕಳೆದ ವರ್ಷ ಹಾವೇರಿಯಲ್ಲಿ ಗೊಬ್ಬರಕ್ಕಾಗಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ಹಾರಿಸಿದ ಗುಂಡಿಗೆ ಇಬ್ಬರು ರೈತರು ಬಲಿಯಾಗಿದ್ದರು. ಆಗ ಕರ್ನಾಟಕದಲ್ಲಿ ಕಂಡು ಬಂದ ರಾಜಕೀಯ ಮೇಲಾಟಗಳು ಎಣಿಸಲಸಾಧ್ಯ. ಸಮರ್ಪಕವಾಗಿ ಗೊಬ್ಬರ ಪೂರೈಸಲಾಗದ, ಅಕಾರಿ ವರ್ಗವನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಾಗದ ಸರಕಾರ ಹಿಂದಿನ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದಿಂದ ಗೊಬ್ಬರದ ಅಭಾವ ಉಂಟಾಗಿದ್ದು, ಇದಕ್ಕೆ ಸೂಕ್ತ ಪರಿಹಾರ ಕಂಡುಹಿಡಿಯುವುದಾಗಿ ಹೇಳಿ ಎದುರಾಗಬಹುದಾಗಿದ್ದ ಸಮಸ್ಯೆಯಿಂದ ನುಣುಚಿಕೊಂಡಿತ್ತು. ಸಂವೇದನೆಯಿರುವ ಸರಕಾರವಾಗಿದ್ದರೆ ಗೋಲಿಬಾರ್‌ನಿಂದ ಪಾಠ ಕಲಿತು ತಕ್ಷಣ ಸೂಕ್ತ ಪರಿಹಾರ ಕಂಡುಕೊಳ್ಳ ಬೇಕಾಗಿತ್ತು ಹಾಗಾಗಲಿಲ್ಲ, ಸರಕಾರ ಈಗ ಮತ್ತೊಂದು ಸಮಸ್ಯೆಗೆ ರೈತರನ್ನು ಸಿಕ್ಕಿಸಿ ಕಣ್ ಕಣ್ ಬಿಡತೊಡಗಿದೆ. ಕಳೆದ ವರ್ಷದಂತೆ ರಾಜ್ಯದ ಅನೇಕ ಕಡೆ ಗೊಬ್ಬರ ಮತ್ತು ಬಿತ್ತನೆ ಬೀಜದ ಸಮಸ್ಯೆ ಮರುಕಳಿಸಿದೆ. ಇದನ್ನು ಗಮನಿಸಯೇ ನಾಲ್ಕು ತಿಂಗಳ ಹಿಂದಿನಿಂದಲೇ ಮಾಧ್ಯಮಗಳು ಎಚ್ಚರಿಸುತ್ತ ಬಂದಿದ್ದವು. ಲೋಕಸಭೆ ಚುನಾವಣೆಯಲ್ಲಿ ಮಗ್ನವಾದ ಸರಕಾರ ಮತ್ತು ಅಕಾರಿವರ್ಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೇ ಇದ್ದುದರಿಂದ ಮತ್ತೊಮ್ಮೆ ಸಮಸ್ಯೆ ಬೃಹದಾಕಾರವಾಗಿ ಬೆಳೆದು ಬಿಂತಿದೆ. ಈ ಬಾರಿ ಗೊಬ್ಬರ ಮತ್ತು ಬಿತ್ತನೆ ಬೀಜಕ್ಕೆ ತೊಂದರೆಯಾಗದಂತೆ ಎಲ್ಲ ಏರ್ಪಾಡು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹಾವೇರಿಯಲ್ಲಿ ಹೇಳಿ ಇನ್ನೂ ಅವರು ಬೆಂಗಳೂರು ತಲುಪಿದ್ದರೋ ಇಲ್ಲವೊ, ಅಷ್ಟೊತ್ತಿಗಾಗಲೇ ಅದೇ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಗೊಬ್ಬರ ಮತ್ತು ಬೀಜಕ್ಕಾಗಿ ರೈತರು ಪ್ರತಿಭಟನೆ ನಡೆಸಿದ್ದರು. ಇದು ಸರಕಾರಕ್ಕೆ ರೈತರ ಮೇಲೆ ಇರುವ ನಿರ್ಲಕ್ಷ್ಯ ಪ್ರತಿಫಲನ.
ಆಳುವವರಿಗೆ ಅಕಾರಿ ವರ್ಗದ ಮೇಲೆ ಹಿಡಿತವಿಲ್ಲದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಇದಕ್ಕಿಂತ ಇನ್ನೊಂದು ಉದಾಹರಣೆ ಬೇಕಿಲ್ಲ. ಹಾವೇರಿಯಲ್ಲಿ ಗೋಲಿಬಾರ್ ನಡೆದಾಗ ಮೃತಪಟ್ಟ ರೈತರ ಮನೆಗೆ ಹತ್ತಿಳಿಯದ ‘ರಾಜಕೀಯ ಮಣ್ಣಿನ ಮಕ್ಕಳೇ’ ಇಲ್ಲ. ಎಲ್ಲರೂ ಒಂದೊಂದು ಬಾರಿ ಅವರ ಮನೆಗೆ ಹೋಗಿ ಅತ್ತು ಬಂದರು. ಮೃತರ ವಾರ್ಷಿಕ ಶ್ರದ್ಧಾಂಜಲಿ ಎನ್ನುವಂತೆ ಮತ್ತೆ ಅನ್ನದಾತ ಹಳೇ ಸಮಸ್ಯೆಯಲ್ಲಿ ಸಿಕ್ಕಿಕೊಂಡಿದ್ದಾನೆ. ಎಲ್ಲರೂ ರೈತರ ಪರವಾಗಿ ಮಾತನಾಡಿದರೂ ಅವರ ಸಮಸ್ಯೆಗಳಿಗೆ ಪರಿಹಾರ ಮಾತ್ರ ದೊರೆಯುತ್ತಿಲ್ಲ. ಆದ್ದರಿಂದ ಈ ಹೇಳಿಕೆಗಳ ನಿಜಾಂಶ ಬಯಲಾಗುತ್ತದೆ. ಇಷ್ಟು ಮಾತ್ರವಲ್ಲ ಬೀಜ, ಗೊಬ್ಬರ ಸಾಕಷ್ಟು ದಾಸ್ತಾನಿದೆ ಎಂದು ಹೇಳುವ ಸರಕಾರ ಅದು ಎಲ್ಲಿದೆ ಎಂದು ಹೇಳುತ್ತಿಲ್ಲ. ಅದನ್ನು ವಿತರಿಸಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವುದಿಲ್ಲ. ಇದಕ್ಕೆ ಕಾರಣ ದಾಸ್ತಾ ನಿರುವುದು ಸರಕಾರದ ಬಳಿಯಲ್ಲ, ಶ್ರೀಮಂತರ ಗೋದಾಮುಗಳಲ್ಲಿ! ಸಬ್ಸಿಡಿ ನೀಡುವುದಿರಲಿ ನಿಗದಿತ ಬೆಲೆಗಿಂತ ನೂರಾರು ರೂಪಾಯಿ ಹೆಚ್ಚು ಹಣ ಪೀಕುವ ಶ್ರೀಮಂತ ಕುಳಗಳು ಇತ್ತೀಚೆಗೆ ರಾಣೆಬೆನ್ನೂರಿನಲ್ಲಿ ‘ನಮ್ಮ ಬೆಲೆ ಇಷ್ಟೇ ಬೇಕಿದ್ದರೆ ತಗೊಳ್ರಯ್ಯ ಬೇಡವಾದ್ರೆ ಹೋಗ್ರಿ’ ಎಂದು ತಮ್ಮ ವ್ಯಾಪಾರಿ ಬುದ್ಧಿ ಪ್ರದರ್ಶಿಸಿದ್ದರಿಂದ ರೊಚ್ಚಿಗೆದ್ದ ರೈತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದರು.
ಎಲ್ಲವೂ ಸರಿ ಇದೆ ಎಂದು ಸರಕಾರ ಹೇಳುತ್ತಿದೆ ಆದರೆ ಯಾವುದೂ ಸರಿ ಇಲ್ಲ ಎನ್ನುವುದೇ ವಾಸ್ತವ. ಇಂಥ ದ್ವಂದ್ವಗಳಿಂದ ರೈತರನ್ನು ಪಾರುಮಾಡಲು ಹಾವೇರಿ ಜಿಲ್ಲಾಕಾರಿ ಕರೆದಿದ್ದ ಸಭೆಯಲ್ಲಿ ‘ವ್ಯಾಪಾರಿಗಳ ಧ್ವನಿಯೇ ಹೆಚ್ಚಾಗಿತ್ತು, ಅವರ ಅಬ್ಬರದಲ್ಲಿ ರೈತರ ಧ್ವನಿ ಕ್ಷೀಣಿಸಿತ್ತು’ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅದೂ ಅಲ್ಲದೆ ರೈತರಿಗೆ ವಂಚಿಸಿದ ಅಂಗಡಿಗಳ ಪರವಾನಗಿ ರದ್ದುಮಾಡಲು ಜಿಲ್ಲಾಕಾರಿ ಮುಂದಾದಾಗ ಅಂಥ ಕ್ರಮಕ್ಕೆ ಮುಂದಾಗದಂತೆ ಸ್ಥಳೀಯ ಶಾಸಕರು ಮತ್ತು ಜನಪ್ರತಿನಿಗಳು ಡಿಸಿ ಮೇಲೆ ಒತ್ತಡ ತಂದಿದ್ದರು. ಅಂದರೆ ಆಳುವವರ ಚಿತ್ತ ರೈತಪರವಾಗಿದೆಯೇ ಅಥವಾ ಬಂಡವಾಳಶಾಹಿಗಳ ಪರವಾಗಿದೆಯೇ ಎನ್ನುವುದನ್ನು ಇದು ತೋರುತ್ತದೆ. ಸರಕಾರಗಳನ್ನೇ ಆಟವಾಡಿಸುವ ಶಕ್ತ ಬಂಡವಾಳ ಶಾಹಿಗಳು ರೈತರನ್ನು ಆಡಿಸದೇ ಬಿಟ್ಟಾರೆಯೇ ಎಂಬ ಸಣ್ಣ ಅರಿವು ಇದ್ದರೂ ಸರಕಾರ ಬೀಜ ಮತ್ತು ಗೊಬ್ಬರವನ್ನು ನೇರವಾಗಿ ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡಬಹುದಾಗಿತ್ತು. ಇಂಥ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲಾಗದ ಸರಕಾರ ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಇಷ್ಟ ಎನ್ನುವಂತೆ ಶ್ರೀಮಂತರ ಪ್ರೀತಿಯನ್ನು ರೈತರ ವೋಟನ್ನೂ ಕಳೆದುಕೊಳ್ಳಲು ಇಚ್ಛಿಸುತ್ತಿಲ್ಲ ಸರಕಾರಕ್ಕೆ ರೈತರ ಮೇಲೆ ಇರುವ ಪ್ರೀತಿ ಢೋಂಗಿತನದ್ದು ಎನ್ನದೆ ಬೇರೆ ದಾರಿಯೇ ಇಲ್ಲ.
ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬು ಅರೆದು ತಿಂದಿವೆ ಬಾಕಿ ಪಾವತಿಸಿಲ್ಲ. ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ಮುಸುಕಿನ ಜೋಳ ಖರೀದಿಸಿರುವ ಸರಕಾರವೇ ಅನೇಕ ಕಡೆ ಸರಕಾರವೇ ರೈತರಿಗೆ ಹಣ ಸಂದಾಯ ಮಾಡಿಲ್ಲ. ಬಿತ್ತಲು ಬೀಜವಿಲ್ಲ. ಎಲ್ಲವೂ ಇದ್ದರೆ ಮಳೆ ಇಲ್ಲ. ಮಳೆಯಾದರೆ ಉತ್ತಮ ಬೆಲೆ ಇಲ್ಲ.... ಹೀಗೆ ಒಂದಲ್ಲ ಒಂದು ಸಮಸ್ಯೆಯ ಸುಳಿಯಲ್ಲಿ ರಾಜ್ಯದ ಕೃಷಿ ಕ್ಷೇತ್ರ ನಲುಗುತ್ತಿದೆ ಗ್ರಾಮ ಸಹಾಯಕರಿಂದ ಹಿಡಿದು ತಹಸೀಲ್ದಾರ್‌ವರೆಗೆ ಬೃಹತ್ತಾದ ಕಂದಾಯ ಇಲಾಖೆ, ಕೃಷಿ ಇಲಾಖೆ, ಕೃಷಿ ಸಲಹಾ ಕೇಂದ್ರಗಳಿವೆ. ಇದು ಸಾಲದಿದ್ದರೆ ಇಡೀ ಆಡಳಿತಯಂತ್ರವನ್ನೇ ಬಳಸಿಕೊಂಡು ಸರಕಾರ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ವಿತರಿಸಬಹುದು. ಅದನ್ನು ಬಿಟ್ಟು ಖಾಸಗಿಯವರಿಗೆ ಹಗ್ಗ ಕೊಟ್ಟು ಕೈಕಟ್ಟಿಸಿಕೊಂಡು ಈಗ ಸಬೂಬು ಹೇಳಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ನಮಗೆ ವರ್ಷಕ್ಕೆ ಎಷ್ಟು ಗೊಬ್ಬರ, ಬೀಜ ಬೇಕು ಎನ್ನುವ ಅಂದಾಜು ಪಟ್ಟಿ ಸರಕಾರದ ಮುಂದಿದ್ದರೂ ಇಂಥ ಗೊಂದಲಗಳಿಗೆ ಕಾರಣ ಶ್ರೀಮಂತರ ಗೋದಾಮುಗಳಲ್ಲಿ ಅವು ಬಂಯಾಗಿರುವುದು. ಆದ್ದರಿಂದ ತುಂಬ ಅಗತ್ಯ ವಸ್ತುಗಳನ್ನು ಸರಕಾರ ಖಾಸಗಿ ಆಡಳಿತಕ್ಕೆ ನೀಡದೇ ನೇರವಾಗಿ ವಿತರಿಸುವ ಧೈರ್ಯ ತೋರಿದರೆ ಇಂಥ ಅವಘಡಗಳು ನಡೆಯ ದಂತೆ ತಡೆಯಬಹುದು. ಬಹಳ ಮುಖ್ಯವಾಗಿ ಕಂಪನಿ ಬೀಜಗಳ ವಿಷಯದಲ್ಲಿ ಸರಕಾರ ರೈತರನ್ನು ಎಚ್ಚರಿಸಬೇಕಿದೆ. ರಾಸಾಯನಿಕ ಕೃಷಿಯಿಂದ ಆಗುತ್ತಿರುವ ನಷ್ಟದ ಬಗ್ಗೆಯೂ ಜಾಗೃತಿ ಮೂಡಿಸಬೇಕಾಗಿದೆ. ರೈತರು ತಮ್ಮ ಹೊಲದಲ್ಲೇ ಬೆಳೆದ ಬೆಳೆಯಲ್ಲೇ ಬೀಜ ತಯಾರಿಸಿ ಸಮೃದ್ಧ ಕೃಷಿ ಮಾಡಿದ ಇತಿಹಾಸವನ್ನು ಮನವರಿಕೆ ಮಾಡಿ, ಪಾರಂಪರಿಕ ಮತ್ತು ಸಮೃದ್ಧ ಕೃಷಿಗೆ ಮುಂದಾಗಬೇಕಾಗಿದೆ ಇದರಿಂದ ರೈತರಿಗೆ ಪರಾವಲಂಬಿ ಬದುಕು ತಪ್ಪುವುದರ ಜತೆಗೆ ನಮ್ಮ ಪರಂಪರೆಯನ್ನು ಮುಂದುವರಿಸಲು ಸಹಕಾರಿಯಾಗುತ್ತದೆ. ಇಲ್ಲದಿದ್ದರೆ ಗೋಲಿಬಾರ್ ಎನ್ನುವುದು ಮಕ್ಕಳು ಸಿಡಿಸುವ ಪಟಾಕಿಯಾಗುತ್ತದೆ. ಆತ್ಮಹತ್ಯೆ ಎನ್ನುವುದು ಸಮೂಹ ಸನ್ನಿಯಾಗುತ್ತದೆ. ಎಲ್ಲ ಸರಕಾರಗಳಂತೆ ಬಿಜೆಪಿ ಸರಕಾರವೂ ತನ್ನ ವಾರ್ಷಿಕ ಸಾಧನೆಯ ಸಮಾವೇಶವನ್ನು ಆಚರಿಸಿಕೊಂಡಿದೆ. ಇಲ್ಲಿ ಸಾಧನೆ ಮಾತಾಡುತ್ತಿಲ್ಲ, ಮಾತುಗಳೇ ಸಾಧನೆಯಾಗಿ ಕಾಣುತ್ತಿವೆ.